ಅಗಸ್ಟ್ 21 – ಯುವವಾಹಿನಿ ಅಂತರ್ ಘಟಕದ ಡೆನ್ನಾನ ಡೆನ್ನನ ಸಾಂಸ್ಕೃತಿಕ ಸೌರಭ : vishwanews24

Featured, ಉಡುಪಿ

ಅಗಸ್ಟ್ 21 – ಯುವವಾಹಿನಿ ಅಂತರ್ ಘಟಕದ ಡೆನ್ನಾನ ಡೆನ್ನನ ಸಾಂಸ್ಕೃತಿಕ ಸೌರಭ :

vishwanews24

ಕಾಪು: ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಹಾಗೂ ಉಡುಪಿ ಘಟಕದ ಅತಿಥ್ಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇದರ ಸಹಕಾದೊಂದಿಗೆ ಯುವವಾಹಿನಿ ಅಂತರ್ ಘಟಕದ ಸಾಂಸ್ಕೃತಿಕ ಸೌರಭ ಡೆನ್ನಾನ ಡೆನ್ನನ -2022 ಶೀರ್ಷಿಕೆಯ ಕಾರ್ಯಕ್ರಮ ಅಗಸ್ಟ್ 21 ರಂದು ಕಟಪಾಡಿ ವಿಶ್ವಾನಥ ಕ್ಷೇತ್ರದ ಸಪ್ತಗಿರಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಕಾಪುವಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ್ ಅಮೀನ್ ಮಟ್ಟು ತಿಳಿಸಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಸಚಿವ ಸುನಿಲ್ ಕುಮಾರ್ ನೆರವೇರಿಸಲಿದ್ದು ,ಕಾಪು ಶಾಸಕ ಲಾಲಾಜಿ‌ ಮೆಂಡನ್,ಬನ್ನಂಜೆ ಬಾಬು ಅಮೀನ್,ಬಿ ಎನ್ ಶಂಕರ ಪೂಜಾರಿ ,ರಾಜಶೇಖರ ಕೋಟ್ಯಾನ್ ಸೇರಿದಂತೆ ಮೊದಲಾದ ಅತಿಥಿಗಳು ಉಪಸ್ಥಿತರಿರಲಿದ್ದಾರೆ ಎಂದರು. ಅದೇ ದಿನ ಸಂಜೆ ಸಮಾರೋಪ ಕಾರ್ಯಕ್ರಮ ಜರಗಲಿದೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂತೋಷ ಕುಮಾರ್, ದೀಪಕ್ ಕುಮಾರ್ ಎರ್ಮಾಳು,ದಯಾನಂದ ಕರ್ಕೇರ,ಪ್ರವೀಣ್ ಡಿ ಪೂಜಾರಿ ಜಗದೀಶ ಕುಮಾರ್ ಉಪಸ್ಥಿತರಿದ್ದರು.

ಆಂಧ್ರ ಪ್ರದೇಶ ಫೋಟೋಗ್ರಫಿ ಅಕಾಡೆಮಿ ಆಜಾದಿಕಾ ಅಮೃತ್ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಛಾಯಾಗ್ರಹಣ ಸ್ಪರ್ಧೆಯಲ್ಲಿ ಕರ್ನಾಟಕದ ಪಂಚ ಛಾಯಾಗ್ರಾಹಕರ ಚಿತ್ರಗಳು ಪ್ರಶಸ್ತಿಗೆ ಆಯ್ಕೆ – Vishwanews24

Leave a Reply