ಕಾಪುವಿಗೆ ವಿನಯ್ ಕುಮಾರ್ ಸೊರಕೆಯ ಕೊಡುಗೆಯ ಮುಂದೆ ಬಿಜೆಪಿಯ ಸಾಧನೆ ಶೂನ್ಯ: ಬೆಳಪು ದೇವಿಪ್ರಸಾದ್ ಶೆಟ್ಟಿ:-vishwanews24

Featured, ಉಡುಪಿ

ಕಾಪುವಿಗೆ ವಿನಯ್ ಕುಮಾರ್ ಸೊರಕೆಯ ಕೊಡುಗೆಯ ಮುಂದೆ ಬಿಜೆಪಿಯ ಸಾಧನೆ ಶೂನ್ಯ: ಬೆಳಪು ದೇವಿಪ್ರಸಾದ್ ಶೆಟ್ಟಿ:vishwanews24

ಕಾಪು: ಪುರಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ ಈ ಮಧ್ಯೆ ಎಲ್ಲಾ ರಾಜಕೀಯ ಪಕ್ಷಗಳ ಕಾರ್ಯ ಚಟುವಟಿಕೆ ನಿರ್ಣಾಯಕ ಹಂತ ತಲುಪುತ್ತಿದೆ.
ಕಾಂಗ್ರೇಸ್ ಪಾರ್ಟಿ ಮಾತ್ರ ಈ ಬಾರಿ ಪುರಸಭೆಯ ಗದ್ದುಗೆ ಹಿಡಿದು ನೆನೆಗುದಿಗೆ ಬಿದ್ದ ಮತ್ತು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆಯ ಅವಧಿಯಲ್ಲಿ ಅನುಷ್ಠಾನಕ್ಕೆ ತಂದಿರುವ ಕಾಮಗಾರಿಗಳಿಗೆ ಮತ್ತೆ ಮರುಜೀವ ನೀಡಿ ಈ ಭಾಗದ ಜನರಿಗೆ ಕೊಡುಗೆ ನೀಡುವ ಉತ್ಸುಕದಲ್ಲಿದ್ದಾರೆ.


ಈ ಮಧ್ಯೆ ಇಂದು ಕಾಪುವಿನ ಕಾಂಗ್ರೇಸ್ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಪಕ್ಷದ ಮುಖಂಡರು ಬಿಜೆಪಿಯ ಆಡಳಿತದ ವಿರುದ್ಧ ಹರಿಹಾಯ್ದರು.

ಬೆಳಪು ದೇವಿಪ್ರಸಾದ್ ಶೆಟ್ಟಿ ಮಾತನಾಡಿ” ಬಿಜೆಪಿ ಆಡಳಿತ ಸಮಯದಲ್ಲಿ ಏನು ಮಾಡಿದ್ದಾರೆಂದು ದಾಖಲೆ ಸಮೇತ ಮತದಾರರಿಗೆ ತೋರಿಸಲಿ ವಿನಹ ಬರೀ ಆರೋಪ ಮತ್ತು ಸುಳ್ಳು ಹೇಳಿ ಓಟು ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುವುದು ಬೇಡ-ಕಾಪುವಿನ ಪ್ರಸ್ತುತ ಶಾಸಕರಿಗೆ ಅವರೂರಿನ ಸಮಸ್ಯೆ ಸರಿ ಮಾಡಲು ಆಗಲಿಲ್ಲ ಇನ್ನು ಪುರಸಭೆಯ ೨೩ ವಾರ್ಡಿನ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ಹೇಗೆ..? ಶಾಸಕರಾಗಿ ೪ ವರ್ಷ ಆಗುತ್ತ ಬಂತು ಆದರೆ ಇದುವರೆಗೆ ಕಾಪು ಪುರಸಭೆಗೆ ಸ್ವಹಿತಾಸಕ್ತಿಯಿಂದ ತಂದಿರುವ ಶಾಶ್ವತ ಯೋಜನೆ ಜನರ ಮುಂದೆ ಇಡಲಿ, ಕಾಪು ಕ್ಷೇತ್ರ ಮತ್ತು ಪುರಸಭೆಗೆ ವಿನಯ್ ಕುಮಾರ್ ಸೊರಕೆಯ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ತಂದಿರುವ ಅನುದಾನದ ಎದುರಿಗೆ ಬಿಜೆಪಿಯ ಸಾಧನೆ ಶೂನ್ಯ ಎಂದು ಕಿಡಿಕಾರಿದರು.


ಈ ಸಂಧರ್ಭದಲ್ಲಿ ಮುಖಮಡರಾದ ಅಶೋಕ್ ಕುಮಾರ್ ಕೊಡವೂರು,ದಿನೇಶ್ ಪುತ್ರನ್, ನವಿನ್ಚಂದ್ರ ಸುವರ್ಣ,ಎಂ.ಎ ಗಫೂರ್ ಮೊದಲಾದವರು ಉಪಸ್ಥಿತರಿದ್ದರು.

Leave a Reply