ಇನ್ನೂ 10ವರ್ಷ ಪ್ರಧಾನಿ ಮೋದಿಯವರ ಆಡಳಿತ ಈ ದೇಶಕ್ಕೆ ಅವಶ್ಯಕವಾಗಿದೆ : ಸಚಿವ ಸೋಮಣ್ಣ -Vishwanews24
ಇನ್ನೂ 10ವರ್ಷ ಪ್ರಧಾನಿ ಮೋದಿಯವರ ಆಡಳಿತ ಈ ದೇಶಕ್ಕೆ ಅವಶ್ಯಕವಾಗಿದೆ : ಸಚಿವ ಸೋಮಣ್ಣ -Vishwanews24
ಹಾರೋಹಳ್ಳಿ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ನಾಯಕರ ಜನಪರ ಕೆಲಸಗಳನ್ನು ಮೆಚ್ಚಿಕೊಳ್ಳಬೇಕೇ ಹೊರತು, ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬಾರದು ಎಂದು ವಸತಿ ಸಚಿವ ಸೋಮಣ್ಣ ಹೇಳಿದರು.
ಕನಕಪುರ ತಾಲೂಕಿನ ಮರಳವಾಡಿಯ ಗುತ್ತಲಹುಣಸೆ ಗ್ರಾಮದ ಮಹದೇಶ್ವರ ದೇಗುಲದಲ್ಲಿ ಆಯೋಜಿಸಿದ್ದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, . ಯಾವ ಸಿಡಿಯೂ ಇಲ್ಲ ಎಲ್ಲಾ ಕಟ್ಟುಕತೆ. ಬಿಜೆಪಿಯಲ್ಲಿ ಯಾವುದೇ ಬಂಡಾಯವಿಲ್ಲ. ಸಿಎಂ ಬಿಎಸ್ವೈ ಉತ್ತಮ ಆಡಳಿತ ನೀಡುತ್ತಿದ್ದಾರೆ ಎಂದು ಅವರು ಹೇಳಿದರು.
ಇನ್ನೂ 10 ವರ್ಷ ಮೋದಿ ಆಡಳಿತ ಬೇಕು..
ಪ್ರಧಾನಿ ಮೋದಿಯವರ ಆಡಳಿತ ಇನ್ನೂ 10ವರ್ಷ ಈ ದೇಶಕ್ಕೆ ಅವಶ್ಯಕವಾಗಿದೆ. ನಮ್ಮ ದೇಶವನ್ನು ಕಂಡು ನೆರೆಯ ರಾಷ್ಟ್ರಗಳು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದ ಘನತೆ-ಗೌರವಗಳು ಜಾಗತಿಕ ಮಟ್ಟದಲ್ಲಿ ಹೆಚ್ಚಿದೆ. ದೇಶದಲ್ಲಿ ಬಡತನ ನಿರ್ಮೂಲನೆಯಾಗದೇ ಇರಬಹುದು. ಆದರೆ ಬಡತನವನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. 2023ನೇ ಇಸವಿ ಹೊತ್ತಿಗೆ ದೇಶದ ಯಾವ ಪ್ರಜೆಯೂ ಸ್ವಂತ ಸೂರಿಲ್ಲದೆ ಇರಬಾರದೆಂಬ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ಈಗಾಗಲೇ ಅಭಿವೃಧ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಜನಪರ ಕಾರ್ಯಗಳನ್ನು ಮೆಚ್ಚಿ ಮುಂದಿನ ಬಾರಿಯೂ ನಮ್ಮ ಸರಕಾರವನ್ನು ಜನರು ಅಧಿಕಾರಕ್ಕೆ ತರುತ್ತಾರೆ. ಸಾಮಾನ್ಯ ಜನರೂ ಕೂಡ ಮುಖ್ಯ ವಾಹಿನಿಗೆ ಬರಬೇಕು ಅಂತಹ ಕೆಲಸವನ್ನು ಮಾಡಲಾಗುತ್ತಿದೆ ಎಂದು ವಿ ಸೋಮಣ್ಣ ಹೇಳಿದರು.
ಹೆಜಮಾಡಿ ಮೀನುಗಾರಿಕ ಬಂದರು ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಿದ ಮುಖ್ಯಮಂತ್ರಿ ಯಡಿಯೂರಪ್ಪ -Vishwanews24
