ಉಡುಪಿ : ಕೊರೋನಾ ಸೋಂಕಿನಿoದ ಮೃತಪಟ್ಟ ನೌಕರನ ಮನೆಗೆ ಡಿಹೆಚ್‌ಓ ಭೇಟಿ -Vishwanews24

Featured, ಉಡುಪಿ

ಉಡುಪಿ : ಕೊರೋನಾ ಸೋಂಕಿನಿoದ ಮೃತಪಟ್ಟ ನೌಕರನ ಮನೆಗೆ ಡಿಹೆಚ್‌ಓ ಭೇಟಿ -Vishwanews24

ಉಡುಪಿ : ಕೊರೋನಾ ಸೋಂಕಿನಿoದ ಮೃತಪಟ್ಟ ಕಾರ್ಕಳ ತಾಲೂಕಿನ ಬಜಗೋಳಿ ಆರೋಗ್ಯ ಕೇಂದ್ರದ ಸರಕಾರಿ ಗ್ರೂಪ್ ಡಿ ನೌಕರನ ಮನೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗಭೂಷಣ ಉಡುಪ ಇತ್ತೀಚಿಗೆ ಭೇಟಿ ನೀಡಿ, ಮೃತನ ಕುಟುಂಬಕ್ಕೆ ಸಾಂತ್ವಾನ ಹೇಳಿ, ಸರಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಹಾಗೂ ವಿಮಾ ಪರಿಹಾರ ದೊರಕಿಸಿಕೊಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕಾರ್ಕಳ ತಾಲೂಕು ಆರೋಗ್ಯಾಧಿಕಾರಿ ಡಾ. ಕೃಷ್ಣಾನಂದ ಶೆಟ್ಟಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್ ಹಾಗೂ ಹಿರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿ ಸತೀಶ್ ರಾವ್ ಉಪಸ್ಥಿತರಿದ್ದರು.