ಕಿನ್ನಿಗೋಳಿ : ಗ್ರಾಹಕರ ಸೋಗಿನಲ್ಲಿ ಬಂದು ವ್ಯಾಪಾರಿಗಳನ್ನು ವಂಚಿಸುತ್ತಿದ್ದ ಇಬ್ಬರ ಬಂಧನ ; ಓರ್ವ ಪರಾರಿ – vishwanews24

Featured, ದಕ್ಷಿಣ ಕನ್ನಡ

ಕಿನ್ನಿಗೋಳಿ : ಗ್ರಾಹಕರ ಸೋಗಿನಲ್ಲಿ ಬಂದು ವ್ಯಾಪಾರಿಗಳನ್ನು ವಂಚಿಸುತ್ತಿದ್ದ ಇಬ್ಬರ ಬಂಧನ ; ಓರ್ವ ಪರಾರಿ

ಮುಲ್ಕಿ : ಕಿನ್ನಿಗೋಳಿಯಲ್ಲಿ ಗ್ರಾಹಕರ ಸೋಗಿನಲ್ಲಿ ಬಂದು ವ್ಯಾಪಾರಿಗಳನ್ನು ವಂಚಿಸುತ್ತಿದ್ದ ತಂಡವನ್ನು ಮುಲ್ಕಿ ಪೊಲೀಸರು ಸಾರ್ವಜನಿಕರ ನೆರವಿನೊಂದಿಗೆ ಬಂಧಿಸಿದ್ದಾರೆ. ಕಿನ್ನಿಗೋಳಿ ಪೇಟೆಯಲ್ಲಿ ಸ್ಕಾರ್ಪಿಯೋ ಕಾರಿನಲ್ಲಿ ಬಂದ ಮೂರು ಜನ ಯುವಕರು ಸ್ಥಳೀಯ ಮಾರುಕಟ್ಟೆಯ ಅಂಗಡಿಯೊಂದಕ್ಕೆ ಬಂದು, ಸಾಮಾನುಗಳನ್ನು ತೆಗೆದುಕೊಂಡು, ಗೂಗಲ್ ಪ್ಲೇ ಮಾಡುತ್ತೇನೆ ಎಂದು ಹೇಳಿದ್ದು,500 ರೂ ಕೊಡಿ ಸಾಮಾನಿನ ಹಣ ಮತ್ತು 500 ರೂ ಒಟ್ಟಿಗೆ ಗೂಗಲ್ ಪೇ ಮಾಡುತ್ತೇನೆಂದು ಹೇಳಿದ್ದಾರೆ.

ರೀಲ್ಸ್ ಮಾಡಲು ಹೋಗಿ 300 ಅಡಿ ಆಳದ ಕಮರಿಗೆ ಬಿದ್ದು ಯುವತಿ ದಾರುಣ ಸಾವು – vishwanews24

ಈ ಸಂದರ್ಭ ಪಕ್ಕದ ಅಂಗಡಿ ಮಾಲೀಕರಿಗೆ ಸಂಶಯ ಬಂದು ವಿಚಾರಿಸಿದಾಗ ಇದು ವಂಚಕರ ತಂಡ ಎಂದು ಖಾತ್ರಿಯಾಗಿದೆ. ಬಳಿಕ ಈ ವಂಚಕರ ತಂಡದ ಮೂವರು ಅಲ್ಲಿಂದ ಪಾರಾರಿಯಾಗಲು ಯತ್ನಿಸುತ್ತಿದ್ದಾಗ ಸಾರ್ವಜನಿಕರು ಬೆನ್ನಟ್ಟಿ ಇಬ್ಬರನ್ನು ಹಿಡಿದು ಮುಲ್ಕಿ ಪೊಲೀಸರಿಗೆ ಮಾಹಿತಿ ನೀಡಿದಾಗ ಓರ್ವ ಪರಾರಿಯಾಗಿದ್ದಾನೆ.

ಉಪ್ಪಿನಂಗಡಿ: ಐರಾವತ ಬಸ್ ನಲ್ಲಿ ಆಕಸ್ಮಿಕ ಬೆಂಕಿ ; ತಪ್ಪಿದ ಅನಾಹುತ – vishwanews24

ಆರೋಪಿಗಳು ಮಾಡುತ್ತಿದ್ದ ವಂಚನೆ, ಸ್ಥಳೀಯ ಅಂಗಡಿಯ ಸಿ ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ವಂಚಕರನ್ನು ಮುಲ್ಕಿ ಪೊಲೀಸರು ಬಂಧಿಸಿ ತೀವು ತನಿಖೆ ನಡೆಸುತ್ತಿದ್ದಾರೆ.

Leave a Reply