Featured

ಕಾಪು ಪುರಸಭಾ ಚುನಾವಣೆ- ಕಾಂಗ್ರೇಸ್ ಎಡವಿದ್ದು ಎಲ್ಲಿ..?ಓದಿ ಈ ವರದಿ

ಕಾಪು ಪುರಸಭಾ ಚುನಾವಣೆ- ಕಾಂಗ್ರೇಸ್ ಎಡವಿದ್ದು ಎಲ್ಲಿ..?

ಈ ಬಾರಿಯಂತೂ ಕಾಂಗ್ರೇಸ್ ಪಾರ್ಟಿಗೆ ಪುರಸಭಾ ವ್ಯಾಪ್ತಿಯಲ್ಲಿ ಪೂರಕ ವಾತಾವರಣ ಇದ್ದರೂ ಕೂಡ ಚುನಾವಣ ಫಲಿತಾಂಶದಲ್ಲಿ ಎರಡಂಕಿ ಮುಟ್ಟಲು ಸಾಧ್ಯವಾಗಿಲ್ಲ, ಕಡೇ ಪಕ್ಷ ಕಳೆದ ಚುನಾವಣೆಯಲ್ಲಿ ಗೆದ್ದು ಬಂದ ವಾರ್ಡನ್ನು ಕೂಡ ಉಳಿಸಿಕೊಳ್ಳುವಲ್ಲಿ ಕೂಡ ವಿಫಲವಾಗಿದೆ.ಕೇವಲ ೭ ಸೀಟು ಗೆಲ್ಲುವಲ್ಲಿ ಕಾಂಗ್ರೇಸ್ ಸಫಲತೆಯನ್ನು ಕಂಡಿದೆ ಹಾಗಾದರೇ ಕಾಂಗ್ರೇಸ್ ಎಡವಿದ್ದು ಎಲ್ಲಿ ಎಂಬ ಪ್ರಶ್ನೆ…?


ಕಾಂಗ್ರೇಸ್ ಅಂದಿನಿAದ ಕೂಡ ಅಲ್ಪಸಂಖ್ಯಾತರು ಓಟ್ ಬ್ಯಾಮಕ್ ಎಂದು ತಿಳಿದದ್ದು ಈ ಬಾರಿ ಎಡವಟ್ಟಾಗಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಜತೆ ಸಕ್ರಿಯರಾಗಿ ಗುರುತಿಸಿಕೊಂಡಿದ್ದ ಮತ್ತು ಆಂತರಿಕ ಹಾಗೂ ಬಾಹ್ಯ ಬೆಂಬಲ ನೀಡಿದವರು ಈ ಬಾರಿ ಎಸ್,ಡಿ,ಪಿ,ಐ ಜತೆಗೆ ಸೇರಿಕೊಂಡು ಕಾಂಗ್ರೇಸ್‌ಗೆ ಟಕ್ಕರ್ ನೀಡಿದೆ.
ಕಾಪುವಿಗೆ ಪುರಸಭೆ ತಂದರುವುದು ಅದರ ಜತೆಗೆ ನಗರಾಭಿವೃದ್ಧಿ ಪ್ರಾಧಿಕಾರ ಒಕ್ಕರಿಸಲು ಮೂಲ ಕಾರಣ ಕಾಂಗ್ರೇಸ್ ಎಂಬ ಸುದ್ದಿ ಬಾಯಿಂದ ಬಾಯಿಗೆ ಹರಡಿ ಅದರಿಂದ ಸಂಕಷ್ಟಕ್ಕೊಳಗಾದ ಕಾಂಗ್ರೇಸ್ಸಿಗರು ಕೂಡ ಈ ಬಾರಿ ಕೈ ಬಿಟ್ಟಿರುವುದು.

ಮೊನ್ನೆಮೊನ್ನೆಯವರೆಗೂ ಅಲ್ಪಸಂಖ್ಯಾತರ ಬೆನ್ನಿಗಿದ್ದ ಕಾಂಗ್ರೇಸ್ ಈ ಬಾರಿ ನೇರವಾಗಿ ಎಸ್,ಡಿ,ಪಿ,ಐ ನ್ನು ವಿರೋಧಿಸಿ ಅದರೊಳಗಿದ್ದ ಕೆಲವೊಂದು ಅಲ್ಪಸಂಖ್ಯಾತ ಕಾಂಗ್ರೇಸ್ ಕಾರ್ಯಕರ್ತರಿಗೆ ಬೇಸರ ಉಂಟುಮಾಡಿದ್ದು ಕೂಡ ಕಾರಣವಾಯಿತು.
ಬಿಜೆಪಿಯ ಕಾರ್ಯಕರ್ತರಿಗೆ ಸ್ಥಳಿಯ ನಾಯಕರ ಮೇಲಿನ ಅಸಮಧಾನವನ್ನು ಕಾಂಗ್ರೆಸ್ ಕ್ಯಾಚ್ ಮಾಡಿಕೊಂಡು ಗೆದ್ದೆ ಗೆಲ್ಲುವೆವು ಎಂಬ ಭ್ರಮೆಯಿಂದ ಹೊರಬಾರದೆ ಇದ್ದದ್ದು ಕೂಡ ಕಾರಣವಾಗಿರಬಹುದು.
ಇನ್ನು ೨೩ ವಾರ್ಡಿನ ಮೇಲೆ ನಿಗಾವಹಿಸಿ ಕಾರ್ಯತಂತ್ರ ಮಾಡಲು ಕೇವಲ ವಿನಯ್ ಕುಮಾರ್ ಸೊರಕೆ ಒಬ್ಬರಾಗಿ ಸರಿಯಾಗಿ ಪರಿಣಾಮ ಬೀಳಲು ಕಷ್ಟವಾಗಿರಬಹುದು.
ಕೇಂದ್ರ-ರಾಜ್ಯ-ಸ್ಥಳಿಯವಾಗಿ ಕೂಡ ಅಧಿಕಾರ ಇಲ್ಲದೇ ಇರುವುದು ಕೂಡ ಕಾರಣವಾಗಿರಬಹುದು.
ಬ್ಯರೋ ರಿಪೋರ್ಟ್

 

Vishwa News 24

Recent Posts

ಮಲ್ಪೆ : ಸೈಂಟ್‌ಮೇರೀಸ್‌ ದ್ವೀಪ ಪ್ರವೇಶ ಹಾಗೂ ಜಲ ಕ್ರೀಡೆಗಳಿಗೆ 4 ತಿಂಗಳ ಕಾಲ ನಿಷೇಧ – vishwanews24

ಮಲ್ಪೆ : ಸೈಂಟ್‌ಮೇರೀಸ್‌ ದ್ವೀಪ ಪ್ರವೇಶ ಹಾಗೂ ಜಲ ಕ್ರೀಡೆಗಳಿಗೆ ಮೇ 16ರಿಂದ ಸೆಪ್ಟೆಂಬರ್15ರ ವರೆಗೆ ಸಂಪೂರ್ಣ ನಿಷೇಧ ಮಲ್ಪೆ:…

12 hours ago

ಜೂನ್‌ 21ರಂದು ನೀಟ್‌ ಯುಜಿ ಮರು ಪರೀಕ್ಷೆ – vishwanews24

ಜೂನ್‌ 21ರಂದು ನೀಟ್‌ ಯುಜಿ ಮರು ಪರೀಕ್ಷೆ ನವದೆಹಲಿ: ಜೂನ್‌ 21 ರಂದು ನೀಟ್‌–ಯುಜಿ  ಮರು ಪರೀಕ್ಷೆ ನಡೆಸಲಾಗುವುದು ರಾಷ್ಟ್ರೀಯ…

12 hours ago

ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ :  ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ – vishwanews24

ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ :  ಪೃಥ್ವಿರಾಜ್…

1 day ago

ಜನಿವಾರ, ಹಿಜಾಬ್, ಉಡುದಾರ, ರುದ್ರಾಕ್ಷಿ ಹಾಕಿಕೊಳ್ಳಬಹುದು ಹೊರತು ಕೇಸರಿ ಶಾಲಿಗೆ ಅವಕಾಶ ಇಲ್ಲ : ಸಿಎಂ ಸ್ಪಷ್ಟನೆ – vishwanews24

ಸಾಂಪ್ರದಾಯಿಕ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು, ಹೊಸದಾಗಿ ಮಾಡುವಂತಿಲ್ಲ : ಸಿಎಂ ಸ್ಪಷ್ಟನೆ ಮೈಸೂರು : "ಪ್ರಾಥಮಿಕ ತರಗತಿಯಿಂದ 12ನೇ ತರಗತಿಯವರೆಗೆ…

1 day ago

ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ : ತಮಿಳುನಾಡು ಸರ್ಕಾರ ಆದೇಶ – vishwanews24

ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ :  ಸಿಎಂ ವಿಜಯ್ ಸರ್ಕಾರ ಆದೇಶ ಚೆನ್ನೈ: ಇನ್ನು ಮುಂದೆ…

1 day ago

ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್‌ ರಾಜಣ್ಣ – vishwanews24

ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್‌ ರಾಜಣ್ಣ ನಾನು ಮೋದಿಯವರನ್ನು ಹೊಗಳುತ್ತಿಲ್ಲ.…

1 day ago