ಕಾರ್ಕಳ: ಕೊರಗಜ್ಜನ ವೇಷ ತೊಟ್ಟು ಅವಮಾನ ; ವಾಟ್ಸಪ್ ಸ್ಟೇಟಸ್ ಹಾಕಿ ವಿಕೃತಿ – Vishwanews24
ಕಾರ್ಕಳ: ಕರಾವಳಿಯಲ್ಲಿ ಮತ್ತೆ ಆರಾಧ್ಯ ದೈವ ಕೊರಗಜ್ಜಗೆ ಅವಮಾನ
ಕೊರಗಜ್ಜನ ವೇಷ ತೊಟ್ಟು ವಾಟ್ಸಪ್ ಸ್ಟೇಟಸ್ ಹಾಕಿ ವಿಕೃತಿ
ಕಾರ್ಕಳ: ಆರಾಧ್ಯ ದೈವ ಕೊರಗಜ್ಜ ದೈವದ ವೇಷ ತೊಟ್ಟು ಅವಮಾನ ಮಾಡಿರುವ ಘಟನೆ ಕಾರ್ಕಳದ ಈದುವಿನಲ್ಲಿ ನಡೆದಿದೆ.
ಈದುವಿನ ರವೀಂದ್ರ ಎಂಬ ವ್ಯಕ್ತಿ ಕೊರಗಜ್ಜಗೆ ಅವಮಾನ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಕೊರಗಜ್ಜನ ವೇಷ ತೊಟ್ಟು ಅವಮಾನಗೊಳಿಸಿ, ತನ್ನ ವಾಟ್ಸಾಪ್ ಸ್ಟೇಟಸ್ ನಲ್ಲಿ ಹಾಕಿಕೊಂಡು ವಿಕೃತಿ ಮೆರೆದಿದ್ದಾನೆ. ಜ. 18ರಂದು ಕೊರಗಜ್ಜ ದೈವದ ವೇಷ ಹಾಕಿ ರವೀಂದ್ರ ಅವಮಾನಗೈದಿದ್ದ.
ರವೀಂದ್ರನ ಮನೆಗೆ ಕಾರ್ಕಳ ಪೊಲೀಸರು ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.
