ಉಕ್ರೇನ್ನ ಪೋಲೆಂಡ್ನಿಂದ 242 ವಿದ್ಯಾರ್ಥಿಗಳು ಇಂದು ದೆಹಲಿಗೆ – Vishwanews24
ಉಕ್ರೇನ್ನ ಪೋಲೆಂಡ್ನಿಂದ 242 ವಿದ್ಯಾರ್ಥಿಗಳು ಇಂದು ದೆಹಲಿಗೆ – Vishwanews24
ನವದೆಹಲಿ : ಉಕ್ರೇನ್ನ ಪೋಲೆಂಡ್ನಿಂದ 242 ಮಂದಿ ವೈದ್ಯಕೀಯ ವಿದ್ಯಾರ್ಥಿಗಳನ್ನು ಹೊತ್ತ ವಿಶೇಷ ವಿಮಾನ ಇಂದು ಶುಕ್ರವಾರ ದೆಹಲಿಗೆ ಬಂದಿಳಿದಿದೆ.
ಭಾರತ ಸರ್ಕಾರ, ರೆಡ್ಕ್ರಾಸ್ ಮತ್ತು ಭಾರತೀಯ ರಾಯಭಾರ ಕಚೇರಿಯು ನಮಗೆ ಸಾಕಷ್ಟು ಸಹಾಯ ಮಾಡಿದ್ದು, ನಮ್ಮನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಹಸಿರು ಕಾರಿಡಾರ್ ಅನ್ನು ನಿರ್ಮಿಸಿದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳು ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
ಇನ್ನು ಕದನ ವಿರಾಮ ಘೋಷಣೆಯಾದ ಬಳಿಕ ನಮ್ಮನ್ನು ಸ್ಥಳಾಂತರ ಮಾಡಲಾಗಿದ್ದು, ಅದಕ್ಕೂ ಮೊದಲು ಬಾಂಬ್ ಮತ್ತು ಶೆಲ್ಲಿಂಗ್ ದಾಳಿ ನಿರಂತರ ನಡೆಯುತ್ತಲೇ ಇತ್ತು. ಕೇಂದ್ರ ಸರ್ಕಾರ ನಮಗೆ ಸರಿಯಾದ ಸ್ಥಳಾಂತರ, ನೇರ ಬಸ್ಸು ಮತ್ತು ರೈಲುಗಳ ವ್ಯವಸ್ಥೆ ಒದಗಿಸಿದೆ ಎಂದು ಹೇಳಿದ್ದಾರೆ.
