ಹೆಜಮಾಡಿ: ದೋಣಿ ಮಗುಚಿ ಮೀನುಗಾರ ಸಾವು – Vishwanews24

Featured, ಉಡುಪಿ

ಹೆಜಮಾಡಿ: ದೋಣಿ ಮಗುಚಿ ಮೀನುಗಾರ ಸಾವು

ಪಡುಬಿದ್ರಿ: ಹೆಜಮಾಡಿಕೋಡಿಯಿಂದ ಮುಂಜಾನೆ ಮೂರು ಗಂಟೆಯ ವೇಳೆಗೆ ಮೀನುಗಾರಿಕೆ ಹೊರಟಿದ್ದ ನಾಡದೋಣಿಯೊಂದು ಅಳಿವೆಬಾಗಿಲಿನಲ್ಲಿ ದೊಡ್ಡ ಸಮುದ್ರದಲೆಯ ಹೊಡೆತಕ್ಕೆ ಸಿಲುಕಿ ಮುಗುಚಿ ಬಿದ್ದ ಪರಿಣಾಮ ಬೋಟಿನಲ್ಲಿದ್ದ ಹೆಜಮಾಡಿಕೋಡಿ ನಿವಾಸಿ ಪದ್ಮನಾಭ ಸುವರ್ಣ (46) ಅವರು ಸಮುದ್ರದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಇನ್ನೋರ್ವ ಧೀರೇಶ್‌ ಬಂಗೇರ ಈಜಿ ದಡ ಸೇರಿದ್ದಾರೆ. ಪದ್ಮನಾಭ ಸುವರ್ಣ ಮೃತದೇಹವು ಶುಕ್ರವಾರ ಬೆಳಗ್ಗೆ ಹೆಜಮಾಡಿಕೋಡಿಯಲ್ಲಿ ಪತ್ತೆಯಾಗಿದೆ. ಪಡುಬಿದ್ರಿ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿದೆ.

ಪಡುಬಿದ್ರಿ: ಗೃಹಿಣಿ ಸಂಶಯಾಸ್ಪದ ಸಾವಿನ ಪ್ರಕರಣ : ಪತಿ ಸೆರೆ, 15 ದಿನ ನ್ಯಾಯಾಂಗ ಬಂಧನ – Vishwanews24

Leave a Reply