ಬ್ರಹ್ಮಾವರ : ಮಗಳಿಗೆ ವಾಟ್ಸಪ್ ಸಂದೇಶ ಕಳುಹಿಸಿ ತಾಯಿ ನೇಣಿಗೆ ಶರಣು – Vishwanews24

Featured, ಉಡುಪಿ

ಬ್ರಹ್ಮಾವರ : ಮಗಳಿಗೆ ವಾಟ್ಸಪ್ ಸಂದೇಶ ಕಳುಹಿಸಿ ತಾಯಿ ನೇಣಿಗೆ ಶರಣು

ಬ್ರಹ್ಮಾವರ: ಮಗಳಿಗೆ ವಾಟ್ಸಪ್ ಸಂದೇಶ ಕಳುಹಿಸಿ ತಾಯಿ ನೇಣಿಗೆ ಶರಣಾದ ಘಟನೆ ಬ್ರಹ್ಮಾವರ ಠಾಣಾ ವ್ಯಾಪ್ತಿಯಲ್ಲಿ ಎ.7ರಂದು ನಡೆದಿದೆ.

ಬ್ರಹ್ಮಾವರ ನಿವಾಸಿ 62ವರ್ಷದ ಆಶಾಲತಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ.

ಇವರು ದತ್ತು ಪುತ್ರಿ ಶಮೀಕ್ಷಾ ಎಂಬವರೊಂದಿಗೆ ವಾಸವಾಗಿದ್ದು, ಅವರ ಪತಿ ಮೃತಪಟ್ಟಿದ್ದರು. ತಾಯಿ ಆಶಾಲತಾ ಹಾಗೂ ಮಗಳು ಶಮೀಕ್ಷಾಳಿಗೆ ಸಣ್ಣ ಪುಟ್ಟ ವಿಚಾರಕ್ಕೆ ಭಿನ್ನಾಭಿಪ್ರಾಯ ಉಂಟಾಗಿ ಗಲಾಟೆಯಾಗಿತ್ತು.

ಇದೇ ವಿಚಾರದಲ್ಲಿ ಮನನೊಂದ ಆಶಾಲತಾ ಅವರು ನಿನ್ನೆ ಮಗಳಿಗೆ ‘ತಾನು ಸಾಯುತ್ತೇನೆ ಎಂದು’ ವಾಟ್ಸಪ್‌ ಸಂದೇಶ ಕಳುಹಿಸಿ, ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಆದರೆ, ಮೃತ ಆಶಾಲತಾ ಅವರ ತಂಗಿ ಜ್ಯೋತಿಪ್ರಭಾ ಅವರು ಮರಣದಲ್ಲಿ ಸಂಶಯವಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಅದರಂತೆ ಬ್ರಹ್ಮಾವರ ಪೊಲೀಸ್‌ ಠಾಣೆ ಪ್ರಕರಣ ದಾಖಲಾಗಿದೆ‌.

ಮೂಲ್ಕಿ ಬಪ್ಪನಾಡು ಜಾತ್ರೆ : ಮುಸ್ಲಿಮರ ವ್ಯಾಪಾರಕ್ಕೆ ನಿಷೇಧ – Vishwanews24

Leave a Reply