ಕಾಪು: ಸೊರಕೆಯವರು ತನ್ನ ಆಡಳಿತ ಅವಧಿಯಲ್ಲಿ ಕಾಪು ಕ್ಷೇತ್ರವನ್ನು ಅಭಿವೃದ್ಧಿಯ ತುತ್ತತುದಿಗೆ ತಂದು ನಿಲ್ಲಿಸಿದ್ದರು : ಡಾ.ದೇವಿ ಪ್ರಸಾದ್ ಶೆಟ್ಟಿ – Vishwanews24
ಕಾಪು: ಭ್ರಷ್ಟ ಬಿಜೆಪಿಯನ್ನು ಕಿತ್ತೆಸೆದು ಕಾಂಗ್ರೆಸ್ ನ ಗೆಲುವಿಗಾಗಿ ನಿರಂತರ ಶ್ರಮಿಸಿ : ಕಾರ್ಯಕರ್ತರಿಗೆ ದೇವಿ ಪ್ರಸಾದ್ ಶೆಟ್ಟಿ ಕರೆ
ಕಾಪು: ಬಿಜೆಪಿಯು ಕುತಂತ್ರಗಳಿಂದ ಅಲ್ಪ ಸಂಖ್ಯಾತರ ಮತವನ್ನು ವಿಭಜಿಸುವ ಕೆಲಸದಲ್ಲಿ ತೊಡಗಿದೆ. ನೀವು ಇತರ ಪಕ್ಷಗಳಿಗೆ ನೀಡುವ ಒಂದೊಂದು ಮತವೂ ಬಿಜೆಪಿಗೆ ವರಧಾನವಾಗಿ ಪರಿಣಮಿಸುತ್ತದೆ ಎಂದು ಕೆಪಿಸಿಸಿ ಕೋ ಆರ್ಡಿನೇಟರ್ ಡಾ.ದೇವಿಪುಸಾದ್ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅಧಿಕಾರದಲ್ಲಿರುವ ಬಿಜೆಪಿ ಸರಕಾರದ ಭ್ರಷ್ಟ ಆಡಳಿತ ವ್ಯವಸ್ಥೆಯನ್ನು ಕಿತ್ತೆಸೆದು ಕಾಂಗ್ರೆಸ್ ನ ಗೆಲುವಿಗಾಗಿ ನಿರಂತರ ಶ್ರಮಿಸಿಬೇಕೆಂದು ಬೆಳಪು ಗ್ರಾಮೀಣ ಕಾಂಗ್ರೆಸ್ ಸಭೆಯಲ್ಲಿ ಶೆಟ್ಟಿ, ಕಾರ್ಯಕರ್ತರಿಗೆ ಕರೆ ನೀಡಿದರು.
ಸೊರಕೆಯವರು ತನ್ನ ಆಡಳಿತ ಅವಧಿಯಲ್ಲಿ ಕಾಪು ಕ್ಷೇತ್ರವನ್ನು ಅಭಿವೃದ್ಧಿಯ ತುತ್ತತುದಿಗೆ ತಂದು ನಿಲ್ಲಿಸಿದ್ದರು, ಬೆಳಪು ಗ್ರಾಮಕ್ಕಂತೂ ಅವರ ಕೊಡುಗೆ ಅಪಾರವಾಗಿತ್ತು.ಹಿಂದೆಯೂ ಬೆಳಪು ಗ್ರಾಮದ ಜನರು ಸೊರಕೆಯವರನ್ನು ಅತ್ಯಧಿ ಮತದಾನದ ಮೂಲಕ ಬೆಂಬಲಿಸಿದ್ದಾರೆ. ಮುಂದೆಯೂ ಬೆಂಬಲ ನೀಡುವ ಭರವಸೆ ನಮ್ಮಲ್ಲಿದೆ.
ಸುಳ್ಯ: ಸಚಿವ ಎಸ್.ಅಂಗಾರ ಕ್ಷೇತ್ರದಲ್ಲಿ ಚುನಾವಣೆ ಬಹಿಷ್ಕಾರದ ಕೂಗು – Vishwanews24
ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಗೆ ಅಪಾರವಾದ ಜನಬೆಂಬಲ ಸಿಗುತ್ತಿದೆ. ಆದರೆ ಬಿಜೆಪಿ ಇನ್ನೂ ಕೂಡ ಅಭ್ಯರ್ಥಿಗಳ ಆಯ್ಕೆಯಲ್ಲಿಯೇ ಸೀಟಿಗಾಗಿ ಬಡಿದಾಡುಕೊಳ್ಳುತ್ತಿದೆ ಎಂದರು.ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆಯಿದೆ.ಜನರ ಪ್ರಭುದ್ಧರಾಗಿದ್ದಾರೆ.ಬಿಜೆಪಿಯ ಸುಳ್ಳು ಭರವಸೆಗಳನ್ನು ನಂಬಿ ಮೋಸ ಜನ ಈಗಾಗಲೇ ಹೋಗಿದ್ದಾರೆ.
