ಕಾಂತಾರ ಚಿತ್ರದಂತೆ ತನ್ನ ಸಿನಿಮಾ ಹಿಟ್ ಆಗಲ್ಲ ಅಂತ ಹೊಟ್ಟೆಕಿಚ್ಚು ; ಆಕಾಶಕ್ಕೆ ಮುಖ ಮಾಡಿ ಉಗುಳುವ ಕೆಲಸ :- ನಟ ಚೇತನ್ ಪೋಸ್ಟ್ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಪ್ರತಿಕ್ರಿಯೆ – Vishwanews24
ಕಾಂತಾರ ಚಿತ್ರದಂತೆ ತನ್ನ ಸಿನಿಮಾ ಹಿಟ್ ಆಗಲ್ಲ ಅಂತ ಹೊಟ್ಟೆಕಿಚ್ಚು ; ಆಕಾಶಕ್ಕೆ ಮುಖ ಮಾಡಿ ಉಗುಳುವ ಕೆಲಸ :- ನಟ ಚೇತನ್ ಪೋಸ್ಟ್ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಪ್ರತಿಕ್ರಿಯೆ
ಹುಬ್ಬಳ್ಳಿ : ರಿಷಬ್ ಶೆಟ್ಟಿ ನಿರ್ದೇಶನದ ʻ ಕಾಂತಾರ ಸಿನಿಮಾʼ ವಿರುದ್ಧ ನಟ ಚೇತನ್ ವಿವಾದಾತ್ಮಕ ಪೋಸ್ಟ್ ಮಾಡಿದ ಬಗ್ಗೆ ಚಿಂತಕ ಚಕ್ರವರ್ತಿ ಸೂಲಿಬೆಲೆ ಪ್ರತಿಕ್ರಿಯೆ ನೀಡಿದ್ದಾರೆ
ಮಾಧ್ಯಮಗೊಂದಿಗೆ ಚಿಂತಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಚೇತನ್ ಒಬ್ಬ ನಟನೂ ಅಗಿಲಲ.. ಎಡಪಂಥೀಯ ವ್ಯಕ್ತಿಯೂ ಆಗಿಲ್ಲ. ಕಾಂತಾರ ಚಿತ್ರದಂತೆ ತನ್ನ ಸಿನಿಮಾ ಹಿಟ್ ಆಗಲ್ಲ ಅಂತ ಹೊಟ್ಟೆಕಿಚ್ಚು ಆಕಾಶಕ್ಕೆ ಮುಖ ಮಾಡಿ ಉಗುಳುವ ಕೆಲಸ ಮಾಡಿದ್ದಾರೆ. ಬುಡಕಟ್ಟು ಜನಾಂಗವನ್ನು ಹಿಂದೂ ಧರ್ಮದಿಂದ ಬೇರೆ ಮಾಡೋ ಹುನ್ನಾರ ನಡೆಯುತ್ತಿದೆ. ಎಂದು ಹುಬ್ಬಳ್ಳಿಯಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಿಷಬ್ ಶೆಟ್ಟಿ ಹೇಳಿದಂತೆ ಭೂತಕೋಲ ಹಿಂದೂ ಸಂಸ್ಕೃತಿಯಲ್ಲ: ನಟ ಚೇತನ್ – Vishwanews24
ಕರಾವಳಿ ಭೂತಾರಾಧನೆ ಬಗ್ಗೆ ನಟ ಚೇತನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡುವ ಮೂಲಕ ವಿವಾದ ಹುಟ್ಟಿಸಿದ್ದಾರೆ. ʻ ಕರಾವಳಿ ಭಾಗದ ಭೂತಾರಾಧನೆ ಹಿಂದೂ ಸಂಸ್ಕೃತಿ ಅಲ್ವಾʼ? ಎಂದು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡ್ತಿರೋ ಕಾಂತಾರಾ ಗೆ ವಿವಾದಾತ್ಮಕ ಪೋಸ್ಟ್ ನಟ ಚೇತನ್ ವಿವಾದ ಹುಟ್ಟುಹಾಕಿದ್ದಾರೆ.
