ಅನಗತ್ಯವಾದ ಬಿಪಿಎಲ್ ಕಾರ್ಡ್ಗಳನ್ನು ಹೊಂದಿರುವವರು ವಾಪಾಸ್ ನೀಡಿ : ಸಿಎಂ ಬಿಎಸ್ ಯಡಿಯೂರಪ್ಪ -Vishwanews24
ಅನಗತ್ಯವಾದ ಬಿಪಿಎಲ್ ಕಾರ್ಡ್ಗಳನ್ನು ಹೊಂದಿರುವವರು ವಾಪಾಸ್ ನೀಡಿ : ಸಿಎಂ ಬಿಎಸ್ ಯಡಿಯೂರಪ್ಪ -Vishwanews24
ಕೆಲ ಶ್ರೀಮಂತರು ಬಿಪಿಎಲ್ ಕಾರ್ಡುಗಳನ್ನು ಪಡೆದುಕೊಂಡಿದ್ದಾರೆ. ಅಂತವರು ಬಿಪಿಎಲ್ ಕಾರ್ಡ್ ಅನ್ನು ವಾಪಾಸ್ ನೀಡಬೇಕು..
ಶಿವಮೊಗ್ಗ: “ಬಿಪಿಎಲ್ ಕಾರ್ಡ್ ವಿಚಾರವಾಗಿ ಹೆಚ್ಚು ಚರ್ಚಿಸಬೇಕಾದ ಅವಶ್ಯಕತೆ ಇಲ್ಲ. 2017ರ ಮಾನದಂಡವೇ ಮುಂದುವರೆಯುತ್ತದೆ” ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕೆಲ ಶ್ರೀಮಂತರು ಬಿಪಿಎಲ್ ಕಾರ್ಡುಗಳನ್ನು ಪಡೆದುಕೊಂಡಿದ್ದಾರೆ. ಅಂತವರು ಬಿಪಿಎಲ್ ಕಾರ್ಡ್ ಅನ್ನು ವಾಪಾಸ್ ನೀಡಬೇಕು. ಅನಗತ್ಯವಾದ ಬಿಪಿಎಲ್ ಕಾರ್ಡ್ಗಳನ್ನು ಹಿಂಪಡೆಯಬೇಕು ಎಂದು ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ” ಎಂದು ಹೇಳಿದರು.
ಬಾಹ್ಯಾಕಾಶದಲ್ಲಿ ಭಗವದ್ಗೀತೆ, ಮೋದಿ ಫೋಟೋದೊಂದಿಗೆ ಫೆ.28ರಂದು ಉಪಗ್ರಹ ಮೂಲಕ ರವಾನಿಸಲಿದೆ ಇಸ್ರೋ -Vishwanews24
ಮೀಸಲಾತಿ ಹೋರಾಟದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, “ಈ ಬಗ್ಗೆ ಕಾನೂನು ರೀತಿಯಾಗಿ ಏನು ಕ್ರಮ ತೆಗೆದುಕೊಳ್ಳಬೇಕು ಎನ್ನುವುದನ್ನು ಮಾಡುತ್ತೇನೆ. ಈ ವಿಚಾರದ ಬಗ್ಗೆ ಬೆಂಗಳೂರಿಗೆ ಹೋದ ನಂತರ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ. ಮುಂವರುವ ದಿನಗಳಲ್ಲಿ ಎಲ್ಲರಿಗೂ ಸಮಾಧಾನವಾಗುವ ರೀತಿಯಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತೇನೆ” ಎಂದರು.
ಫೆ. 22 ರಿಂದ 6ರಿಂದ 8ನೇ ತರಗತಿವರೆಗೆ ಪೂರ್ಣ ಪ್ರಮಾಣದಲ್ಲಿ ಶಾಲೆ ಆರಂಭ : ಸುರೇಶ್ ಕುಮಾರ್ – Vishwanews24
