ಪಂಚ ಗ್ಯಾರಂಟಿ ಯೋಜನೆ ತರಲು ನಾನೇ ಮೂಲ ಕಾರಣ  : ಸಿಎಂ ಡಿಕೆ ಶಿ – vishwanews24

Featured, ರಾಜ್ಯ ನ್ಯೂಸ್

 ಪಂಚ ಗ್ಯಾರಂಟಿ ಯೋಜನೆ ತರಲು ನಾನೇ ಮೂಲ ಕಾರಣ  : ಸಿಎಂ ಡಿಕೆ ಶಿ

ಬೆಂಗಳೂರು: ಪಂಚ ಗ್ಯಾರಂಟಿ ಯೋಜನೆಗಳನ್ನು ತಂದಿದ್ದು ನನ್ನ ಅಧ್ಯಕ್ಷತೆಯಲ್ಲಿ. ಪಂಚ ಗ್ಯಾರಂಟಿ ಯೋಜನೆ ತರಲು ನಾನೇ ಮೂಲ ಕಾರಣ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಡಿಕೆಶಿ ಸಿಎಂ ಆಗಿ 100 ದಿನಗಳ ಅವಧಿ ಪೂರ್ಣಗೊಳಿಸಿದ ಸಂದರ್ಭದಲ್ಲಿ ಪತ್ರಕರ್ತರ ಜೊತೆ ಸಂವಾದ ಏರ್ಪಡಿಸಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸಿದ್ದರಾಮಯ್ಯನವರು 10 ಕೆಜಿ ಅನ್ನಭಾಗ್ಯ ಯೋಜನೆ ಹೇಳಿದ್ದರು. ಉಳಿದ ಯೋಜನೆಗಳನ್ನು ನಾನೇ ಸಿದ್ಧಪಡಿಸಿ, ನಾನೇ ಪರಿಕಲ್ಪನೆ ಕೊಟ್ಟು ನಾನೇ ಜಾರಿಗೆ ತರಲು ಕಾರಣ” ಎಂದು ಹೇಳಿದರು.

6 ವರ್ಷಗಳ ಬಳಿಕ ಭಾರತ–ಚೀನಾ ನಡುವೆ ಮತ್ತೆ ನೇರ ವಿಮಾನ ಸೇವೆ ಪುನರಾರಂಭ – vishwanews24

“ಪ್ರಜಾಸೇವೆ ಇಲಾಖೆಯನ್ನು ಆರಂಭಿಸಿದ್ದು ಕೂಡ ನಾನೇ. ಭಾರತ್ ಜೋಡೋ ಯುವಕರ ಸಂಘ, ಈ ರಾಜ್ಯದ ಬೃಹತ್ 2 ನೀರಾವರಿ ಯೋಜನೆಗಳಾದ ಕಾವೇರಿ ಮತ್ತು ತುಂಗಭದ್ರೆಗೆ ಹೊಸ ರೂಪ ಕೊಟ್ಟಿದ್ದು ನಾನೇ. ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ರೈತರಿಗೆ 70,000 ಎಕರೆ ಜಮೀನಿಗೆ ಹೊಸ ಸಮಾಲೋಚನೆ ಮಾಡಿದ್ದು ನನ್ನ ಅವಧಿಯಲ್ಲಿಯೇ” ಎಂದು ನುಡಿದರು.

“ಹೀಗೆ ನಾನು ಮಾಡಿರುವ ಅನೇಕ ಕೆಲಸಗಳಿವೆ, ಸಮಯ ಬಂದಾಗ ಎಲ್ಲವನ್ನೂ ಹೇಳುತ್ತೇನೆ. ನಾನು ಇತಿಹಾಸವನ್ನು ಓದುವುದು, ಬರೆಯುವುದಲ್ಲಿ ನಂಬಿಕೆ ಇಟ್ಟಿಲ್ಲ, ಇತಿಹಾಸ ಸೃಷ್ಟಿಸುವುದರ ಮೇಲೆ ನಂಬಿಕೆಯಿಟ್ಟವನು” ಎಂದರು.

ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಬೆಳ್ತಂಗಡಿಯ ಉಷಾರಾಣಿ ನೇಮಕ – vishwanews24

Leave a Reply