ಉಡುಪಿ: ಭಿಕ್ಷಾಟನೆ, ವ್ಯಾಪಾರ ನಿರತ 7 ಮಕ್ಕಳ ರಕ್ಷಣೆ – Vishwanews24

Featured, ಉಡುಪಿ

ಉಡುಪಿ: ಭಿಕ್ಷಾಟನೆ, ವ್ಯಾಪಾರ ನಿರತ 7 ಮಕ್ಕಳ ರಕ್ಷಣೆ

ಉಡುಪಿ: ಜಿಲ್ಲೆಯಲ್ಲಿ ಭಿಕ್ಷಾಟನೆ ನಿರತ ಮಕ್ಕಳ ರಕ್ಷಣೆಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪೊಲೀಸ್ ಇಲಾಖೆ, ಮಕ್ಕಳ ಸಹಾಯವಾಣಿ ಹಾಗೂ ಹಿರಿಯ ನಾಗರಿಕ ಸಮಿತಿಯ ನಿತ್ಯಾನಂದ ಒಳಕಾಡು ಸಹಯೋಗದೊಂದಿಗೆ ಶುಕ್ರವಾರ ಮಣಿಪಾಲ ಸುತ್ತಮುತ್ತ, ಉಡುಪಿ ಬಸ್ ನಿಲ್ದಾಣಗಳಲ್ಲಿ ಹಾಗೂ ಸುತ್ತಮುತ್ತಲಿನ ದೇವಸ್ಥಾನಗಳಲ್ಲಿ ಜಂಟಿಯಾಗಿ ಕಾರ್ಯಚರಣೆ ನಡೆಸಿ ಒಟ್ಟು ಏಳು ಮಂದಿ ಮಕ್ಕಳನ್ನು ರಕ್ಷಿಸಲಾಗಿದೆ.

ಇವರಲ್ಲಿ 5 ಮಂದಿ ಕೀಪಂಚ್ ಮಾರುವ ಮಕ್ಕಳು ಹಾಗೂ ಇಬ್ಬರು ಬೆಲೂನ್ ಮಾರುವ ಮಕ್ಕಳಿದ್ದು (4 ಗಂಡು, 3 ಹೆಣ್ಣು), ಇವರನ್ನೆಲ್ಲಾ ರಕ್ಷಣೆ ಮಾಡಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಯಿತು.

ಲಂಚ ಆರೋಪ ಸಾಬೀತು: ಮನಪಾ ಅಧಿಕಾರಿಗೆ 1 ಕೋಟಿ ರೂ. ದಂಡ; 4 ವರ್ಷ ಶಿಕ್ಷೆ – Vishwanews24

ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳಾದ ಮಹೇಶ್ ರಕ್ಷಣಾಧಿಕಾರಿ (ಸಾಂಸ್ಥಿಕ), ಕಪಿಲಾ ರಕ್ಷಣಾಧಿಕಾರಿ (ಅಸಾಂಸ್ಥಿಕ), ಯೋಗೀಶ್ ಸಮಾಜ ಕಾರ್ಯಕರ್ತ, ಸುರಕ್ಷಾ ಸಮಾಜ ಕಾರ್ಯಕರ್ತೆ, ಸಂದೇಶ್ ಹಾಗೂ ಸುನಂದ ಔಟ್ ರಿಚ್ ವರ್ಕರ್, ಮಕ್ಕಳ ಸಹಾಯವಾಣಿ 1098 ಸಿಬ್ಬಂದಿಗಳಾದ ನಯನ, ರೇಷ್ಮಾ, ಪೊಲೀಸ್ ಇಲಾಖೆಯ ಸಾವಿತ್ರಿ, ಗಂಗರಾಜಪ್ಪ ಎನ್ ಹಾಗೂ ಹಿರಿಯ ನಾಗರಿಕ ಸಮಿತಿಯ ನಿತ್ಯಾನಂದ ಒಳಕಾಡು ಭಾಗವಹಿಸಿದ್ದರು.

ಪಡುಬಿದ್ರಿ : ಎಂಡ್ ಪಾಯಿಂಟ್ ಬೀಚ್‍ ಗೆ ಮೂರನೇ ಬಾರಿ ‘ಬ್ಲೂಫ್ಲ್ಯಾಗ್’ ಮಾನ್ಯತೆ – Vishwanews24

Leave a Reply