ನಿಮಗೆ ಹೊಸ ಆಧಾರ್ ಕಾರ್ಡ್ ಸಿಗುವವರೆಗೆ UIDAI ವೆಬ್ಸೈಟ್ಗೆ ಭೇಟಿ ನೀಡಿ ಆಧಾರ್ ಕಾರ್ಡ್ ಅನ್ನು ಮುದ್ರಿಸಬಹುದು. , ನೀವು ನೋಂದಾಯಿತ ಸಂಖ್ಯೆಯನ್ನು ಹೊಂದಿರುವಿರಿ. ಆಧಾರ್ ಬಗೆಗಿನ ಇತರ ಮಾಹಿತಿ ನಿಮಗೆ ತಿಳಿದಿದೆ. OTP ನಿಮ್ಮ ಲಿಂಕ್ ಮಾಡಲಾದ ನಂಬರ್ ಗೆ ಬರುತ್ತದೆ. ಆಧಾರ್ ಮರುಮುದ್ರಣ ಮಾಡಲು ಇದು ಬಹಳ ಸುಲಭ ಮಾರ್ಗವಾಗಿದೆ.
ಇದಕ್ಕಾಗಿ, ಮೊದಲಿಗೆ ಯುಐಡಿಎಐ ವೆಬ್ಸೈಟ್ಗೆ ಹೋಗಿ ಆಧಾರ್ ಮರುಮುದ್ರಣ ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗುತ್ತದೆ. ವಿವರಗಳು ತೆರೆದ ನಂತರ, 12 ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ. ಇದಲ್ಲದೆ, ಇತರ ಮಾಹಿತಿ, ಹೆಸರು, ಹುಟ್ಟಿದ ದಿನಾಂಕ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಗಳನ್ನು ಭರ್ತಿ ಮಾಡಿ. ಪ್ರಕ್ರಿಯೆ ಮುಗಿದ ನಂತರ, ಆಧಾರ್ ಕಾರ್ಡ್ ಕಾಪಿ ತೆರೆದುಕೊಳ್ಳುತ್ತದೆ.
ಅದಕ್ಕಾಗಿ ಪ್ರತಿಯೊಬ್ಬರೂ ನಿಮ್ಮ ಆಧಾರ್ ಫೋಟೋ ಪ್ರತಿಯನ್ನು ಮರೆಯದೇ ಇರಿಸಿಕೊಳ್ಳಿ. ಏಕೆಂದರೆ, ನಿಮ್ಮ ಅಸಲಿ ಆಧಾರ್ ಕಾರ್ಡ್ ಕಳೆದು ಹೋದರೂ ಸಹ, ನಿಮ್ಮ ಆಧಾರ್ ಅನ್ನು ಮತ್ತೆ ಪಡೆಯಲು ಇದು ಸಹಕಾರಿಯಾಗುತ್ತದೆ.
1. ಯುಐಡಿಎಐ ಅಧಿಕೃತ ವೆಬ್ ಸೈಟ್ www.uidai.gov.in ಗೆ ಹೋಗಿ ಸೆಲೆಕ್ಷನ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ನಂತ್ರ ರೆಸಿಡೆಂಟ್ ಪೋರ್ಟಲ್ ಮೇಲೆ ಕ್ಲಿಕ್ ಮಾಡಿ.
2. ನಿಮ್ಮ ನೋಂದಣಿ ಸಂಖ್ಯೆ ವಿವರ ಸಲ್ಲಿಸಿ(ನೋಂದಣಿ ಸಂಖ್ಯೆ, ದಿನಾಂಕ, ಸಮಯ, ನಿವಾಸ ಹೆಸರು ಹಾಗೂ ಪಿನ್ ಕೋಡ್) ಆಧಾರ್ ರಸೀತಿ ಸ್ಲಿಪ್ ನಲ್ಲಿರುವಂತೆ.
3. ಅಥವಾ ಆಧಾರ್ ಕಾರ್ಡ್ ನಂಬರ್ ಹಾಕಿ.
4. ಮೇಲ್ಭಾಗದಲ್ಲಿರುವ I Have ಅಡಿಯಲ್ಲಿರುವ ಆಧಾರ್ ಆಯ್ಕೆಯನ್ನು ಸೂಚಿಸಿ.
5. ನಿಮ್ಮ ನೋಂದಾಯಿತ ಮೊಬೈಲ್ ಫೋನಿಗೆ One Time Pin ಬರುತ್ತದೆ.
6. OTP ನಮೂದಿಸಿ
7. ನಕಲಿ ಆಧಾರ್ ಕಾರ್ಡ್ ಡೌನ್ ಲೋಡ್ ಮಾಡಿಕೊಳ್ಳುವ ಆಯ್ಕೆ ನಿಮ್ಮ ಮುಂದೆ ಬರಲಿದೆ.
ಪಿಡಿಎಫ್ ಮಾದರಿಯಲ್ಲಿ ಲಭ್ಯವಾಗಲಿರುವ ಆಧಾರ್ ಕಾರ್ಡ್ ಪಾಸ್ ವರ್ಡ್ ನಿಂದ ಸುರಕ್ಷಿತವಾಗಿರುತ್ತದೆ. ಪಾಸ್ ವರ್ಡ್ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಈ ಬಗೆ ಇ ಮೇಲ್ ಕಳಿಸಲಾಗುತ್ತದೆ. ಅಥವಾ ಎಸ್ ಎಂಎಸ್ ಬರುತ್ತದೆ. ನಿಮ್ಮ ಪಿನ್ ಕೋಡ್ ಸಂಖ್ಯೆಯನ್ನೇ ಪಾಸ್ ವರ್ಡ್ ಆಗಿ ನೀಡಲಾಗಿರುತ್ತದೆ. ಪಾಸ್ ವರ್ಡ್ ಹಾಕಿ ಆಧಾರ್ ಕಾರ್ಡ್ ನೋಡಿ ಪ್ರಿಂಟ್ ತೆಗೆದುಕೊಂಡು ಅಸಲಿ ಆಧಾರ್ ಕಾರ್ಡ್ ನಂತೆ ಬಳಸಬಹುದು.
ಉಡುಪಿ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ, ವಂಚನೆ ಪ್ರಕರಣ: ಪೋಕ್ಸೋ ಕಾಯಿದೆಯಡಿ ಇಬ್ಬರ ಬಂಧನ ಉಡುಪಿ: ಅಪ್ರಾಪ್ತ ಬಾಲಕಿಯೊಬ್ಬಳನ್ನು ಪ್ರೀತಿಯ…
ಹೆಜಮಾಡಿ ಕಾಂಗ್ರೆಸ್ ಗೆ ಭರವಸೆ ನಾಯಕ : ಪ್ರಭೋದ್ ಚಂದ್ರ ಹೆಜಮಾಡಿ ಕಾಪು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ…
ಉಡುಪಿ: ಟಯರ್ ಸ್ಫೋಟಗೊಂಡು ಮೀನು ಸಾಗಾಟದ ಲಾರಿ ಪಲ್ಟಿ ಉಡುಪಿ: ಉಡುಪಿಯಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದ ಮೀನು ಸಾಗಾಟದ ಲಾರಿಯೊಂದು…
ಸತತ 4ನೇ ಬಾರಿ CNG ದರ ಏರಿಕೆ: ಪ್ರತಿ ಕೆಜಿಗೆ 2 ರೂ. ಹೆಚ್ಚಳ ನವದೆಹಲಿ: ಪೆಟ್ರೋಲ್, ಡೀಸೆಲ್ ಬಳಿಕ…
ದುಬೈನಲ್ಲಿ ರಸ್ತೆ ಅಪಘಾತ : ಕಿನ್ನಿಗೋಳಿಯ ಯುವತಿ ಸಾವು ಮಂಗಳೂರು: ದುಬೈನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಕಳೆದ ಕೆಲವು…
ಬಿಜೆಪಿ ಸಂಘಪರಿವಾರವು ದೇಶದ ಕಾನೂನಿಗೆ ವಿರುದ್ಧವಾಗಿದೆ: ರಿಯಾಝ್ ಫರಂಗಿಪೇಟೆ ಗಲಭೆಕೋರರ ವಿರುದ್ಧದ ಪ್ರಕರಣ ಹಿಂಪಡೆದ ಕ್ರಮಕ್ಕೆ SDPI ತೀವ್ರ ವಿರೋಧ…