ಈ ಬಾರಿಯಂತೂ ಕಾಂಗ್ರೇಸ್ ಪಾರ್ಟಿಗೆ ಪುರಸಭಾ ವ್ಯಾಪ್ತಿಯಲ್ಲಿ ಪೂರಕ ವಾತಾವರಣ ಇದ್ದರೂ ಕೂಡ ಚುನಾವಣ ಫಲಿತಾಂಶದಲ್ಲಿ ಎರಡಂಕಿ ಮುಟ್ಟಲು ಸಾಧ್ಯವಾಗಿಲ್ಲ, ಕಡೇ ಪಕ್ಷ ಕಳೆದ ಚುನಾವಣೆಯಲ್ಲಿ ಗೆದ್ದು ಬಂದ ವಾರ್ಡನ್ನು ಕೂಡ ಉಳಿಸಿಕೊಳ್ಳುವಲ್ಲಿ ಕೂಡ ವಿಫಲವಾಗಿದೆ.ಕೇವಲ ೭ ಸೀಟು ಗೆಲ್ಲುವಲ್ಲಿ ಕಾಂಗ್ರೇಸ್ ಸಫಲತೆಯನ್ನು ಕಂಡಿದೆ ಹಾಗಾದರೇ ಕಾಂಗ್ರೇಸ್ ಎಡವಿದ್ದು ಎಲ್ಲಿ ಎಂಬ ಪ್ರಶ್ನೆ…?
ಕಾಂಗ್ರೇಸ್ ಅಂದಿನಿAದ ಕೂಡ ಅಲ್ಪಸಂಖ್ಯಾತರು ಓಟ್ ಬ್ಯಾಮಕ್ ಎಂದು ತಿಳಿದದ್ದು ಈ ಬಾರಿ ಎಡವಟ್ಟಾಗಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಜತೆ ಸಕ್ರಿಯರಾಗಿ ಗುರುತಿಸಿಕೊಂಡಿದ್ದ ಮತ್ತು ಆಂತರಿಕ ಹಾಗೂ ಬಾಹ್ಯ ಬೆಂಬಲ ನೀಡಿದವರು ಈ ಬಾರಿ ಎಸ್,ಡಿ,ಪಿ,ಐ ಜತೆಗೆ ಸೇರಿಕೊಂಡು ಕಾಂಗ್ರೇಸ್ಗೆ ಟಕ್ಕರ್ ನೀಡಿದೆ.
ಕಾಪುವಿಗೆ ಪುರಸಭೆ ತಂದರುವುದು ಅದರ ಜತೆಗೆ ನಗರಾಭಿವೃದ್ಧಿ ಪ್ರಾಧಿಕಾರ ಒಕ್ಕರಿಸಲು ಮೂಲ ಕಾರಣ ಕಾಂಗ್ರೇಸ್ ಎಂಬ ಸುದ್ದಿ ಬಾಯಿಂದ ಬಾಯಿಗೆ ಹರಡಿ ಅದರಿಂದ ಸಂಕಷ್ಟಕ್ಕೊಳಗಾದ ಕಾಂಗ್ರೇಸ್ಸಿಗರು ಕೂಡ ಈ ಬಾರಿ ಕೈ ಬಿಟ್ಟಿರುವುದು.
ಮೊನ್ನೆಮೊನ್ನೆಯವರೆಗೂ ಅಲ್ಪಸಂಖ್ಯಾತರ ಬೆನ್ನಿಗಿದ್ದ ಕಾಂಗ್ರೇಸ್ ಈ ಬಾರಿ ನೇರವಾಗಿ ಎಸ್,ಡಿ,ಪಿ,ಐ ನ್ನು ವಿರೋಧಿಸಿ ಅದರೊಳಗಿದ್ದ ಕೆಲವೊಂದು ಅಲ್ಪಸಂಖ್ಯಾತ ಕಾಂಗ್ರೇಸ್ ಕಾರ್ಯಕರ್ತರಿಗೆ ಬೇಸರ ಉಂಟುಮಾಡಿದ್ದು ಕೂಡ ಕಾರಣವಾಯಿತು.
ಬಿಜೆಪಿಯ ಕಾರ್ಯಕರ್ತರಿಗೆ ಸ್ಥಳಿಯ ನಾಯಕರ ಮೇಲಿನ ಅಸಮಧಾನವನ್ನು ಕಾಂಗ್ರೆಸ್ ಕ್ಯಾಚ್ ಮಾಡಿಕೊಂಡು ಗೆದ್ದೆ ಗೆಲ್ಲುವೆವು ಎಂಬ ಭ್ರಮೆಯಿಂದ ಹೊರಬಾರದೆ ಇದ್ದದ್ದು ಕೂಡ ಕಾರಣವಾಗಿರಬಹುದು.
ಇನ್ನು ೨೩ ವಾರ್ಡಿನ ಮೇಲೆ ನಿಗಾವಹಿಸಿ ಕಾರ್ಯತಂತ್ರ ಮಾಡಲು ಕೇವಲ ವಿನಯ್ ಕುಮಾರ್ ಸೊರಕೆ ಒಬ್ಬರಾಗಿ ಸರಿಯಾಗಿ ಪರಿಣಾಮ ಬೀಳಲು ಕಷ್ಟವಾಗಿರಬಹುದು.
ಕೇಂದ್ರ-ರಾಜ್ಯ-ಸ್ಥಳಿಯವಾಗಿ ಕೂಡ ಅಧಿಕಾರ ಇಲ್ಲದೇ ಇರುವುದು ಕೂಡ ಕಾರಣವಾಗಿರಬಹುದು.
ಬ್ಯರೋ ರಿಪೋರ್ಟ್
ಅಯೋಧ್ಯೆ ರಾಮಮಂದಿರ ಹುಂಡಿ ಹಗರಣ : ಎಲ್ಲಾ ಹಗರಣಗಳ ಸತ್ಯಾಂಶ ಹೊರಗೆ ಬರಬೇಕು : ವಿನಯಕುಮಾರ್ ಸೊರಕೆ ಆಗ್ರಹ ಉಡುಪಿ:…
ಉಡುಪಿ ಜಿಲ್ಲೆಯಾದ್ಯಂತ ಎಎನ್ಪಿಆರ್ ಕ್ಯಾಮೆರಾ ಅಳವಡಿಕೆ: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಶೇ. 40-70ರಷ್ಟು ಇಳಿಕೆ ಉಡುಪಿ: ಸ್ವಯಂ ಚಾಲಿತ…
ಹೆಬ್ರಿ: ಕೂಡ್ಲು ಫಾಲ್ಸ್ ಪ್ರವೇಶಕ್ಕೆ ಅರಣ್ಯ ಇಲಾಖೆಯಿಂದ ತಾತ್ಕಾಲಿಕ ನಿಷೇಧ ಹೆಬ್ರಿ: ಪುವಾಸಿ ತಾಣವಾದ ಕೂಡು ಫಾಲ್ಸ್ ಪುವೇಶಕ್ಕೆ ಅರಣ್ಯ…
ಉಡುಪಿ : ವ್ಯಕ್ತಿ ನಾಪತ್ತೆ ಉಡುಪಿ : ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಕುಶಾಲ್ ಶೆಟ್ಟಿ (55) ಎಂಬ…
ಸ್ಥಳ ಮಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನ : ಅತ್ಯಾಚಾರ , ಕೊಲೆ ಪ್ರಕರಣದ ಆರೋಪಿ ಎನ್ಕೌಂಟರ್ನಲ್ಲಿ ಹತ್ಯೆ ಕೊಲ್ಕತ್ತಾ: ಪಶ್ಚಿಮ…
ಉಡುಪಿ : ಜು. 10 ರಂದು ನೇರ ಸಂದರ್ಶನ ಉಡುಪಿ : ಉಡುಪಿಯ ವಿ.ಪಿ ನಗರದ ಸುಧಾ ಫರ್ನೀರ್ಸ್ ಬಿಲ್ಡಿಂಗ್s…