ಉಡುಪಿ : ವೀರಪ್ಪ ಮೊಯ್ಲಿ ಭಾಷಣಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಂದಲೇ ವಿರೋಧ ; ಹಳೆ ಕಥೆ ಸಾಕು ಮುಂದೇನು ಮಾಡಬೇಕು ಹೇಳಿ ಎಂದ ಕಾರ್ಯಕರ್ತರು – Vishwanews24

Featured, ಉಡುಪಿ

ಉಡುಪಿ : ವೀರಪ್ಪ ಮೊಯ್ಲಿ ಭಾಷಣಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಂದಲೇ ವಿರೋಧ ; ಹಳೆ ಕಥೆ ಸಾಕು ಮುಂದೇನು ಮಾಡಬೇಕು ಹೇಳಿ ಎಂದ ಕಾರ್ಯಕರ್ತರು

ಉಡುಪಿ: ಜಿಲ್ಲೆಯಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ನವ ಸಂಕಲ್ಪ ಶಿಬಿರ ನಡೆದಿದ್ದು, ಶಿಬಿರವನ್ನು ಉದ್ಘಾಟಿಸಿ ಭಾಷಣ ಮಾಡುತ್ತಿದ್ದ ವೀರಪ್ಪ ಮೊಯ್ಲಿಗೆ ಕಾಂಗ್ರೆಸ್ ಕಾರ್ಯಕರ್ತರೇ ವಿರೋಧ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಹಳೆ ಕಥೆ ಸಾಕು ಮುಂದೇನು ಮಾಡಬೇಕು ಹೇಳಿ ಎಂದ ಕಾರ್ಯಕರ್ತರು ಪ್ರಶ್ನಿಸಿದ್ದಾರೆ. ಪಕ್ಷ ಸಂಘಟಿಸಲು ಹೊಸತೇನಾದರೂ ಹೇಳಿ. ಕುಂದಾಪುರ ಭಾಗದ ಕಾಂಗ್ರೆಸ್ ಕಾರ್ಯಕರ್ತರು ವೀರಪ್ಪ ಮೊಯ್ಲಿಯವರನ್ನು ತರಾಟೆಗೆತ್ತಿಕೊಂಡಿದ್ದಾರೆ. ನಿಮ್ಮ ಬಳಿ ಏನಾದರೂ ಹೊಸತಿದ್ದರೆ ನೀವೇ ಹೇಳಿ ಎಂದು ಮೊಯ್ಲಿ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.

ನಿಮ್ಮ ಸಮಸ್ಯೆ ಏನು ಹೇಳಿ ? ನನ್ನ ಮಾತು ಬೇಡವಾದರೆ ನಿಲ್ಲಿಸುತ್ತೇನೆ. ನನಗೆ ಭಾಷಣ ಮಾಡುವ ಚಟ ಇಲ್ಲ. ಕಾರ್ಯಾಗಾರದಲ್ಲಿ ಈ ವಿಚಾರಗಳನ್ನೆಲ್ಲ ಕಾರ್ಯಕರ್ತರು ತಿಳಿದುಕೊಳ್ಳಬೇಕು. ಕಾರ್ಯಾಗಾರದಲ್ಲಿ ಭಾಗವಹಿಸಲು ಮಾನಸಿಕ ಸಿದ್ಧತೆ ಬೇಕು. ಕೆಲವು ವರ್ಗದವರಿಗೆ ನಾನು ಹೇಳುವ ಮಾತು ಕೇಳಲು ಕಷ್ಟವಾಗುತ್ತೆ. ಕಷ್ಟವಾದರೂ ಕೂಡ ನಾವು ಪಕ್ಷ ಕಟ್ಟಬೇಕು. ಕೇವಲ ಸ್ಲೋಗನ್ ಕೂಗಿದರೆ ಪಕ್ಷ ಕಟ್ಟಲು ಸಾಧ್ಯವಿಲ್ಲ ಎಂದು ಕಾರ್ಯಕರ್ತರಿಗೆ ಮೋಯ್ಲಿ ತಿರುಗೇಟು ನೀಡಿದ್ದಾರೆ.

ಉಡುಪಿ: ಲಾರಿ ಮತ್ತು ಬೈಕ್ ಢಿಕ್ಕಿ : ಓರ್ವ ಸ್ಥಳದಲ್ಲೇ ಸಾವು – Vishwanews24

Leave a Reply