ಉಡುಪಿ

ಕಾಪು ಪುರಸಭಾ ಚುನಾವಣೆ : ಬಿಜೆಪಿಗೆ ಭರ್ಜರಿ ಸೀಟು ಗೆಲ್ಲಿಸಿಕೊಟ್ಟ ದೇವದುರ್ಲಬ ಕಾರ್ಯಕರ್ತರು:ಓದಿ ಈ ವರದಿ

ಕಾಪು ಪುರಸಭಾ ಚುನಾವಣೆ : ಬಿಜೆಪಿಗೆ ಭರ್ಜರಿ ಸೀಟು ಗೆಲ್ಲಿಸಿಕೊಟ್ಟ ದೇವದುರ್ಲಬ ಕಾರ್ಯಕರ್ತರು:ಓದಿ ಈ ವರದಿ

ಕಾಪು: ಈ ಬಾರಿಯ ಇಲ್ಲಿನ ಪುರಸಭಾ ಚುನಾವಣೆಯಲ್ಲಿ ಬಿಜೆಪಿ ಪಾರ್ಟಿಗೆ ೧೨ ಸೀಟು ಗೆಲ್ಲಿಸಿಕೊಡುವ ಮೂಲಕ ಕಾರ್ಯಕರ್ತರ ನೈಜತೆ ಮತ್ತು ಪಕ್ಷದ ಮೇಲಿನ ನಂಬಿಕೆಗೆ ಮತ್ತೊಂದು ಸಾಕ್ಷಿಯಾಗಿದೆ.
ಭಾಜಪ ಕಾರ್ಯಕರ್ತರ ಪಕ್ಷ ಎಂಬುದನ್ನು ಹಿಂದಿನಿAದಲೂ ಡಂಗುರ ಸಾರಿಸಿಕೊಂಡು ಬಂದಿದ್ದರೂ ಕೂಡ ನೈಜ ಕಾರ್ಯಕರ್ತನಿಗೆ ಅನ್ಯಾಯವಾದ ಸಮಯದಲ್ಲಿ ಬಿಜೆಪಿ ಬೆಂಬಲಿಸಿಲ್ಲ ಎನ್ನುವ ಆರೋಪ ಇದ್ದರೂ ಕೂಡ ಕಾರ್ಯಕರ್ತ ಪಕ್ಷ ಬಿಡದೆ ಒದ್ದಾಟ- ಕೇಸು ಮಾಡಿಕೊಂಡು ಪಕ್ಷ ಕಟ್ಟುವಲ್ಲಿ ಯಶಸ್ವಿಯಾಗುತ್ತಾನೆ ಆದರೇ ನಾಯಕರು ಮಾತ್ರ ಸ್ವಂತ ಹಿತಾಸಕ್ತಿಗಾಗಿ ಬೇರೆ ಪಕ್ಷದ ಜತೆ ಪಲಾಯನ ಮಾಡಿರುವ ಉದಾಹರಣೆಗಳು ಇದೆ. ಅದರ ಜತೆಗೆ ಒಂದು ಕಾಲದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಬೂಟಿನಿಂದ ಒದ್ದು ಬೇಕಾಬಿಟ್ಟಿ ಕೇಸು ಹಾಕಿ ಜೈಲಿನಲ್ಲಿ ಕೂರಿಸಿದ ಕಾಂಗ್ರೇಸ್ ಜೆಡಿಎಸ್ ಕಾರ್ಯಕರ್ತರಿಗೆ ಬಿಜೆಪಿಯಲ್ಲಿ ಹುದ್ದೆ ನೀಡಿದ ಘಟನೆಯೂ ಕಣ್ಣಮುಂದೆ ಹಾದುಹೋಗುವುದು ಸಾಮಾನ್ಯವಾಗಿದೆ ಅದನ್ನೆಲ್ಲ ಸಹಿಸಿಕೊಂಡು ಪಕ್ಷದ ನೈಜ ಕಾರ್ಯಕರ್ತ ಬಿಜೆಪಿಯ ಜತೆಗೆ ನಿಂತವರು ನಿಜವಾಗಿಯೂ ದೇವದುರ್ಲಬ ಕಾರ್ಯಕರ್ತರು.


ಸರಿ ಮುಂದೆ ನೋಡುವ…ಈ ಬಾರಿಯ ಕಾಪು ಪುರಸಭಾ ಚುನಾವಣೆ ಬಿಜೆಪಿಗೆ ಪೂರಕವಾಗಿತ್ತು ಅಂದರೆ ಅದು ತಪ್ಪು ಗ್ರಹಿಕೆ ಕ್ಷೇತ್ರ ಮಟ್ಟದಿಂದ ಹಿಡಿದು ರಾಜ್ಯಮಟ್ಟದ ನಾಯಕರವರೆಗೂ ಅಸಮಾಧಾನ -ಗೊಂದಲಮಯ ವಾತಾವರಣ ಈ ಭಾಗದಲ್ಲಿತ್ತು ಆದರೆ ಕಡೇ ಕ್ಷಣದಲ್ಲಿ ಜಿಲ್ಲಾ ನಾಯಕರು-ಸ್ಥಳಿಯ ನಾಯಕರಿಂದ ಮತದಾರನ ಮನವೊಲಿಕೆ ಈ ಬಾರಿ ಸಕ್ಸಸ್ ತರಲು ಕಾರಣವಾಯಿತು ಅದಕ್ಕೆ ಮೂಲ ಕಾರಣ ಇಷ್ಟೇ ಬಿಜೆಪಿಯ ಕೆಲವು ನಾಯಕರಿಗೆ ಕಾರ್ಯಕರ್ತ ಬೇಡವಾದರೂ -ಕಾರ್ಯಕರ್ತನಿಗೆ ಧರ್ಮದ ಕಾರಣದಿಂದರೂ ಕೂಡ ಪಕ್ಷ ಬೇಕು ಅನ್ನಿಸಿತು ಹಾಗಾಗಿ ಬಿಜೆಪಿಯನ್ನು ಗೆಲ್ಲಿಸಿಕೊಟ್ಟರು ಆದ್ದರಿಂದ ಅವರು “ದೇವದುರ್ಲಬ” ಕಾರ್ಯಕರ್ತರು.


ಕರಾವಳಿ ಭಾಗದಲ್ಲಿ ಈ ಬಾರಿ ಬಿಜೆಪಿಗೆ ಅನಿಸಿದಷ್ಟು ಸೀಟುಗಳು ಬರಲೇ ಇಲ್ಲ ಅದಕ್ಕೆ ಸ್ಥಳಿಯ ಶಾಸಕರ ಮೇಲಿನ ಅಕ್ರೋಶವೆ ಹೊರತು ಬಿಜೆಪಿಯಿಂದಲ್ಲ ಎಂಬುದು ಸಾಬಿತಾಗಿದೆ..ಉದಾಹರಣೆ ಕೈಪುಂಜಾಲು-ಪೊಲಿಪು-ತೊಟ್ಟ0-ದುಗ್ಗನ್‌ತೋಟ ಇತ್ಯಾದಿ.
ಇನ್ನು ಬೋನಸ್ ಆಗಿ ಪರಿಣಮಿಸಿದ ಕ್ಷೇತ್ರಗಳು ಕೊಪ್ಪಲಂಗಡಿ-ಗರಡಿ-ಜನರಲ್ ಶಾಲೆ-ಕಳೆದ ಬಾರಿ ಕಾಂಗ್ರೇಸ್ ಈ ಭಾಗದಲ್ಲಿ ಪಾರುಪತ್ಯ ನಡೆಸಿತ್ತು ಈ ಸಲ ಬಿಜೆಪಿ ದರ್ಬಾರು ಮಾಡಲಿದೆ.ಹೀಗಾಗಿ ಈ ಸಲವೂ ಕೂಡ ಬಿಜೆಪಿಯ ನಿಜವಾದ ಅಭಿಮಾನಿಗಳು-ಹಿತೈಷಿಗಳು-ಮತ್ತು ನಾಯಕರಿಗೆ ಕಾರ್ಯಕರ್ತರು ಬೇಡವಾದರೂ ಪಕ್ಷದ ನೈಜ ದೇವದುರ್ಲಬ ಕಾರ್ಯಕರ್ತರ ಪರಿಶ್ರಮ ಫಲ ನೀಡಿದೆ ಎಂದುದು ಸತ್ಯ.


ಬ್ಯರೋ ರಿಪೋರ್ಟ್

Vishwa News 24

Recent Posts

ಉಡುಪಿ: ಸೆ. 4ರಂದು ಶ್ರೀಕೃಷ್ಣ ಜನ್ಮಾಷ್ಟಮಿ ; ಸೆ.5ರಂದು ವಿಟ್ಲಪಿಂಡಿ ಉತ್ಸವ – vishwanews24

ಉಡುಪಿ: ಸೆ. 4ರಂದು ಶ್ರೀಕೃಷ್ಣ ಜನ್ಮಾಷ್ಟಮಿ ; ಸೆ.5ರಂದು ವಿಟ್ಲಪಿಂಡಿ ಉತ್ಸವ ಉಡುಪಿ: ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಶಿರೂರು ಮಠದ…

6 minutes ago

ರೇಣುಕಾಸ್ವಾಮಿ ಕೊಲೆ ಪ್ರಕರಣ : ಆರೋಪಿ ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್ – vishwanews24

ರೇಣುಕಾಸ್ವಾಮಿ ಕೊಲೆ ಪ್ರಕರಣ : ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್ ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ…

25 minutes ago

ಜವಾಬ್ದಾರಿಗಳನ್ನು ಹೊಸ ಪೀಳಿಗೆಗೆ ಹಸ್ತಾಂತರಿಸುವ ಸಮಯ ಬಂದಿದೆ : ನಿತಿನ್ ಗಡ್ಕರಿ – vishwanews24

ಜವಾಬ್ದಾರಿಗಳನ್ನು ಹೊಸ ಪೀಳಿಗೆಗೆ ಹಸ್ತಾಂತರಿಸುವ ಸಮಯ ಬಂದಿದೆ : ನಿತಿನ್ ಗಡ್ಕರಿ ಮುಂಬೈ: ಈ ಹಿಂದೆ ಮಾಡುತ್ತಿದ್ದಷ್ಟು ಕೆಲಸವನ್ನು ಇನ್ನು…

43 minutes ago

ಹಬ್ಬಗಳ ಹಿನ್ನೆಲೆ : ದಕ್ಷಿಣ ಕನ್ನಡ ಪೊಲೀಸರ ಕಟ್ಟುನಿಟ್ಟಿನ ಮಾರ್ಗಸೂಚಿ ಬಿಡುಗಡೆ – vishwanews24

ಹಬ್ಬಗಳ ಹಿನ್ನೆಲೆ : ದಕ್ಷಿಣ ಕನ್ನಡ ಪೊಲೀಸರ ಕಟ್ಟುನಿಟ್ಟಿನ ಮಾರ್ಗಸೂಚಿ ಬಿಡುಗಡೆ ರಾತ್ರಿ 11:30 ಗಂಟೆಯ ನಂತರ ಮೆರವಣಿಗೆ ,…

51 minutes ago

ಸೆ. 1 ರಿಂದ 10 ರವರೆಗೆ ಬೃಹತ್ ಪಾದಯಾತ್ರೆ : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ – vishwanews24

ಸೆ. 1 ರಿಂದ 10 ರವರೆಗೆ ಬೃಹತ್ ಪಾದಯಾತ್ರೆ : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬೆಂಗಳೂರು : ರಾಜ್ಯ ಸರ್ಕಾರದ…

1 hour ago

ಇಸ್ಲಾಂ ಧರ್ಮದಲ್ಲಿ ಹಿಜಾಬ್ ಕಡ್ಡಾಯವಲ್ಲ: ಅಲಹಾಬಾದ್ ಹೈಕೋರ್ಟ್ – vishwanews24

ಇಸ್ಲಾಂ ಧರ್ಮದಲ್ಲಿ ಹಿಜಾಬ್ ಕಡ್ಡಾಯವಲ್ಲ: ಅಲಹಾಬಾದ್ ಹೈಕೋರ್ಟ್ ಮುಸ್ಲಿಂ ವಿದ್ಯಾರ್ಥಿನಿಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್ ಪ್ರಯಾಗ್‌ರಾಜ್: ಶಾಲಾ ಸಮವಸ್ತ್ರದೊಂದಿಗೆ ಹಿಜಾಬ್…

3 hours ago