ಆಮ್ ಆದ್ಮಿ ಪಕ್ಷದ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ರಶೀದ್ ಜಟ್ಟಿಪಳ್ಳ ನೇಮಕ – Vishwnaews24

Featured, ದಕ್ಷಿಣ ಕನ್ನಡ

ಆಮ್ ಆದ್ಮಿ ಪಕ್ಷದ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ರಶೀದ್ ಜಟ್ಟಿಪಳ್ಳ ನೇಮಕ – Vishwnaews24

ಆಮ್ ಆದ್ಮಿ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ರಶೀದ್ ಜಟ್ಟಿಪಳ್ಳರವರು ನೇಮಕಗೊಂಡಿದ್ದಾರೆ. ಸುಳ್ಯ ವಿಧಾನಸಭಾ ಕ್ಷೇತ್ರದ ಸ್ಥಾಪಕ ಸದಸ್ಯರಾಗಿ ಪ್ರಸ್ತುತ ಉಪ ಸಂಚಾಲಕರಾಗಿರುವ ಇವರನ್ನು ಜಿಲ್ಲಾಧ್ಯಕ್ಷರಾದ ಸಂತೋಷ್ ಕಾಮತ್ ರವರು ನೇಮಕಗೊಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಕ್ಷದ ಸಂಘಟನೆಯನ್ನು ಬಲಗೊಳಿಸಿ ಮುಂದಿನ ವರ್ಷದ ವಿಧಾನಸಭಾ ಚುನಾವಣೆಗೆ ಸಜ್ಜಾಗಲು ಪಕ್ಷ ಜಿಲ್ಲಾ ಸಮಿತಿಯನ್ನು ಪುನರ್ಚಿಸಿದೆ. ನಿವೃತ್ತ KAS ಆಧಿಕಾರಿ ಮಥಾಯಿ ಮತ್ತು ಅಶೋಕ್ ಅಡಮಲೆ ಯವರನ್ನು ದ.ಕ., ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲಾ ಸಂಯೋಜಕರನ್ನಾಗಿ ರಾಜ್ಯ ಸಮಿತಿ ನಿಯೋಜಿಸಿದೆ. ಪಕ್ಷದ ನೂತನ ಜಿಲ್ಲಾ ಸಮಿತಿ ರಚನೆಯಾಗಿದ್ದು ವಿಧಾನ ಸಭಾ ಕ್ಷೇತ್ರ ಸಮಿತಿಗಳ ಪುನಾರಚನೆ ನಡೆಯಲಿದೆ.

ಪ್ರಧಾನಿ  ಮೋದಿಯವರ ನಾಯಕತ್ವದಲ್ಲಿ ತಾನು ಸಣ್ಣ ಸೈನಿಕನಂತೆ ದೇಶಸೇವೆ ಮಾಡುತ್ತೇನೆ : ಹಾರ್ದಿಕ್ ಪಟೇಲ್ – Vishwnaews24

Leave a Reply