ಉಡುಪಿ : ಕಮಲಶಿಲೆ ದೇವಸ್ಥಾನದ ಒಳಗೆ ಹರಿದುಬಂದ ಕುಬ್ಜಾ ನದಿ ನೀರು .. ಭಕ್ತರಿಂದ ದೇವಿಗೆ ವಿಶೇಷ ಆರತಿ ಸೇವೆ – Vishwanews24
ಉಡುಪಿ : ಕಮಲಶಿಲೆ ದೇವಸ್ಥಾನದ ಒಳಗೆ ಹರಿದುಬಂದ ಕುಬ್ಜಾ ನದಿ ನೀರು .. ಭಕ್ತರಿಂದ ದೇವಿಗೆ ವಿಶೇಷ ಆರತಿ ಸೇವೆ – Vishwanews24
ಉಡುಪಿ : ಉಡುಪಿ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿದಿದ್ದು, ಕುಬ್ಜಾ ನದಿ ತುಂಬಿ ಹರಿಯುತ್ತಿದೆ. ಕುಬ್ಜಾ ನದಿ ನೀರು ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದ ಒಳಗೆ ಹರಿದು ಬಂದಿದೆ.

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನಲ್ಲಿರುವ ದೇವಾಲಯದ ಗರ್ಭಗುಡಿವರೆಗೆ ನದಿ ನೀರು ಹರಿದು ಬಂದಿದೆ. ಕುಬ್ಜಾ ನದಿ ತೀರದಲ್ಲೇ ಕಮಲಶಿಲೆ ದೇಗುಲವಿದೆ. ಪ್ರತಿವರ್ಷ ಮಳೆಗಾಲದಲ್ಲಿ ಮಳೆ ನೀರು ದೇಗುಲದೊಳಗೆ ತುಂಬಿ ಹರಿಯುತ್ತದೆ. ಗರ್ಭಗುಡಿಗೆ ನೀರು ಪ್ರವೇಶಿಸುತ್ತಿದ್ದಂತೆ ದೇವಿಗೆ ಆರತಿ ಮಾಡಿದ್ದಾರೆ. ಸ್ಥಳೀಯ ಭಕ್ತರು ಅರ್ಚಕರ ಸಮ್ಮುಖದಲ್ಲಿ ವಿಶೇಷ ಆರತಿ ಸೇವೆ ಮಾಡಿದ್ಧಾರೆ.
ಚಾಮುಂಡಿ ಬೆಟ್ಟದ ʻ ರೋಪ್ ವೇಗೆ ಬ್ರೇಕ್ ʼ : ಸ್ಪಷ್ಟನೆ ನೀಡಿದ ಸಚಿವ ಎಸ್.ಟಿ ಸೋಮಶೇಖರ್ – Vishwanews24
