ಕಾಪು ಬಿಜೆಪಿ ಯುವಮೋರ್ಚ – ದ್ವಿತೀಯ ಪಿಯುಸಿ ಟಾಪರ್ಗೆ ಸನ್ಮಾನ- vishwanews24

Featured, ಉಡುಪಿ

ಕಾಪು ಬಿಜೆಪಿ ಯುವಮೋರ್ಚ – ದ್ವಿತೀಯ ಪಿಯುಸಿ ಟಾಪರ್ಗೆ ಸನ್ಮಾನ

ಕಾಪು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ 600 ಅಂಕವನ್ನು ಗಳಿಸಿ ಸಾಧನೆಗೈದ ಉದ್ಯಾವರ ಪಿತ್ರೋಡಿಯ ಲೀಲಾದರ ಕೋಟ್ಯಾನ್ ಮತ್ತು ಶಶಿಕಲಾ ರವರ ಸುಪುತ್ರ
ಗಗನ್ ಕೋಟ್ಯಾನ್ ಇವರನ್ನು ಬಿಜೆಪಿ ಯುವಮೋರ್ಚಾ ಕಾಪು ಮಂಡಲದ ವತಿಯಿಂದ ಸನ್ಮಾನಿಸಲಾಯಿತು!

ಈ ಸಂಧರ್ಭದಲ್ಲಿ ನಾಡಿನ ಖ್ಯಾತ ಸಾಹಿತಿ ಎಸ್ ಎಲ್ ಭೈರಪ್ಪನವರ “ಅನ್ವೇಷಣೆ” ಎಂಬ ಪುಸ್ತಕವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಶ್ರೀ ಕಾಂತ್ ನಾಯಕ್ ಉದ್ಯಾವರ ಪಂಚಾಯತ್ ಅಧ್ಯಕ್ಷರಾದ ರಾಧಾಕೃಷ್ಣ ಬೋಳ್ಜೆ ಕಾಪು ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾದ ಸಚಿನ್ ಸುವರ್ಣ ಪಿತ್ರೋಡಿ ಕಾಪು ಮಂಡಲ ಕಾರ್ಯದರ್ಶಿ ರಾಜೇಶ್ ಕುಂದರ್ ಉದ್ಯಾವರ ಬಿಜೆಪಿ ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ರವಿ ಕೋಟ್ಯಾನ್ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷರಾದ ಸಚಿನ್ ಬೋಳ್ಜೆ ಕಾರ್ಯದರ್ಶಿ ಸತೀಶ್ ಪೂಜಾರಿ ಮಂಡಲ ಯುವಮೋರ್ಚಾ ಉಪಾಧ್ಯಕ್ಷರಾದ ಪ್ರಕಾಶ್ ಆಚಾರ್ಯ ಕಾರ್ಯದರ್ಶಿಗಳಾದ ಸೋನು ಪಾಂಗಳ ವಿನೀಶ್ ಶೆಟ್ಟಿ ಉದ್ಯಾವರ ಪಂಚಾಯತ್ ಸದಸ್ಯರು ಗಳಾದ ರೇಖಾ ಪ್ರಮೀಳಾ ಮತ್ತು ಸ್ಥಳೀಯರಾದ ಪ್ರಶಾಂತ್ ಲೋಕೇಶ್ ಉಪಸ್ಥಿತರಿದ್ದರು