ಉಡುಪಿ : ಯುವಕರಿಗೆ ಸೇನಾಪಡೆ ಸೇರ್ಪಡೆಗೆ ತರಬೇತಿ – ಅರ್ಜಿ ಆಹ್ವಾನ – Vishwanews24
ಉಡುಪಿ : ಯುವಕರಿಗೆ ಸೇನಾಪಡೆ ಸೇರ್ಪಡೆಗೆ ತರಬೇತಿ – ಅರ್ಜಿ ಆಹ್ವಾನ – Vishwanews24
ಉಡುಪಿ : ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಭಾರತೀಯ ಸೇನೆ/ಇತರೆ ಸಮವಸ್ತç ಸೇವೆಗಳಿಗೆ ಆಯ್ಕೆಯಾಗಲು ಉದ್ದೇಶಿಸಿರುವ ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ವಸತಿಯುತ 4 ತಿಂಗಳ ಪೂರ್ವ ಸಿದ್ಧತೆ ಬಗ್ಗೆ ವೃತ್ತಿ ಮಾರ್ಗದರ್ಶನ ಹಾಗೂ ತರಬೇತಿಯನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ (ಬಾಲಕರಿಗೆ ಮಾತ್ರ.)
10 ನೇ ತರಗತಿ ಉತ್ತೀರ್ಣರಾಗಿರುವ, 1 ಅಕ್ಟೋಬರ್ 2000 ದಿಂದ 01 ಏಪ್ರಿಲ್ 2005 ರ ನಡುವೆ ಜನಿಸಿರುವ ಪರಿಶಿಷ್ಟ ಜಾತಿಯ ಯುವಕರು ಆಗಸ್ಟ್ 5 ರೊಳಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಇಲಾಖಾ ವೆಬ್ಸೈಟ್ https://sw/kar.nic.in ಅನ್ನು ಸಂಪರ್ಕಿಸುವುದು.
ಆಸಕ್ತರು ತಮ್ಮ ಅರ್ಜಿ ಹಾಗೂ ಪೂರಕ ದಾಖಲಾತಿಗಳನ್ನು ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ರಜತಾದ್ರಿ ಬಿ ಬ್ಲಾಕ್, 2 ನೇ ಮಹಡಿ, ಮಣಿಪಾಲ-576104, ಉಡುಪಿ ಜಿಲ್ಲೆ ಇಲ್ಲಿಗೆ ಖುದ್ದಾಗಿ ಅಥವಾ ನೋಂದಾಯಿತ ಅಂಚೆ ಮೂಲಕ ಸಲ್ಲಿಸಬಹುದು.
ಹೆಚ್ಚಿನ ವಿವರಗಳಿಗೆ: ಉಡುಪಿ ಜಿಲ್ಲೆ- 0820 2574892 ಮತ್ತು ಪರೀಕ್ಷಾ ಪೂರ್ವ ತರಬೇತಿ ಕೇಂದ್ರ- 080-22207784 ನ್ನು ಸಂಪರ್ಕಿಸುವ0ತೆ ಸಮಾಜ ಕಲ್ಯಾಣ ಇಲಾಖೆ ಪ್ರಕಟಣೆ ತಿಳಿಸಿದೆ.
