ಉಡುಪಿ : ಕಾಂಗ್ರೆಸ್ ಮುಖಂಡ, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ನಿಧನ :ಮೊಹಮ್ಮದ್ ಫಾರೂಕ್ ಚಂದ್ರನಗರ ಸಂತಾಪ.
ಉಡುಪಿ: ಕೇಂದ್ರದ ಮಾಜಿ ಸಚಿವರು,ಲೋಕಸಭೆಯ ಮಾಜಿ ಸಂಸದರು,ರಾಜ್ಯ ಸಭಾ ಸದಸ್ಯರು, ಹಿರಿಯರಾದ ಶ್ರೀ ಆಸ್ಕರ್ ಫರ್ನಾಂಡಿಸ್ ರವರ ನಿಧನ ಪಕ್ಷಕ್ಕೆ ತುಂಬಲಾರದ ನಷ್ಟ.
ದೇಶದ ಹಲವು ರಾಜ್ಯಗಳಲ್ಲಿ ಪಕ್ಷದ ಉಸ್ತುವಾರಿ ಗಳಾಗಿ ಕ್ಲಿಷ್ಟ ಪರಿಸ್ಥಿತಿ ಗಳನ್ನು ನಿಭಾಯಿಸಿ,ಪಕ್ಷಕ್ಕೆ ಬಲ ತುಂಬಿ,ಸಂಘಟನೆಯಲ್ಲಿ ಎಲ್ಲರನ್ನೂ ಒಗ್ಗೂಡಿಸಿ ಅಧಿಕಾರಕ್ಕೆ ಬರುವಲ್ಲಿ ಪ್ರಾಮಾಣಿಕ ವಾಗಿ ತೊಡಗಿಕೊಂಡವರಾಗಿದ್ದರು.
ಅನೇಕ ಯುವ ಮುಂದಾಳುಗಳನ್ನು ಗುರುತಿಸಿ ಮುಂಚೂಣಿಗೆ ತಂದು ಪಕ್ಷದ ಕಾರ್ಯಚಟುವಟಿಗಳಲ್ಲಿ ಪಾಲ್ಗೊಳ್ಳುವಂತೆ ಹುರಿದುಂಬಿಸುತ್ತಿದ್ದರು.
ಸರಳ ಸಜ್ಜನ ವ್ಯಕ್ತಿತ್ವದ ಆಸ್ಕರ್ ಫರ್ನಾಂಡಿಸ್ ನಿಧನ ಶೂನ್ಯವನ್ನ ಸೃಷ್ಟಿಸಿದೆ.
ಭಗವಂತ ಅವರ ಆತ್ಮಕ್ಕೆ ಸದ್ಗತಿ ದಯಪಾಲಿಸಲಿ ಎಂದು ಕೆಪಿಸಿಸಿ ಅಲ್ಪಸಂಖ್ಯಾತ ರಾಜ್ಯ ಸಂಯೋಜಕ ಮೊಹಮ್ಮದ್ ಫಾರೂಕ್ ಚಂದ್ರನಗರ ಸಂತಾಪ ಸೂಚಿಸಿದ್ದಾರೆ.
