ಉಡುಪಿ

ಕಡಲ ಮಕ್ಕಳ ಮೊಗದಲ್ಲಿ ಸಂತಸದ ಹೊನಲು.. ಕಡಲ್ಕೊರೆತ, ನದಿ ಕೊರೆತಕ್ಕೆ ಶಾಶ್ವತ ಪರಿಹಾರ

ಕಾಪು: ದಿನಬೆಳಗಾದರೆ ಕಡಲಿನ ಅಲೆಗಳನ್ನು ನೋಡುತ್ತ ಬದುಕಿದವರು ನಾವು. ಮಳೆಗಾಲ ಬಂದರೆ ಸಾಕು ನಾವು ಮನೆ ಬಿಟ್ಟು ಬದುಕಬೇಕಾದ ಪರಿಸ್ಥಿತಿ. ಕಡಲು ಯಾವಾಗ ಪ್ರಕ್ಷುಬ್ಧಗೊಳ್ಳುವುದೋ ಅನ್ನೋ ಭಯ. ಒಪ್ಪತ್ತಿನ ಊಟಕ್ಕೂ ನಾವು ಕಡಲ ಕಸುಬನ್ನು ಅವಲಂಬಿಸುವವರು.ಅಲೆಗಳ ಅಬ್ಬರಕ್ಕೆ ಬ್ರೇಕ್‌ ಹಾಕಲು ಏನಾದರೊಂದು ಮಾಡಿಕೊಡಿ ಅಂತಾ ಹಲವಾರು ವರ್ಷಗಳಿಂದ ಕಾಡಿಬೇಡಿ ದ್ದೇವೆ ಆದ್ರೆ ಪರಿಹಾರ ಮಾತ್ರ ಶೂನ್ಯ. ಹೀಗೆ ಅಳಲನ್ನು ಹೇಳಿಕೊಂಡವರು ಮಟ್ಟು ಪ್ರದೇಶದ ನಿವಾಸಿ ಅಶೋಕ್‌.

ಈ ಭಾಗದ ಜನರಿಗೆ ಮಳೆಗಾಲದಲ್ಲಿ ಕಡಲ ಕೊರೆತದ ಭಯ ಇದ್ದೇ ಇರುತ್ತದೆ. ಕಡಲ ಕಸುಬು ಮಾಡಿಕೊಂಡು ಜೀವನ ಸಾಗಿಸೋ ಇಲ್ಲಿನ ಜನರು ಮುಂಜಾನೆ ಬೆಳಕು ಹರಿಯುವ ಮೊದಲೇ ದುಡಿಮೆ ಆರಂಭಿಸುತ್ತಾರೆ. ಆದರೆ ಕಡಲು ಮನೆ ತನಕ ಬಂದು ಮನೆಯನ್ನು ಆಕ್ರಮಿಸಿಕೊಂಡರೆ ಅನ್ನೋದು ಎಂಬ ಕಡಲವಾಸಿಗಳನ್ನು ಕಾಡುತ್ತಲೇ ಇರುತ್ತದೆ.

ವರ್ಷಂಪ್ರತಿ ಜನಪ್ರತಿನಿಧಿಗಳಿಗೆ ಕಡಲ ಕೊರೆತಕ್ಕೊಂದು ಶಾಶ್ವತ ಪರಿಹಾರ ಒದಗಿಸಿಕೊಡಿ ಅಂತ ಬೇಡಿದಾಗ ಜಿಲ್ಲಾಡಳಿತದೊಂದಿಗೆ  ಸೇರಿಕೊಂಡು ಕಡಲಿಗೆ ಆಹಾರದಂತೆ ಕಲ್ಲು ತಂದು ಸುರಿದು ಕಿಸೆ ತುಂಬಿಸಿಕೊಂಡವರೇ ಹೆಚ್ಚು. ಆದ್ರೆ ಶಾಶ್ವತ ಪರಿಹಾರದ ಬಗ್ಗೆ ಯಾರೂ ಚಿಂತಿಸಿಲ್ಲ. ಈ ಬಾರಿ ನಮ್ಮ ಜನಪ್ರತಿನಿಧಿ ಅನಿಸಿಕೊಂಡ ನಮ್ಮ ಭಾಗದ ಶಾಸಕರು ನಮ್ಮ ಕಷ್ಟವನ್ನು ಅರಿತು ಸ್ಪಂದಿಸಿ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ  ಮುಂದಾಗಿ ಕಡಲ ಮಕ್ಕಳ ನೋವಿಗೆ ದನಿಯಾಗಿದ್ದಾರೆ. ನದಿ ತೀರದ ಪ್ರದೇಶದ ಜನರು ಕೂಡ ನದಿ ಕೊರೆತದಿಂದಾಗಿ ಸಮಸ್ಯೆಗೆ ಒಳಗಾಗಿದ್ದು ಇದೀಗ ಈ ಪ್ರದೇಶದಲ್ಲಿ ಸುತ್ತಲೂ ತಡೆಗೋಡೆ ಮತ್ತು ರಸ್ತೆ ನಿರ್ಮಾಣಗೊಂಡು ಜನರಿಗೆ ಬಹಳಷ್ಟು ಅನುಕೂಲವಾಗಿದೆ.

ಈ ಬಾರಿ ಜನಪ್ರತಿನಿಧಿಯೊಬ್ಬರು ಕಡಲಕೊರೆತಕ್ಕೆ ಶಾಶ್ವತ ಪರಿಹಾರ ಕಂಡುಕೊಂಡಿಕೊಂಡಿದ್ದಾರೆ. ಜಪಾನ್‌ ಮಾದರಿಯಲ್ಲಿ ಕಡಲ ಕೊರೆತ ತಡೆಗೋಡೆ ನಿರ್ಮಾಣ ಮಾಡುವ ಮೂಲಕ ಕಡಲ ಮಕ್ಕಳಲ್ಲಿ ನೆಮ್ಮದಿ ಮೂಡಿಸಿದ್ದಾರೆ. ಜಪಾನ್‌ ಮಾದರಿಯ ತಂತ್ರಜ್ಞಾನದಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣಕಾರ್ಯ ಕಾಪುವಿನ ಮಟ್ಟು ಉದ್ಯಾವರದ ವರೆಗೂ ನಡೆಯುತ್ತಿದೆ.

 

Vishwa News 24

Recent Posts

ಎಸ್‌ಟಿಪಿಯನ್ನು ಮೂಳೂರಿನಿಂದ ಬೆಳಪು ಪ್ರದೇಶಕ್ಕೆ ಸ್ಥಳಾಂತರ ಮಾಡಿದರೆ ಕಾಪು ಪುರಸಭೆಗೆ ಸಂಪೂರ್ಣ ಸ್ವಾಗತ : ದೇವಿಪ್ರಸಾದ್ ಶೆಟ್ಟಿ – vishwanews24

ಬೆಳಪು ಪ್ರದೇಶದಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳೊಂದಿಗೆ ಘಟಕ ನಿರ್ಮಿಸಿದರೆ ನಮ್ಮಿಂದ ಯಾವುದೇ ವಿರೋಧ ಇರುವುದಿಲ್ಲ : ದೇವಿಪ್ರಸಾದ್ ಶೆಟ್ಟಿ ಮೂಳೂರು…

2 days ago

ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ – vishwanews24

ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಬೆಳಗಾವಿ: ಪ್ರಿಯಕರನ ಜೊತೆ…

2 days ago

ಬಿಜೆಪಿ ನಡೆಸಿರುವ ಅಪವಿತ್ರ ಮೈತ್ರಿ ಇತಿಹಾಸವನ್ನು ದೇಶ ಮರೆತಿಲ್ಲ : ಬಿ.ಕೆ.ಹರಿಪ್ರಸಾದ್ – vishwanews24

ದೇಶದ ಜಾತ್ಯತೀತ ಮೌಲ್ಯಗಳನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷ ಸದಾ ಸಮಾನ ಚಿಂತನೆಯ ಪಕ್ಷಗಳೊಂದಿಗೆ ಕೈಜೋಡಿಸಿದೆ : ಬಿ.ಕೆ.ಹರಿಪ್ರಸಾದ್ ಬೆಂಗಳೂರು: ‘ಬಿಜೆಪಿ…

2 days ago

ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ – vishwanews24

ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ ಪಡುಬಿದ್ರಿ: ಸನಾತನ ಫೌಂಡೇಶನ್‌ನ ಅಧ್ಯಕ್ಷ,…

2 days ago

ವಿವಾಹಿತ ಮಹಿಳೆ  ಜತೆ ಲಿವ್ ಇನ್ ರಿಲೇಶನ್‌ ಶಿಪ್‌ನಲ್ಲಿದ್ದ ಯುವಕ ಶವವಾಗಿ ಪತ್ತೆ  – vishwanews24

ವಿವಾಹಿತ ಮಹಿಳೆ ಜತೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ಶವವಾಗಿ ಪತ್ತೆ  ಬೆಂಗಳೂರು: ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ನೇಣುಬಿಗಿದ…

2 days ago

ಬಿಜೆಪಿ ನಾಯಕ ಸುವೇಂದು ಅಧಿಕಾರಿ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ – vishwanews24

ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಪರ್ವ.. ಬಿಜೆಪಿ ಮೊದಲ ಸಿಎಂ ಆಗಿ ಪ್ರಮಾಣ ಸ್ವೀಕಾರ.. ಐತಿಹಾಸಿಕ ಕ್ಷಣಕ್ಕೆ ಮೋದಿ,…

2 days ago