ಕಡಬ : ಸ್ವಂತ ಜ್ಯುವೆಲ್ಲರಿ ಉದ್ಘಾಟನೆಯ ಸಿದ್ದತೆಯಲ್ಲಿದ್ದ ಯುವಕನ ಮೃತದೇಹ ಪತ್ತೆ – Vishwanews24
ಕಡಬ : ಸ್ವಂತ ಜ್ಯುವೆಲ್ಲರಿ ಉದ್ಘಾಟನೆಯ ಸಿದ್ದತೆಯಲ್ಲಿದ್ದ ಯುವಕನ ಮೃತದೇಹ ಪತ್ತೆ
ಕಡಬ : ಸ್ವಂತ ಜ್ಯುವೆಲ್ಲರಿ ಉದ್ಘಾಟನೆಯ ಸಿದ್ದತೆಯಲ್ಲಿದ್ದ ಯುವಕನ ಮೃತದೇಹ ಗುಂಡ್ಯ ಸಮೀಪ ಅಪಘಾತದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ಯುವಕನನ್ನು ಕಡಬ ನಿವಾಸಿ ನಾಗಪ್ರಸಾದ್ ಎಂದು ಗುರುತಿಸಲಾಗಿದೆ.
ಮರ್ಧಾಳದ ಮಸೀದಿಯ ಕಟ್ಟಡ ಸಂಕೀರ್ಣದಲ್ಲಿ ‘ಐಶ್ವರ್ಯ ಗೋಲ್ಡ್’ ಹೆಸರಿನ ಚಿನ್ನದಂಗಡಿ ತೆರೆಯಲುದ್ದೇಶಿಸಿದ್ದು, ಅದು ಇಂದು ಉದ್ಘಾಟನೆಯಾಗಬೇಕಿತ್ತು, ಈ ಹಿನ್ನೆಲೆಯಲ್ಲಿ ತಯಾರಿ ನಡೆಸಿಕೊಂಡಿದ್ದ ನಾಗಪ್ರಸಾದ್ ಅವರ ಮೃತದೇಹ ಇಂದು ಬೆಳಗ್ಗೆ ಸಕಲೇಶಪುರ ಠಾಣಾ ವ್ಯಾಪ್ತಿಯ ಗುಂಡ್ಯ ಸಮೀಪ ಅಪಘಾತದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದೆ. ಘಟನೆಯ ಬಗ್ಗೆ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದು, ತನಿಖೆಯ ನಂತರವಷ್ಟೇ ನಿಖರ ಕಾರಣ ತಿಳಿದುಬರಬೇಕಿದೆ.
ಗುರುಪುರ: ಖಾಸಗಿ ಬಸ್ – ಬೈಕ್ ಗೆ ಡಿಕ್ಕಿ : ಸವಾರ ಸಾವು – Vishwanews24
