ಈಗ ಬಿಜೆಪಿಯವರು ನಾಟಕ ಆಡಲು ಶುರು ಮಾಡಿದ್ದಾರೆ, ಹರ್ ಘರ್ ತಿರಂಗಾ ಎಂಬುದು ನಾಟಕ : ಸಿದ್ದರಾಮಯ್ಯ – Vishwanews24
ಇವತ್ತು ನಾವು ಸ್ವಾತಂತ್ರ್ಯ ಆಗಿರುವುದಕ್ಕೆ ಕಾಂಗ್ರೆಸ್ ಕಾರಣ..
ಈಗ ಬಿಜೆಪಿಯವರು ನಾಟಕ ಆಡಲು ಶುರು ಮಾಡಿದ್ದಾರೆ, ಹರ್ ಘರ್ ತಿರಂಗಾ ಎಂಬುದು
ನಾಟಕ..
ನರೇಂದ್ರ ಮೋದಿ ದೊಡ್ಡ ನಾಟಕಕಾರ, ನಕಲಿ ದೇಶ ಪ್ರೇಮಿಗಳ ಬಾಯಿ ಮುಚ್ಚಿಸುವ ಕೆಲಸ
ಮಾಡಬೇಕಿದೆ..
ಚಳಿ ಬಿಟ್ಟು ಎದ್ದು ನಿಂತು ಹೋರಾಟ ಮಾಡಬೇಕು. ಜನರಿಗೆ ಸತ್ಯ ತಿಳಿಸಬೇಕು..
ಬೆಂಗಳೂರು: ನಕಲಿ ದೇಶ ಪ್ರೇಮಿಗಳ ಬಾಯಿ ಮುಚ್ಚಿಸುವ ಕೆಲಸ ಮಾಡಬೇಕಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ನಡೆದ ಕ್ವಿಟ್ ಇಂಡಿಯಾ ಚಳವಳಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ ಬಿಜೆಪಿ ಹಾಗೂ ಆರ್ ಎಸ್ ಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಆರ್ ಎಸ್ ಎಸ್ ಕಚೇರಿಯಲ್ಲಿ ತ್ರಿವರ್ಣ ಧ್ವಜ ಹಾರಿಸಿರಲಿಲ್ಲ. ಬಳಿಕ ಇಬ್ಬರು ಯುವಕರು ಕಚೇರಿಗೆ ತೆರಳಿ ರಾಷ್ಟ್ರ ಧ್ವಜ ಹಾರಿಸಿದ ಬಳಿಕ ಆರ್ ಎಸ್ ಎಸ್ ಕಚೇರಿಯಲ್ಲಿ ತಿರಂಗಾ ಹಾರಿಸಲಾಯಿತು ಎಂದರು.
ಆರ್ ಎಸ್ ಎಸ್ ಮೇಲ್ಜಾತಿಯ ಸಂಘಟನೆಯಾಗಿದೆ. ಅವರು ಚಾತುರ್ವರ್ಣ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟವರು. ಅದು ಮುಂದುವರಿದರೆ ಶೋಷಣೆ ಮುಂದುವರಿಯುತ್ತದೆ ಎಂದರು.
ದ್ವೇಷ ಭಕ್ತರನ್ನು ದೇಶ ಬಿಟ್ಟು ಹೋಗಿ ಎಂದು ಕರೆ ಕೊಡಬೇಕಿದೆ : ಬಿ.ಕೆ. ಹರಿಪ್ರಸಾದ್ – Vishwanews24
ಸಮಾಜದಲ್ಲಿ ಅಸಮಾನತೆಗೆ ಕಾರಣ ನಮ್ಮ ಶ್ರೇಣೀಕೃತ ವ್ಯವಸ್ಥೆ ಹಾಗೂ ಜಾತಿ ವ್ಯವಸ್ಥೆ ಕಾರಣ. ಆದರೆ, ರಾಷ್ಟ್ರ ಧ್ವಜ, ಸಂವಿಧಾನ ವಿರೋಧ ಮಾಡುವವರು ಇವರಿಗೆ ಹೇಗೆ ದೇಶ ಭಕ್ತಿ ಬರಲು ಸಾಧ್ಯ? ಎಂದು ಪ್ರಶ್ನಿಸಿದರು.
ಈಗ ಬಿಜೆಪಿಯವರು ನಾಟಕ ಆಡಲು ಶುರು ಮಾಡಿದ್ದಾರೆ. ಹರ್ ಘರ್ ತಿರಂಗಾ ಎಂಬುದು ನಾಟಕ. ಇವತ್ತು ನಾವು ಸ್ವಾತಂತ್ರ್ಯ ಆಗಿರುವುದಕ್ಕೆ ಕಾಂಗ್ರೆಸ್ ಕಾರಣ. ಸಾವರ್ಕರ್ ಮುಚ್ಚಳಿಕೆ ಬರೆದು ಕೊಟ್ಟವರು ಬ್ರಿಟಿಷರಿಗೆ. ಹೆಡ್ಗೇವಾರ್, ಗೋಲ್ವಳ್ಕರ್ ಜೈಲಿಗೆ ಹೋಗಿದ್ದಾರಾ? ಎಂದು ಪ್ರಶ್ನಿಸಿದರು.
ಇವರು ನಮಗೆ ಸ್ವಾತಂತ್ರ್ಯದ ಬಗ್ಗೆ ಭಾಷಣ ಮಾಡುತ್ತಾರೆ. ಇವರಿಗೆ ಯಾವ ನೈತಿಕತೆ ಇದೆ. ನರೇಂದ್ರ ಮೋದಿ ದೊಡ್ಡ ನಾಟಕಕಾರ. ಈ ನಿಟ್ಟಿನಲ್ಲಿ ನಕಲಿ ದೇಶ ಪ್ರೇಮಿಗಳ ಬಾಯಿ ಮುಚ್ಚಿಸುವ ಕೆಲಸ ಮಾಡಬೇಕಿದೆ. ಚಳಿ ಬಿಟ್ಟು ಎದ್ದು ನಿಂತು ಹೋರಾಟ ಮಾಡಬೇಕು. ಜನರಿಗೆ ಸತ್ಯ ತಿಳಿಸಬೇಕು ಎಂದರು.
ನೆಹರೂ 11 ವರ್ಷ ಜೈಲಿಗೆ ಹೋಗಿದ್ದರು. ಆದರೆ ಬಿಜೆಪಿ ನಾಯಕರು ಜೈಲಿಗೆ ಹೋಗಿದ್ದಾರಾ? ಎಂದು ಬಿಜೆಪಿ ಹಾಗೂ ಆರ್ ಎಸ್ ಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಬೈಂದೂರು: ಬಾಲಕಿ ನೀರುಪಾಲು : ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ..
