ಉಡುಪಿ : ಕರಂಬಳ್ಳಿ ವಾರ್ಡ್ ಬೂತ್ ಸಂಖ್ಯೆ 146 ವ್ಯಾಪ್ತಿಯಲ್ಲಿ ವಿಜಯ ಸಂಕಲ್ಪ ಅಭಿಯಾನ : ಶಾಸಕ ರಘುಪತಿ ಭಟ್ ಭಾಗಿ – Vishwanews24

Featured, ಉಡುಪಿ

ಉಡುಪಿ : ಕರಂಬಳ್ಳಿ ವಾರ್ಡ್ ಬೂತ್ ಸಂಖ್ಯೆ 146 ವ್ಯಾಪ್ತಿಯಲ್ಲಿ ವಿಜಯ ಸಂಕಲ್ಪ ಅಭಿಯಾನ : ಶಾಸಕ ರಘುಪತಿ ಭಟ್ ಭಾಗಿ

ಜಿಲ್ಲೆಯಾದ್ಯಂತ ಜನವರಿ 21ರಿಂದ ಜನವರಿ 29 ರವರೆಗೆ “ವಿಜಯ ಸಂಕಲ್ಪ ಅಭಿಯಾನ” ನಡೆಯುತ್ತಿದ್ದು, ಇಂದು ದಿನಾಂಕ 21-01-2023 ರಂದು ಕರಂಬಳ್ಳಿ ವಾರ್ಡಿನ ಬೂತ್ ಸಂಖ್ಯೆ 146 ವ್ಯಾಪ್ತಿಯಲ್ಲಿ ನಡೆದ “ವಿಜಯ ಸಂಕಲ್ಪ ಅಭಿಯಾನ” ದಲ್ಲಿ ಶಾಸಕರಾದ ಕೆ. ರಘುಪತಿ ಭಟ್ ರವರು ಭಾಗವಹಿಸಿದರು.

ಕರಂಬಳ್ಳಿ ವಾರ್ಡಿನ ಬೂತ್ ಸಂಖ್ಯೆ 146 ವ್ಯಾಪ್ತಿಯ ಮನೆ ಮನೆಗೆ ತೆರಳಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳ ಕರಪತ್ರ ಹಾಗೂ ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಕಳೆ 2018 ರಿಂದ ಈ ವರೆಗೆ ಶಾಸಕ ರಘುಪತಿ ಭಟ್ ಅವರು ಮಂಜೂರುಗೊಳಿಸಿದ ಅನುದಾನದ ಸಮಗ್ರ ವಿವರದ ಸಾಧನೆಯ ಕಿರುಹೊತ್ತಿಗೆ ನೀಡಿ 8000090009 ನಂಬರಿಗೆ ಕರೆ ನೀಡುವ ಮೂಲಕ ಭಾರತೀಯ ಜನತಾ ಪಾರ್ಟಿಯ ಸದಸ್ಯತ್ವದ ನೋಂದಣಿ ಮಾಡಲಾಯಿತು.

ಬೈಕಿನಲ್ಲಿ ಬಂದು ಉಡುಪಿಯಲ್ಲಿ ನೀರ್ ದೋಸೆ ಸವಿದ ಈಶ ಫೌಂಡೇಶನ್ ಸದ್ಗುರು – Vishwanews24

ಈ ಸಂದರ್ಭದಲ್ಲಿ ಸ್ಥಳೀಯ ನಗರಸಭಾ ಸದಸ್ಯರಾದ ಗಿರಿಧರ್ ಆಚಾರ್ಯ ಕರಂಬಳ್ಳಿ, ವಿಜಯ ಸಂಕಲ್ಪ ಅಭಿಯಾನದ ಉಸ್ತುವಾರಿಗಳಾದ ರಾಘವೇಂದ್ರ ಕಿಣಿ, ಕರಂಬಳ್ಳಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಕಿಶೋರ್ ಕರಂಬಳ್ಳಿ, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್ ಮಣಿಪಾಲ್, ಬೂತ್ ಅಧ್ಯಕ್ಷರಾದ ಪಾಂಡುರಂಗ ಶೆಟ್ಟಿಗಾರ್, ಗಿರೀಶ್ ಕೆ, ಜಯಕರ ಆಚಾರ್ಯ, ಸತ್ಯನಾರಾಯಣ, ಕಾರ್ಯಕರ್ತರಾದ ಮಂಜುಳಾ ಪ್ರಸಾದ್, ಉಷಾ ಪೂಜಾರಿ, ಗಿರೀಶ್ ಉಪಸ್ಥಿತರಿದ್ದರು.

ಬೈಕಿನಲ್ಲಿ ಬಂದು ಉಡುಪಿಯಲ್ಲಿ ನೀರ್ ದೋಸೆ ಸವಿದ ಈಶ ಫೌಂಡೇಶನ್ ಸದ್ಗುರು – Vishwanews24

Leave a Reply