ಅಪ್ಪು ಮೊದಲ ವರ್ಷದ ಪುಣ್ಯಸ್ಮರಣೆ  – Vishwanews24

Featured, ರಾಜ್ಯ ನ್ಯೂಸ್

ಸೂರ್ಯನೊಬ್ಬ ಚಂದ್ರನೊಬ್ಬ, ರಾಜನೂ ಒಬ್ಬ, ಈ ರಾಜನೂ ಒಬ್ಬ ..ಅಪ್ಪು ಮೊದಲ ವರ್ಷದ ಪುಣ್ಯ ಸ್ಮರಣೆ 

ಬೆಂಗಳೂರು: ಅಭಿಮಾನಿಗಳ ಪಾಲಿನ ಅಪ್ಪು, ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ನಮ್ಮನ್ನು ಅಗಲಿ ಇಂದಿಗೆ ಒಂದು ವರ್ಷ. ಬಹುಮುಖ ಪ್ರತಿಭೆಯ ಮೂಲಕ ಬಾಲ ನಟನಾಗಿ ಕಾಲಿಟ್ಟು ಅಭಿಮಾನಿಗಳ ಮನದಂಗಳಕ್ಕೆ ಲಗ್ಗೆ ಹಾಕಿದ್ದರು.

ಯುವರತ್ನನಾಗಿ ಮಿಂಚುತ್ತಿದ್ದ ಅಪ್ಪುವಿಗೆ ಹಠಾತ್ತಾಗಿ ಕಾಣಿಸಿಕೊಂಡ ಎದೆನೋವು ಮತ್ತು ತೀವ್ರ ಹೃದಯಾಘಾತದಿಂದಾಗಿ 2021ರ ಅ. 29 ರಂದು ಬೆಂಗಳೂರಿನ ವಿಕ್ರಮ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಪುನೀತ್ ರಾಜ್ ಕುಮಾರ್ ಅಗಲಿ ಇಂದಿಗೆ ಒಂದು ವರ್ಷ ಕಳೆದಿದೆ. ಅಪ್ಪು ಭೌತಿಕವಾಗಿ ಇಲ್ಲದಿರಬಹುದು. ಆದರೆ, ಕಳೆದೊಂದು ವರ್ಷದಲ್ಲಿ ಅವರ ಅಭಿಮಾನಿಗಳು ದುಪ್ಪಟ್ಟಾಗಿದ್ದಾರೆ. ಅವರೆಲ್ಲರೂ ಪ್ರತಿದಿನವೂ ಅಪ್ಪು ಅವರನ್ನು ಸ್ಮರಿಸಿಕೊಳ್ಳುತ್ತಾರೆ. ಅಪ್ಪು ಅಪ್ಪು ಎಂದು ಸ್ಮರಿಸುತ್ತಾ, ಸಮಾಜಸೇವೆ ಮಾಡುತ್ತಾ ಅಭಿಮಾನಿಗಳು ಕಳೆದೊಂದು ವರ್ಷದಿಂದ ಬದುಕುತ್ತಿದ್ದಾರೆ.

ಉಡುಪಿ : ಮಲಬಾರ್ ಗೋಲ್ಡ್ ಅಂಡ್ ಅಂಡ್ ಡೈಮಂಡ್ಸ್ ವತಿಯಿಂದ ಕೋಟಿ ಕಂಠದೊಳು ನಮ್ಮ ಕಂಠ -Vishwanews24

Leave a Reply