ಕಾಪುವಿನಲ್ಲಿ ಕೂಡಲೇ ಸಬ್ ರಿಜಿಸ್ಟ್ರಾರ್ ಕಛೇರಿ ತೆರೆಯಲು ಮೆಲ್ವಿನ್ ಡಿಸೋಜ ಆಗ್ರಹ – Vishwanews24
ಕಾಪುವಿನಲ್ಲಿ ಕೂಡಲೇ ಸಬ್ ರಿಜಿಸ್ಟ್ರಾರ್ ಕಛೇರಿ ತೆರೆಯಲು ಮೆಲ್ವಿನ್ ಡಿಸೋಜ ಆಗ್ರಹ
ಉಡುಪಿ: ಹೊಸ ಕಾಪು ತಾಲೂಕು ಆಗಿ ಸುಮಾರು 5 ವರ್ಷಗಳೇ ಕಳೆದರೂ ಇನ್ನೂ ಕೂಡಾ ಕಾಪುವಿನಲ್ಲಿ ಹೊಸ ಸಬ್ರಿಜಿಸ್ಟ್ರಾರ್ ಕಛೇರಿಯ ಆರಂಭ ಆಗದೇ ಇರುವುದನ್ನು ನ್ಯಾಯವಾದಿ ಮೆಲ್ವಿನ್ ಡಿಸೋಜರವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ಖಂಡಿಸಿದ್ದಾರೆ.
ಕಾಪು ತಾಲೂಕಿನ ಜನರು ಉಡುಪಿ ಅಥವಾ ಮುಲ್ಕಿ ಸಬ್ರಿಜಿಸ್ಟ್ರಾರ್ ಕಛೇರಿಗೆ ಹೋಗಿ ದಸ್ತಾವೇಜು ನೊಂದಾಯಿಸಬೇಕಾಗಿದೆ. ಮುಲ್ಕಿಗೆ ಹೋಗಲು ಟೋಲ್ ಕಟ್ಟಬೇಕಾಗಿದೆ. ಕಾಪು ತಾಲೂಕಿಗೆ ಹೊಸ ಕಟ್ಟಡ ನಿರ್ಮಾಣವಾದರೂ ಕಾಮಗಾರಿ ಸಂಪೂರ್ಣ ಆಗದೇ ಇನ್ನೂ ಕೂಡಾ ಅಲ್ಲಿಗೆ ಯಾವುದೇ ಕಛೇರಿಗಳು ವರ್ಗಾವಣೆ ಆಗಿರುವುದಿಲ್ಲ. ಕಾಪು ತಾಲೂಕಿನ ಅನೇಕ ಕಡತಗಳು ಇನ್ನೂ ಕೂಡಾ ಉಡುಪಿ ತಾಲೂಕು ಕಛೇರಿಯಲ್ಲಿಯೇ ಇದ್ದು ಕಾಪುವಿಗೆ ವರ್ಗಾವಣೆ ಆಗದೇ ಇರುವುದು ಹಿಂದಿನ 5 ವರ್ಷ ಕೆಲಸ ಮಾಡಿದ ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಕಾರಣವಾಗಿರುತ್ತದೆ. ಚುನಾವಣೆ ಹತ್ತಿರವಾಗುವ ಸಂದರ್ಭದಲ್ಲಿ ಕಾಪುವಿಗೆ ಹೊಸ ಸಬ್ ರಿಜಿಸ್ಟ್ರಾರ್ ಕಛೇರಿ ಸ್ಥಾಪನೆ ಎಂದು ಪತ್ರಿಕೆಯಲ್ಲಿ ಬಂದಿರುವುದು ಈಗ ರಚನೆಯಾಗದೇ ಇರುವುದು ಕೇವಲ ಚುನಾವಣಾ ಗಿಮಿಕ್ ಎಂದು ಸ್ಪಷ್ಟವಾಗಿದೆ. ಜನರು ಒಮ್ಮೆ ಉಡುಪಿಗೆ ಮತ್ತೊಮ್ಮೆ ಕಾಪುವಿಗೆ ಅಲೆದಾಡುವಂತಾಗಿದೆ. ಕೂಡಲೇ ಕಾಪುವಿನಲ್ಲಿ ಹೊಸ ಸಬ್ ರಿಜಿಸ್ಟ್ರಾರ್ ಕಛೇರಿ ಹಾಗೂ ಕಾಪು ತಾಲೂಕಿಗೆ ಸಿಗಬೇಕಾದ ಸೌಲಭ್ಯಗಳು ಕೂಡಲೇ ಸಿಗುವಂತೆ ಮಾಡಲು ಈಗಿನ ಶಾಸಕರು ಶ್ರಮವಹಿಸಬೇಕಾಗಿ ಅವರು ಆಗ್ರಹಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಳಿನ್ ಕುಮಾರ್ ಕಟೀಲ್ ರಾಜೀನಾಮೆ ಘೋಷಣೆ – Vishwanews24
ಕಾಪು ಕ್ಷೇತ್ರದ ಮಾಜಿ ಶಾಸಕರಾದ ವಿನಯ್ ಕುಮಾರ್ ಸೊರಕೆಯವರ ಕನಸಿನ ಕೂಸು ಕಾಪು ತಾಲೂಕು ಅವರ ಅನುಪಸ್ಥಿತಿಯಲ್ಲಿ ಸೌಲಭ್ಯ ವಂಚಿತವಾಗಿದೆ. ಕಾಪು ಕ್ಷೇತ್ರದ ಅಭಿವೃದ್ಧಿಯ ಹರಿಕಾರ ವಿನಯ್ ಕುಮಾರ್ ಸೊರಕೆಯವರು ಶಾಸಕರಾಗಿದ್ದಲ್ಲಿ ಕಾಪು ತಾಲೂಕು ಎಲ್ಲಾ ಸೌಲಭ್ಯಗಳನ್ನು ಹೊಂದಿದ ಹೊಸ ತಾಲೂಕು ಆಗಿ ಮೂಡಿ ಬರುವುದರಲ್ಲಿ ಯಾವುದೇ ಸಂಶಯ ಇರಲಿಲ್ಲ ಹಾಗೂ ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕಂದಾಯ ಸಚಿವರಿಗೆ ಕೂಡಾ ವಿನಯ್ ಕುಮಾರ್ ಸೊರಕೆಯವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗುವುದು ಎಂದು ನ್ಯಾಯವಾದಿ ಹಾಗೂ ಶಿರ್ವ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರೂ ಆದ ಮೆಲ್ವಿನ್ ಡಿಸೋಜರವರು ಅವರು ತಿಳಿಸಿದ್ದಾರೆ.
ಕಾರ್ಕಳ: ಟೈರ್ ಸ್ಪೋಟಗೊಂಡು ಕಾರು ಅಪಘಾತ – ತೆಲಂಗಾಣ ಶಾಸಕ ರೋಹಿತ್ ರೆಡ್ಡಿ ಪವಾಡ ಸದೃಶ್ಯ ಪಾರು – Vishwanews24
