ಕಾಪು ಪುರಸಭಾ ಚುನಾವಣೆ ಮೂಳೂರು- ದುಗ್ಗನ್ ತೋಟ ವಾರ್ಡಿನಲ್ಲಿ ಕಿಶೋರ್ ಪೂಜಾರಿ ಬಿಜೆಪಿಯ ಸಂಭಾವ್ಯ ಅಭ್ಯರ್ಥಿ :vishwanews24

ಉಡುಪಿ

ಕಾಪು ಪುರಸಭಾ ಚುನಾವಣೆ ದುಗ್ಗನ್ ತೋಟ ವಾರ್ಡಿನಲ್ಲಿ ಕಿಶೋರ್ ಪೂಜಾರಿ ಬಿಜೆಪಿಯ ಸಂಭಾವ್ಯ ಅಭ್ಯರ್ಥಿ : vishwanews24

ಕಾಪು: ಕಾಪು ಪುರಸಭಾ ಚುನಾವಣೆ ದಿನ ನಿಗದಿ ಯಾಗುತ್ತಿದ್ದಂತೆ ಚುನಾವಣೆಯ ಕಾವು ಜಾಸ್ತಿಯಾಗುತ್ತಿದೆ ಈ ಪ್ರತಿ 23 ವಾರ್ಡಿನ ಬಿಜೆಪಿಯ ಅಭ್ಯರ್ಥಿಗಳ ಪಟ್ಟಿ ಅಂತಿಮ ಹಂತದಲ್ಲಿದ್ದು ಮೂಳೂರು ಗ್ರಾಮದ ಸಮಾಜ ಸೇವಕ ಕಿಶೋರ್ ಪೂಜಾರಿ ಅಭ್ಯರ್ಥಿಯಾಗಿ ಘೋಷಣೆಯಾಗುವ ಸಾಧ್ಯತೆಯಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕಿಶೋರ್ ಪೂಜಾರಿ ಕಳೆದ ಕೆಲವು ವರ್ಷಗಳಿಂದ ಮೂಳೂರು ಭಾಗದಲ್ಲಿ ಸಮಾಜ ಸೇವಕನಾಗಿ ಗುರುತಿಸಿಕೊಂಡು ಸರಕಾರದಿಂದ ಸಿಗುವ ಉಜ್ವಲ ಗ್ಯಾಸ್ ಯೋಜನೆ , ಸಂಧ್ಯಾ ಸುರಕ್ಷಾ ಯೋಜನೆ ,ವಿಧವೆ ವೇತನ, ಕಿಸಾನ್ ಯೋಜನೆ,ಕಟ್ಟಡ ಕಾರ್ಮಿಕರಿಗೆ ಕಿಟ್ಟ್ ವಿತರಣೆ, ಆಯುಷ್ಮಾನ್ ಕಾರ್ಡ್ ಸೇರಿದಂತೆ ಹತ್ತು ಹಲವಾರು ಯೋಜನೆಯ ಸವಲತ್ತುಗಳನ್ನು ಬಡ ಜನರ ಮನೆಬಾಗಿಲಿಗೆ ಮುಟ್ಟುವ ವ್ಯವಸ್ಥೆಯನ್ನು ಮಾಡಿದ್ದರು ಅನ್ನುವ ಹೆಗ್ಗಳಿಕೆ ಇದೆ.

“ಈ ಬಾರಿಯ ಪುರಸಭಾ ಚುನಾವಣೆಗೆ ಸ್ಪರ್ಧಿಸಬೇಕೆಂದು ಜನಸಾಮಾನ್ಯರ ಮತ್ತು ಆಕಾಂಕ್ಷೆ ಮೇರೆಗೆ ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸಬೇಕೆಂದು ಇಚ್ಛಿಸಿದ್ದೇನೆ ಆದರೆ ಪಕ್ಷದ ನಿರ್ಧಾರ ಕಾದುನೋಡಬೇಕಾಗಿದೆ”
ಕಿಶೋರ್ ಪೂಜಾರಿ
ದುಗ್ಗನ್ ತೋಟ, ಬಿಜೆಪಿ ಆಕಾಂಕ್ಷಿ ಅಭ್ಯರ್ಥಿ