ಬೆಂಗಳೂರು: ಹಿಟ್ ಅಂಡ್ ರನ್ : ಚಾಲಕನನ್ನು ರಸ್ತೆಯಲ್ಲಿ 1 ಕಿ.ಮೀ ಎಳೆದೊಯ್ದ ಬೈಕ್ ಸವಾರ – Vishwanews24
ಬೆಂಗಳೂರು: ಹಿಟ್ ಅಂಡ್ ರನ್ : ಚಾಲಕನನ್ನು ರಸ್ತೆಯಲ್ಲಿ 1 ಕಿ.ಮೀ ಎಳೆದೊಯ್ದ ಬೈಕ್ ಸವಾರ
ಬೆಂಗಳೂರು: ನಗರದ ಮಾಗಡಿ ರಸ್ತೆಯಲ್ಲಿ ಇಂದು ದೆಹಲಿಯ ಕಾರ್ ಬೈಕ್ ಗೆ ಹಿಟ್ ಅಂಡರ್ ರನ್ ಮಾದರಿಯಲ್ಲಿಯೇ ಭೀಕರ ಅಮಾನವೀಯ ಕೃತ್ಯವೊಂದು ನಡೆದಿದೆ. ಕಾರ್ ಗೆ ಡಿಕ್ಕಿಯಾಗಿದ್ದಕ್ಕೆ ಗಲಾಟೆ ಮಾಡಿ ಬೈಕ್ ಹಿಂಪದಿ ಹಿಡಿದಂತ ವ್ಯಕ್ತಿಯನ್ನೇ ಒಂದು ಕಿಲೋಮೀಟರ್ ದೂರದವರೆಗೆ ಬೈಕ್ ಸವಾರ ಎಳೆದೊಯ್ದಿರೋ ಡೆಡ್ಲಿ ಕೃತ್ಯ ನಡೆದಿದೆ.
ಬೆಂಗಳೂರಿನ ಮಾಗಡಿ ರಸ್ತೆಯ ಟೋಲ್ ಗೇಟ್ ಬಳಿಯಲ್ಲಿ ಬೈಕ್ ಸವಾರನೊಬ್ಬ ಟಾಟಾ ಸುಮೋಗೆ ಡಿಕ್ಕಿ ಹೊಡೆದಿದ್ದನು. ಈ ವೇಳೆ ಸುಮೋ ಚಾಲಕ ಬೈಕ್ ಸವಾರನನ್ನು ಪ್ರಶ್ನಿಸಿ, ಗಲಾಟೆ ಮಾಡಿದ್ದಾನೆ. ಈ ವೇಳೆ ಬೈಕ್ ಸವಾರ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆತನ ಬೈಕ್ ಸೀಟ್ ಹಿಂಪದಿಯ ಹಿಡಿಯನ್ನು ಜಗ್ಗಿ ಹಿಡಿದಿದ್ದಾನೆ.
ರಾಜ್ಯ ಪ್ರವಾಸದಲ್ಲಿ ಪ್ರಧಾನಿ – ಜ.19ರಂದು ಯಾದಗಿರಿ, ಕಲಬುರಗಿಗೆ ಆಗಮನ – Vishwanews24
ಇದನ್ನೂ ಲೆಕ್ಕಿಸದೇ ಬೈಕ್ ಸವಾರ ಮಾತ್ರ ಮಾಗಡಿ ರಸ್ತೆ ಟೋಲ್ ಗೇಟ್ ನಿಂದ ಹೊಸಳ್ಳಿ ಮೆಟ್ರೋ ನಿಲ್ದಾಣದವರೆಗೆ ಸುಮಾರು ಒಂದು ಕಿಲೋಮೀಟರ್ ದೂರು ರಸ್ತೆಯಲ್ಲಿ ಧರಧರ ಎಳೆದೊಯ್ದಿದ್ದಾನೆ.
ಇದನ್ನು ಗಮನಿಸಿದಂತ ಸಾರ್ವಜನಿಕರು, ಬೈಕ್ ಸವಾರನನ್ನು ತಡೆದು, ಪ್ರಶ್ನಿಸಿದ್ದಾರೆ. ಅಲ್ಲದೇ ಅಮಾನವೀಯ ರೀತಿಯಲ್ಲಿ ವಯಸ್ಸಾಗಿದ್ದಂತ ಕಾರು ಚಾಲಕ ಬೈಕ್ ಹಿಂದೆ ಹಿಡಿದಿದ್ದರೂ ಎಳೆದೊಯ್ದು ಕೃತ್ಯವೆಸಗಿದಂತ ಬೈಕ್ ಸವಾರನಿಗೆ ಧರ್ಮದೇಟು ನೀಡಿದರು.
ಸಾರ್ವಜನಿಕರ ಒಡೆತದಿಂದಾಗಿ ಬೈಕ್ ಸವಾರ ಅಸ್ವಸ್ಥಗೊಂಡಿದ್ದನು. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಪೊಲೀಸರು, ಬೈಕ್ ಸವಾರ, ಕಾರು ಚಾಲಕ ಇಬ್ಬರನ್ನು ಆಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ದರು.
Join our Whatsapp group by clicking the below link 👇👇
