ಇಂದು ಪ್ರಧಾನಿ ಮಂಗಳೂರಿಗೆ- ತುಳು ಭಾಷೆ ಮಾನ್ಯತೆಗೆ 50 ಸಾವಿರಕ್ಕೂ ಅಧಿಕ ಟ್ವೀಟ್‌ – Vishwanews24

Featured, ದಕ್ಷಿಣ ಕನ್ನಡ

ಇಂದು ಪ್ರಧಾನಿ ಮಂಗಳೂರಿಗೆ- ತುಳು ಭಾಷೆ ಮಾನ್ಯತೆಗೆ 50 ಸಾವಿರಕ್ಕೂ ಅಧಿಕ ಟ್ವೀಟ್‌

ಮಂಗಳೂರು: ಇಂದು ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಬರುತ್ತಿರುವ ಸಂಧರ್ಭದಲ್ಲಿ ತುಳುವಿಗೆ ಹೆಚ್ಚುವರಿ ರಾಜ್ಯಭಾಷೆ ಹಾಗೂ ಸಂವಿಧಾನದ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿ ಬೇರೆ ಬೇರೆ ತುಳು ಸಂಘಟನೆಗಳು 50 ಸಾವಿರಕ್ಕೂ ಹೆಚ್ಚು ಮಂದಿ ಟ್ವೀಟ್‌ ಮಾಡಿದ್ದಾರೆ.

ತುಳುನಾಡ್‌ ಒಕ್ಕೂಟ, ತುಳುವೆರ್‌ ಕುಡ್ಲ, ಯುವ ತುಳುನಾಡ್‌, ತುಳುಪೀಡಿಯ, ತುಳುನಾಡು ನಿರ್ಮಾಣ ಸೇನೆ, ತುಳುವಾಸ್‌ ಕೌನ್ಸಿಲ್‌ ಅಭಿಯಾನದ ನೇತೃತ್ವದಲ್ಲಿ ಆಗಸ್ಟ್ 30, 31 ಮತ್ತು ಸೆಪ್ಟಂಬರ್ 1ರಂದು ಟ್ವೀಟ್‌ ತುಳುನಾಡ್‌ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, 50 ಸಾವಿರಕ್ಕೂ ಅಧಿಕ ಮಂದಿ ಟ್ವೀಟ್‌ ಮಾಡಿದ್ದಾರೆ.  ಕರಾವಳಿ ಅಭಿವೃದ್ಧಿಗೆ ಅತ್ಯಂತ ದೊಡ್ಡ ಶಕ್ತಿಯನ್ನು ಪ್ರಧಾನ ಮಂತ್ರಿಗಳು ತುಂಬಲಿದ್ದಾರೆ :ಮಂಗಳೂರಿಗೆ ಆಗಮಿಸಿದ ಮುಖ್ಯಮಂತ್ರಿ – Vishwanews24 

ಇನ್ನು ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳ್ಳಬೇಕು ಎಂದು ತುಳುನಾಡಿನ ಅನೇಕ ಸಂಘಟನೆಗಳು ಪ್ರಯತ್ನಿಸುತ್ತಿದ್ದು, ಮೋದಿ ಮಂಗಳೂರಿಗೆ ಬರುವ ಈ ಸಮಯದಲ್ಲಿ ಈ ಟ್ವೀಟ್ ಅಭಿಯಾನ ಮಾಡಿದ್ದಾರೆ.

 

Leave a Reply