Featured

ಕಾಪು ಪುರಸಭಾ ಚುನಾವಣೆ-ಪುರಸಭೆ ಕಟ್ಟಡದಲ್ಲಿ ಮತಎಣಿಕೆಗೆ ಸಕಲ ಸಿದ್ಧತೆ-100 ಪೊಲೀಸ್ ನಿಯೋಜನೆ-144 ಸೆಕ್ಷನ್ ಜಾರಿ:vishwanews24

ಕಾಪು ಪುರಸಭಾ ಚುನಾವಣೆ-ಪುರಸಭೆ ಕಟ್ಟಡದಲ್ಲಿ ಮತಎಣಿಕೆಗೆ ಸಕಲ ಸಿದ್ಧತೆ-100 ಪೊಲೀಸ್ ನಿಯೋಜನೆ-144 ಸೆಕ್ಷನ್ ಜಾರಿ

ಕಾಪು: ಪುರಸಭಾ ಚುನಾವಣೆಯ ೬೭ ಅಭ್ಯರ್ಥಿಗಳ ಭವಿಷ್ಯ ನಾಳೆ ನಿರ್ಧಾರವಾಗಲಿದ್ದು ಮತೆಣಿಕೆ ಕೇಂದ್ರದಲ್ಲಿ ಸಕಲ ಸಿದ್ಧತೆಯಾಗಿದೆ. ಬೆಳಗ್ಗೆ 7 ಗಂಟೆಗೆ ಸರಿಯಾಗಿ ಭದ್ರಾತಕೊಠಡಿ ಓಪನ್ ಮಾಡಿ ನಂತರ ಪುರಸಭೆಯ ಇಂದಿರಾ ಗಾಂಧಿ ಹವಾನಿಯಂತ್ರಿತ ಕೊಠಡಿಯಲ್ಲಿ ಮತಎಣಿಕೆ ನಡೆಯಲಿದೆ.ಒಟ್ಟು ಆರು ಸುತ್ತಿನಲ್ಲಿ ಮತಎಣಿಕೆಯಾಗಲಿದ್ದು ನಾಲ್ಕು ಟೇಬಲ್‌ನಲ್ಲಿ 25 ಸಿಬ್ಬಂದಿಗಳ ಜೋಡನೆಯಲ್ಲಿ ಎಣಿಕೆ ಕಾರ್ಯ ನಡೆಯುತ್ತದೆ.

ಪೊಲೀಸ್ ಬಂದೋಬಸ್ತು
ಎಣಿಕಾ ಕೇಂದ್ರದಿಂದ ಸುಮಾರು 100 ಮೀಟರ್ ಹೊರಗೆ ಸಾರ್ವಜನಿಕರಿಗೆ ಅಭಿಮಾನಿಗಳಿಗೆ ಇರಲು ವ್ಯವಸ್ಥೆ ಕಲ್ಪಿಸಲಾಗಿದೆ.ಭದ್ರತೆಯ ದೃಷ್ಟಿಯಿಂದಸುಮಾರು 100 ಮಂದಿ ಪಲೀಸ್ ನಿಯೋಜನೆಮಾಡಿದ್ದು ಒಂದು ಸರ್ಕಲ್ ಇನ್ಸ್ಪೆಕ್ಟರ್ ,6ಸಬ್ ಇನ್ಸ್ಪೆಕ್ಟರ್ ,9 ಎ.ಎಸ್.ಐ. , 80  ಮಂದಿ ಪೊಲೀಸ್ ಸಿಬಂಧಿಗಳು ಸೇರಿದಂತೆ ಒಂದು ಡಿ.ರ್ ಬಂದೋಬಸ್ತಿನಲ್ಲಿರಲಿದೆ.

ಪಾರ್ಕಿಗ್ ವ್ಯವಸ್ಥೆ
ಮತಎಣಿಕಾ ಕೇಂದ್ರಕ್ಕೆ ಆಗಮಿಸುವ ಪ್ರಯಾಣಿಕರು ವಾಹನವನ್ನು ಪೊಲಿಪು ರಸ್ತೆಯ ಕಾಂಚನ್ ಮೂಲಸ್ಥಾನ.ಹೊಸಮಾರಿಗುಡಿ ದೇವಸ್ಥಾನ,ಮತ್ತು ದಂಡತೀರ್ಥ ಶಾಲೆಯಲ್ಲಿ ಪಾರ್ಕಿಗ್ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ.

ಯಾವುದೇ ಕಾರಣಕ್ಕೂ ಪುರಸಭೆಯ ಆವರಣಕ್ಕೆ ಪಾಸ್ ಇದ್ದವರಿಗೆ ಪ್ರವೇಶ ಬಿಟ್ಟು ಉಳಿದ ಯಾರಿಗೂ ಅವಕಾಶವಿರುವುದಿಲ್ಲ ಎಂದು ಪೊಲೀಸ್ ಮಾಹಿತಿಗಳು ತಿಳಿಸಿದೆ.
ಸೆಕ್ಷನ್144 ಜಾರಿ
ಮತಎಣಿಕೆಯ ನಾಳೆಯ ದಿನ ಪುರಸಭಾ ವ್ಯಾಪ್ತಿಯಲ್ಲಿ ಸೆಕ್ಷನ್144 ಜಾರಿಯಾಗಲಿದ್ದು ಯಾವುದೇ ರೀತಿಯ ವಿಜಯೋತ್ಸವ ಮೆರವಣಿಗೆಗಳಿಗೆ ಅವಕಾಶವಿರುವುದಿಲ್ಲ.

Vishwa News 24

Recent Posts

ಉಡುಪಿ: ಮನೆಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ – vishwanews24

ಉಡುಪಿ: ಮನೆಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ ವಿದೇಶಿ ಕರೆನ್ಸಿ ಸಹಿತ 23.56 ಲಕ್ಷ ರೂ.ಮೌಲ್ಯದ ಸೊತ್ತು ವಶ ಉಡುಪಿ:…

9 hours ago

ನಿಮ್ಮ ಜೊತೆ ಸರಕಾರವಿದೆ ;ನಿಮ್ಮ ಸಂಕಷ್ಟಕ್ಕೆ ನಾವು ಸ್ಪಂದಿಸುತ್ತೇವೆ , ಧೈರ್ಯವಾಗಿರಿ: ನೇಪಾಳದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸಿಎಂ ಅಭಯ – vishwanews24

ನಿಮ್ಮ ಜೊತೆ ನಾವಿದ್ದೇವೆ, ಧೈರ್ಯವಾಗಿರಿ: ನೇಪಾಳದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸಿಎಂ ಡಿ.ಕೆ.ಶಿವಕುಮಾರ್ ಅಭಯ ಹೊಸದಿಲ್ಲಿ: "ಧೈರ್ಯವಾಗಿರಿ. ಸುರಕ್ಷಿತ ಸ್ಥಳದಲ್ಲಿ ಇರುವುದರಿಂದ…

9 hours ago

ಕರ್ನಾಟಕದಲ್ಲಿ ಹೆಚ್ಚುತ್ತಿರುವ  H1N1 ಪ್ರಕರಣ : ಆತಂಕ ಬೇಡ ಎಂದ ಆರೋಗ್ಯ ಇಲಾಖೆ – vishwanews24

ಕರ್ನಾಟಕದಲ್ಲಿ ಹೆಚ್ಚುತ್ತಿರುವ  H1N1 ಪ್ರಕರಣ : ಆತಂಕ ಬೇಡ ಎಂದ ಆರೋಗ್ಯ ಇಲಾಖೆ ಬೆಂಗಳೂರು: ಕರ್ನಾಟಕದಲ್ಲಿ H1N1 ಹಾಗೂ ಇನ್ಫ್ಲುಯೆನ್ಸ…

9 hours ago

ಮೈಸೂರಿನಲ್ಲಿ ಕಂಬಳಕ್ಕೆ ಸಿದ್ಧತೆ : ಟ್ರ್ಯಾಕ್ ನಿರ್ಮಾಣ ಕಾಮಗಾರಿಗೆ ಶಾಸಕ ಅಶೋಕ್ ಕುಮಾರ್ ರೈ ಚಾಲನೆ – vishwanews24

ಮೈಸೂರಿನಲ್ಲಿ ಕಂಬಳಕ್ಕೆ ಸಿದ್ಧತೆ : ಟ್ರ್ಯಾಕ್ ನಿರ್ಮಾಣ ಕಾಮಗಾರಿಗೆ ಶಾಸಕ ಅಶೋಕ್ ಕುಮಾರ್ ರೈ ಚಾಲನೆ ಮೈಸೂರು: ಸಾತಗಳ್ಳಿ ಪ್ರದೇಶದಲ್ಲಿ…

9 hours ago

ನೇಪಾಳ ಭೀಕರ ಪ್ರವಾಹ : 5 ಲಕ್ಷ ಡಾಲರ್‌ಗಳ ತುರ್ತು ನೆರವು ಘೋಷಿಸಿದ ಅಮೆರಿಕ – vishwanews24

ನೇಪಾಳ ಭೀಕರ ಪ್ರವಾಹ : 5 ಲಕ್ಷ ಡಾಲರ್‌ಗಳ ತುರ್ತು ನೆರವು ಘೋಷಿಸಿದ ಅಮೆರಿಕ ಕಠ್ಮಂಡು: ನೇಪಾಳದ ಭೋಟೆ ಕೋಶಿ…

12 hours ago

ಮಂಗಳೂರು ನೈಋತ್ಯ ವಲಯ ಸೇರ್ಪಡೆ ; ಶೀಘ್ರ ಸಂಭ್ರಮೋತ್ಸವ: ಸತೀಶ್‌ ಕುಂಪಲ – vishwanews24

ಮಂಗಳೂರು ನೈಋತ್ಯ ವಲಯ ಸೇರ್ಪಡೆ ; ಶೀಘ್ರ ಸಂಭ್ರಮೋತ್ಸವ: ಸತೀಶ್‌ ಕುಂಪಲ ಮಂಗಳೂರು : ರೈಲ್ವೇ ಪ್ರದೇಶವನ್ನು ನೈಋತ್ಯ ವಲಯಕ್ಕೆ…

13 hours ago