ಕಾರ್ಕಳ : ಜೈ ತುಳುನಾಡ್ ಸಂಘಟನೆ ವತಿಯಿಂದ ತುಳು ಲಿಪಿ ನಾಮಫಲಕ ಅಳವಡಿಸುವಂತೆ ಮನವಿ -Vishwanews24
ಕಾರ್ಕಳ : ಜೈ ತುಳುನಾಡ್ ಸಂಘಟನೆ ವತಿಯಿಂದ ತುಳು ಲಿಪಿ ನಾಮಫಲಕ ಅಳವಡಿಸುವಂತೆ ಮನವಿ -Vishwanews24
ಕಾರ್ಕಳ: ಇಲ್ಲಿನ ಜೈ ತುಳುನಾಡ್ ಸಂಘಟನೆಯ ಘಟಕದ ವತಿಯಿಂದ ನಗರದಲ್ಲಿ ಅಂಗಡಿ, ಹೋಟೆಲ್, ದೇವಸ್ಥಾನದ ನಾಮಫಲಕಗಳಲ್ಲಿ, ಖಾಸಗಿ ಬಸ್ ಮತ್ತು ವಾಹನಗಳಲ್ಲಿ ತುಳು ಲಿಪಿ ನಾಮಫಲಕ ಅಳವಡಿಸುವಂತೆ ಮನವಿ ಮಾಡಲಾಯಿತು.
ಜೈ ತುಳುನಾಡ್ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಸದಾಶಿವ ಮುದ್ರಾಡಿ ಪ್ರತಿಕ್ರಿಯಿಸಿ, ‘ಅ.10ರಂದು ತುಳುಲಿಪಿ ದಿನಾಚರಣೆಯ ಅಂಗವಾಗಿ ಆಯೋಜಿಸಿದ ಅಭಿಯಾನಕ್ಕೆ ತಾಲ್ಲೂಕು ಬಸ್ ಚಾಲಕರ ಮಾಲೀಕರ ಸಂಘ, ಅಂಗಡಿ, ಕಟ್ಟಡ ಮಾಲಿಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ತುಳು ಲಿಪಿಗೆ ಬೆಂಬಲ ನೀಡುವುದಾಗಿ ಎಲ್ಲರೂ ಭರವಸೆ ನೀಡಿದ್ದಾರೆ’ ಎಂದರು.
ಈ ಅಭಿಯಾನದದಲ್ಲಿ ಜೈ ತುಳುನಾಡ್ನ ಪ್ರಧಾನ ಸಂಘಟನಾ ಕಾರ್ಯದರ್ಶಿ ರವಿಚಂದ್ರ ಕಾರ್ಲ, ಕಾರ್ಲ ಯುನಿಟ್ನ ಸಂಚಾಲಕ ವಿಶು ಶ್ರೀಕೇರ, ಶೇಖರ್ ಶ್ರೀಗಂಗೆ, ಸದಸ್ಯರಾದ ಅರುಣ್ ಪಳ್ಳಿ, ಪ್ರಶಾಂತ್ ನಂದೊಲಿಗೆ, ಲಿಖಿತ್ ಕಾರ್ಲ, ಕಿಶೋರ್ ಮುಂಡ್ಲಿ, ಪ್ರೀತಮ್ ಮಾಳ ಮತ್ತು ಇನ್ನಿತರರು ಭಾಗವಹಿಸಿದ್ದರು.
ಇದನ್ನೂ ಓದಿ : ಬೆಂಗಳೂರು : ಬರೋಬ್ಬರಿ 39 ಕೋಟಿ ರೂ. ತೆರಿಗೆ ಬಾಕಿ : ಬಿಬಿಎಂಪಿಯಿಂದ ಮಂತ್ರಿ ಮಾಲ್ಗೆ ಬೀಗ -Vishwanews24
