ಉಡುಪಿ: ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ ಆನ್‌ಲೈನ್ ಮೂಲಕ ಸಾವಿರಾರು ರೂಪಾಯಿ‌ ವಂಚನೆ – Vishwanews24

Featured, ಉಡುಪಿ

ಉಡುಪಿ: ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ ಖಾತೆಯಿಂದ ಆನ್‌ಲೈನ್ ಮೂಲಕ ಸಾವಿರಾರು

ರೂಪಾಯಿ‌ ವಂಚನೆ

ಉಡುಪಿ: ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ ಖಾತೆಯಿಂದ ಸಾವಿರಾರು ರೂ. ಹಣ ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿ ವಂಚಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪರ್ಕಳ ಸಣ್ಣಕ್ಕಿಬೆಟ್ಟುವಿನ ಸುಬ್ರಹ್ಮಣ್ಯ ಕೃಷ್ಣ ನಾಯ್ಕ(34) ಎಂಬವರ ಮೊಬೈಲ್‌ಗೆ ಆ.21ರಂದು ಕೆ.ವೈಸಿ ಅಪ್ಡೇಟ್ ಮಾಡುವ ಬಗ್ಗೆ ಸಂದೇಶ ಬಂದಿತ್ತು.

ಈ ಸಂದೇಶವನ್ನು ಬ್ಯಾಂಕ್‌ನವರೆ ಕಳುಹಿಸಿರಬಹುದೆಂದು ತಿಳಿದ ಸುಬ್ರಹ್ಮಣ್ಯ ಲಿಂಕ್‌ನ್ನು ಓಪನ್ ಮಾಡಿದ್ದು, ಆಗ ಬಂದ ಓಟಿಪಿಯನ್ನು ಅಪಡೇಟ್ ಮಾಡಿದ ತಕ್ಷಣ ಇವರ ಬ್ಯಾಂಕ್ ಖಾತೆಯಿಂದ ಒಟ್ಟು 93,804ರೂ. ಹಣ ಕಡಿತಗೊಂಡು ವಂಚನೆಗೆ ಒಳಗಾಗಿದ್ದಾರೆಂದು ದೂರಲಾಗಿದೆ.

ವಿಜಯಪುರ : ಕಾಂಗ್ರೆಸ್ ಕಚೇರಿಯಲ್ಲಿ ರಾರಾಜಿಸಿದ ಸಾವರ್ಕರ್ ಫೋಟೋ – Vishwanews24

 

Leave a Reply