ಇಂದು ‘ಪಿಎಂ ಕಿಸಾನ್ 13ನೇ ಕಂತು’ ಬಿಡುಗಡೆ; ರೈತರ ಖಾತೆ ಸೇರಲಿದೆ 2,000 ರೂ. – Vishwanews24
ಇಂದು ‘ಪಿಎಂ ಕಿಸಾನ್ 13ನೇ ಕಂತು’ ಬಿಡುಗಡೆ; ರೈತರ ಖಾತೆ ಸೇರಲಿದೆ 2,000 ರೂ.
ನವದೆಹಲಿ : ಇಂದು ಪಿಎಂ ಕಿಸಾನ್’ನ 13ನೇ ಕಂತನ್ನ ಬಿಡುಗಡೆ ಮಾಡಲಾಗುವುದು. ಮಧ್ಯಾಹ್ನ 3 ಗಂಟೆಗೆ 13ನೇ ಕಂತಿನ 2000 ರೂಪಾಯಿ ರೈತರ ಖಾತೆ ಸೇರಲಿದೆ.ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗಾವಿಗೆ ಭೇಟಿ ನೀಡಲಿದ್ದು, ಮಧ್ಯಾಹ್ನ 3 ಗಂಟೆಗೆ 13ನೇ ಕಂತಿನ ಬಿಡುಗಡೆ ಮಾಡಲಿದ್ದಾರೆ.
8 ಕೋಟಿಗೂ ಹೆಚ್ಚು ರೈತರ ಖಾತೆಗಳಿಗೆ ಡಿಬಿಟಿ ಮೂಲಕ 13ನೇ ಮೊತ್ತವನ್ನು ಪ್ರಧಾನಿ ಮೋದಿ ವರ್ಗಾಯಿಸಲಿದ್ದಾರೆ.
ಅಷ್ಟೇ ಅಲ್ಲದೇ, ಇಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜನ್ಮದಿನವೂ ಆಗಿದ್ದು, ಪ್ರಧಾನಿ ನರೇಂದ್ರ ಮೋದಿ ಕಿಸಾನ್ ಸಮ್ಮಾನ್ ನಿಧಿಯ ಹೊಸ ಕಂತನ್ನು ಬಿಡುಗಡೆ ಮಾಡಲಿದ್ದಾರೆ. ಮಿಷನ್ ಕರ್ನಾಟಕ ಯೋಜನೆಯಡಿ ಪ್ರಧಾನಿ ಮೋದಿ ಶಿವಮೊಗ್ಗಕ್ಕೆ ಭೇಟಿ ನೀಡಲಿದ್ದು, ಅಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನ ಉದ್ಘಾಟಿಸಲಿದ್ದಾರೆ.
ಅಕ್ಟೋಬರ್ 2022 ರಲ್ಲಿ, ಪ್ರಧಾನಿಯವರು ದೆಹಲಿಯಿಂದ ರೈತರ ಖಾತೆಗಳಿಗೆ 12 ನೇ ಕಂತಿನ 22,000 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದರು. ಈವರೆಗೆ 14 ಕೋಟಿ ಫಲಾನುಭವಿಗಳ ಖಾತೆಗಳಿಗೆ 2.70 ಲಕ್ಷ ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.
