ಬ್ರಿಟಿಷರೊಂದಿಗೆ ಕ್ಷಮಾಪಣೆ ಕೇಳಿ ಜೈಲಿನಿಂದ ಬಿಡುಗಡೆಗೊಂಡಿರುವವರನ್ನು ಹೀರೋ ಮಾಡ್ತಿದ್ದಾರೆ: ಸೊರಕೆ – Vishwanews24

Featured, ದಕ್ಷಿಣ ಕನ್ನಡ

ಬ್ರಿಟಿಷರೊಂದಿಗೆ ಕ್ಷಮಾಪಣೆ ಕೇಳಿ ಜೈಲಿನಿಂದ ಬಿಡುಗಡೆಗೊಂಡಿರುವವರನ್ನು ಹೀರೋ ಮಾಡ್ತಿದ್ದಾರೆ: ಸೊರಕೆ

ಕಡಬ: ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿ ಜೀವ ಬಲಿದಾನ ಮಾಡಿದ ನೈಜ ಹೋರಾಟಗಾರರನ್ನು ಮರೆ ಮಾಚಿ ಬ್ರಿಟಿಷರೊಂದಿಗೆ ಕ್ಷಮಾಪಣೆ ಕೇಳಿ ಜೈಲಿನಿಂದ ಬಿಡುಗಡೆಗೊಂಡಿರುವವರನ್ನು ಬಿಜೆಪಿಯವರು ಹೀರೋ ಮಾಡಲು ಹೊರಟು ದೇಶದ ಇತಿಹಾಸವನ್ನು ತಿರುಚುತ್ತಿದ್ದಾರೆ ಎಂದು ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಆರೋಪಿಸಿದರು.

ಕಡಬ ಬ್ಲಾಕ್‌ ಕಾಂಗ್ರೆಸ್‌ ನೇತೃತ್ವದಲ್ಲಿ ಆಲಂಕಾರಿನಿಂದ ಕಡಬದವರೆಗೆ ಶನಿವಾರ ಸಂಜೆ ನಡೆದ ಕಾಂಗ್ರೆಸ್‌ನ ಸ್ವಾತಂತ್ರ್ಯೋತ್ಸವ ನಡಿಗೆಯ ಸಮಾರೋಪದಲ್ಲಿ ಅವರು ಮಾತನಾಡಿದರು.

ಎಲ್ಲ ಜಾತಿ, ಮತ, ಧರ್ಮಗಳವರನ್ನು ಒಗ್ಗೂಡಿಸಿಕೊಂಡು ಸುಂದರ ಭಾರತ ಕಟ್ಟುವ ಜಾತ್ಯತೀತ ಪರಂಪರೆಗೆ ಎಳ್ಳು ನೀರು ಬಿಟ್ಟು ಕೋಮ ಸಂಘರ್ಷದ ಮೂಲಕ ದೇಶ ಒಡೆಯುವ ಕೆಲಸ ಮಾಡುತ್ತಿರುವ ಬಿಜೆಪಿಯವರು ಜನರಿಗೆ ಸುಳ್ಳು ಇತಿಹಾಸವನ್ನು ಬೋಧಿಸುತ್ತಿದ್ದಾರೆ. ಇನ್ನು ಕೆಲವು ವರ್ಷ ಕಳೆದರೆ 2014ರಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕವೇ ದೇಶಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕಿತು ಎಂದು ಹೇಳಿ ಜನರನ್ನು ದಾರಿ ತಪ್ಪಿಸಿದರೆ ಆಶ್ಚರ್ಯವಿಲ್ಲ ಎಂದು ಲೇವಡಿ ಮಾಡಿದರು.

ಹಿಜಾಬ್ ವಿವಾದ: ‘ಸುಪ್ರೀಂ ಕೋರ್ಟ್’ನಿಂದ ರಾಜ್ಯ ಸರ್ಕಾರಕ್ಕೆ ನೋಟಿಸ್..ಸೆ.5ಕ್ಕೆ ವಿಚಾರಣೆ ಮುಂದೂಡಿಕೆ -Vishwanews24

ದಿಕ್ಸೂಚಿ ಭಾಷಣ ಮಾಡಿದ ಕೆಪಿಸಿಸಿ ವಕ್ತಾರ ನಿಕೇತ್‌ ರಾಜ್‌ ಮೌರ್ಯ, ಈ ದೇಶದಲ್ಲಿ ಪ್ರೀತಿ , ಸೌಹಾರ್ದ, ಶಾಂತಿಯಿಂದ ಮಾತ್ರ ನಾಡು ಕಟ್ಟಲು ಸಾಧ್ಯ, ಸಂಘರ್ಷದಿಂದ ಸಾಧನೆ ಮಾಡಲು ಸಾಧ್ಯವಿಲ್ಲ, ಭಾರತ ಸರ್ವ ಜನಾಂಗದ ಶಾಂತಿಯ ತೋಟವಾಗಿರುವುದರಿಂದ ಜಗತ್ತಿನಲ್ಲಿ ಗೌರವ ಪ್ರಾಪ್ತಿಯಾಗಿದೆ. ಮಹಾತ್ಮ ಗಾಂಧೀಜಿವರನ್ನು ಮರೆತರೆ ಈ ದೇಶಕ್ಕೆ ಉಳಿಗಾಲವಿಲ್ಲ ಎಂದು ಹೇಳಿದರು.

ಕೆಪಿಸಿಸಿ ಸುಳ್ಯ ಬ್ಲಾಕ್‌ ಉಸ್ತುವಾರಿ ಕೃಷ್ಣಪ್ಪ ಜಿ., ಕಡಬ ಬ್ಲಾಕ್‌ ಉಸ್ತುವಾರಿ ನಂದ ಕುಮಾರ್‌, ಮುಖಂಡರಾದ ವೆಂಕಪ್ಪ ಗೌಡ ಮಾಚಿಲ, ಡಾ. ರಘು, ಪಿ. ಪಿ. ವರ್ಗೀಸ್‌, ಸರ್ವೋತ್ತಮ ಗೌಡ, ಎಚ್‌. ಮಹಮ್ಮದಾಲಿ, ವಿಜಯ ಕುಮಾರ್‌ ರೈ ಕರ್ಮಾಯಿ, ಸೈಮನ್‌ ಸಿ. ಜೆ, ಬಾಲಕೃಷ್ಣ ಗೌಡ ಬಳ್ಳೇರಿ, ರಾಯ್‌ ಅಬ್ರಹಾಂ, ಸತೀಶ್‌ ಕುಮಾರ್‌ ಕಡೆಂಜಿ, ಎಚ್‌. ಕೆ. ಇಲ್ಯಾಸ್‌, ಉಷಾ ಅಂಚನ್‌, ಧನಂಜಯ ಅಡ್ಪಂಗಾಯ, ಪಿ. ಸಿ. ಜಯರಾಮ, ಭರತ್‌ ಮುಂಡೋಡಿ, ಕೆ. ಪಿ. ತೋಮಸ್‌, ಶರೀಫ್‌ ಎ. ಎಸ್‌., ಶೀನಪ್ಪ ಗೌಡ ಬೈತಡ್ಕ, ದಿವಾಕರ ಗೌಡ, ವಿಜಯ ಕುಮಾರ್‌ ಸೊರಕೆ, ಅಶೋಕ್‌ ನೆಕ್ರಾಜೆ, ಯತೀಶ್‌ ಬಾನಡ್ಕ, ಕೆ. ಎಂ. ಹನೀಫ್‌, ಸತೀಶ್‌ ನಾೖಕ್‌ ಮೇಲಿನ ಮನೆ, ಆಶಾ ಲಕ್ಷ್ಮಣ, ನೀಲಾವತಿ ಶಿವರಾಮ್‌, ಸುದರ್ಶನ ಸವಣೂರು, ಫೈಝಲ್‌ ಮತ್ತಿತರರು ಉಪಸ್ಥಿತರಿದ್ದರು.

ಕಡಬ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸುಧೀರ್‌ ಕುಮಾರ್‌ ಶೆಟ್ಟಿ ಸ್ವಾಗತಿಸಿದರು. ಯುವ ಕಾಂಗ್ರೆಸ್‌ ಅಧ್ಯಕ್ಷ ಅಭಿಲಾಷ್‌ ಪಿ. ಕೆ. ವಂದಿಸಿದರು. ಅಶ್ರಫ್‌ ಶೇಡಿಗುಂಡಿ ಕಾರ್ಯಕ್ರಮ ನಿರೂಪಿಸಿದರು. ಲಿವಾ ಮಿಸ್​ ದಿವಾ ಯೂನಿವರ್ಸ್​ 2022 ಕಿರೀಟವನ್ನು ಮುಡುಗೇರಿಸಿಕೊಂಡ ಮಂಗಳೂರು ಮೂಲದ ದಿವಿತಾ ರೈ – Vishwanews24 

 

Leave a Reply