ಕಾಪುವಿಗೆ ಲಾಲಾಜಿ ಮಾತ್ರವಲ್ಲ ನಾನು ಕೂಡ ಟಿಕೆಟ್ ಆಕಾಂಕ್ಷಿ : ಕುಯಿಲಾಡಿ ಸುರೇಶ್ ನಾಯಕ್ : Vishwanews24
ಕಾಪುವಿಗೆ ಲಾಲಾಜಿ ಮಾತ್ರವಲ್ಲ ನಾನು ಕೂಡ ಟಿಕೆಟ್ ಆಕಾಂಕ್ಷಿ : ಕುಯಿಲಾಡಿ ಸುರೇಶ್ ನಾಯಕ್ :vishwanews24
ಉಡುಪಿ: ನವೆಂಬರ್ 7 ರಂದು ಕಾಪುವಿನಲ್ಲಿ ನಡೆಯಲಿರುವ ಜನಸ್ಪಂದನ ಸಮಾವೇಶದ ಪತ್ರಿಕಾಗೋಷ್ಠಿ ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆಯಿತು.

ಈ ಸಂಧರ್ಭದಲ್ಲಿ ಕಾಪುವಿಗೆ ಆಕಾಂಕ್ಷಿಗಳ ಪಟ್ಟಿಯ ವಿಚಾರವಾಗಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಕುಯಿಲಾಡಿ ಸುರೇಶ್ ನಾಯಕ್” ನನಗೂ ಕಾಪು ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಗ್ರಾಮವೂ ಗೊತ್ತಿದೆ ಮತ್ತು ತಳಮಟ್ಟದ ಕಾರ್ಯಕರ್ತರ ಜತೆಗೆ ನಿಕಟ ಸಂಪರ್ಕ ಹೊಂದಿದ್ದೇನೆ ಹಾಗೂ ಕ್ಷೇತ್ರದಲ್ಲಿ ಕರ್ತವ್ಯ-ಕೆಲಸ ಮಾಡಿದ ಅನುಭವ ಇದೆ ಹಾಗಾಗಿ ಲಾಲಾಜಿ ಮಾತ್ರವೇ ಅಲ್ಲ ನಾನು ಒಬ್ಬ ಕಾಪುವಿಗೆ ಟಿಕೆಟ್ ಆಕಾಂಕ್ಷಿ, ಆದರೇ ಇವೆಲ್ಲ ಬಹಿರಂಗ ಚರ್ಚೆ ಅಲ್ಲ ಪಕ್ಷದ ವೇದಿಕೆಯಲ್ಲಿ ಮಾತನಾಡಲಿದ್ದೇವೆ ಎಂದರು.

