ಮಂಗಳೂರು : ಸಾಮಾನ್ಯವಾಗಿ ಈ ಹೊತ್ತಿಗೆ ಮೀನು ಅಥವಾ ಕೋಳಿ ಮಾಂಸದ ಬೆಲೆ ಕಡಿಮೆಯಾಗಿರುತ್ತದೆ. ದುರದೃಷ್ಟವೋ ಎಂಬಂತೆ ಪ್ರಸಕ್ತ ಹವಾಮಾನದಿಂದ ಮೀನು ಮತ್ತು ಕೋಳಿ ಮಾಂಸ ಪೂರೈಕೆ ಕುಸಿದಿದ್ದು, ಪರಿಸ್ಥಿತಿ ಮಾಂಸಾಹಾರಿಗಳಿಗೆ ಹಿತಕರವಾಗಿಲ್ಲ. ಬೆಲೆ ಗಗನಕ್ಕೇರಿದೆ.
ಎರಡ್ಮೂರು ತಿಂಗಳ ಹಿಂದೆ ಜೀವಂತ ಕೋಳಿ( ಚಿಕನ್/ಬ್ರೋಯ್ಲರ್) ಕಿಲೋಗೆ 70 ರೂ ಆಗಿದ್ದರೆ, ಈಗ 136 ರೂ ಆಗಿದೆ. ಇದೇ ರೀತಿ ಎರಡು ತಿಂಗಳ ಹಿಂದೆ ಚರ್ಮ ಸುಲಿದ ಕೋಳಿ ಕಿಲೋಗೆ 190 ರೂ ಆಗಿದ್ದರೆ ಈಗ 220 ರೂ ಆಗಿದೆ.
ಕಡಿಮೆ ಉತ್ಪಾದನೆ ಮತ್ತು ಹವಾಮಾನ ಬದಲಾವಣೆಯಿಂದ ಈಗ ಮಾಂಸಕ್ಕೆ ಬೆಲೆ ಹೆಚ್ಚಾಗಿದೆ ಎಂದು ಅನುಪಮ ಫೀಡ್ಸ್ ಮತ್ತು ಐಡಿಯಲ್ ಚಿಕನ್ ಆಡಳಿತ ಪಾಲುದಾರ ವಿನ್ಸೆಂಟ್ ಕುಟಿನ್ಹೋ ತಿಳಿಸಿದರು.
“ಅಧಿಕ ಉಷ್ಟಾಂಶವಿದ್ದಾಗ ಕೋಳಿಗಳು ಕಡಿಮೆ ಆಹಾರ ತಿನ್ನುತ್ತವೆ. ಪರಿಣಾಮ ಅವುಗಳ ತೂಕ ಕಡಿಮೆಯಾಗುತ್ತದೆ. ಎರಡನೇಯದಾಗಿ, ಅಧಿಕ ಉಷ್ಟಾಂಶದಿಂದ ಶೇ 10ರಷ್ಟು ಕೋಳಿಗಳು ಸತ್ತಿವೆ. ಹಾಗಾಗಿ ಈಗ ಕೋಳಿ ಮಾಂಸ ಬೆಲೆ ಜಾಸ್ತಿಯಾಗಿದೆ” ಎಂದವರು ವಿವರಿಸಿದರು.
ಮಂಗಳೂರು ನಗರಕ್ಕೆ ದಿನಕ್ಕೆ 1,00,000 ಕಿಲೋ ಚಿಕನ್ ಅಗತ್ಯವಿದೆ. ಈಗ ಈ ಪ್ರಾಂತ್ಯದಲ್ಲಿ ಕೇವಲ 50,000-60,000 ಕಿಲೋ ಕೋಳಿ ಮಾಂಸ ಲಭ್ಯವಿದೆ. ಇಲ್ಲಿನ ಅಗತ್ಯಕ್ಕೆ ಶಿವಮೊಗ್ಗ, ಹಾಸನ ಮತ್ತು ಚಿಕ್ಕಮಗಳೂರಿಂದ ಕೋಳಿ ತರಿಸಲಾಗುತ್ತಿದೆ ಎಂದು ಕುಟಿನ್ಹೋ ತಿಳಿಸಿದರು.
ಅಚ್ಚರಿಯೆಂದರೆ ಕೋಳಿ ಮಾಂಸ ಬೆಲೆ ಹೆಚ್ಚಾಗಿದ್ದರೂ ಮೊಟ್ಟೆ ಬೆಲೆ ನಿಯಂತ್ರಣದಲ್ಲಿದೆ. ಶುಕ್ರವಾರ 100 ಮೊಟ್ಟೆ ಬೆಲೆ 440 ರೂ ಆಗಿತ್ತು. ಎರಡ್ಮೂರು ತಿಂಗಳ ಹಿಂದೆ 100 ಮೊಟ್ಟೆಗೆ 380 ರೂ ಆಗಿತ್ತು. “ಬೇಸಗೆಯಲ್ಲಿ ಹೆಚ್ಚಿನವರು ಮೊಟ್ಟೆ ಬಳಕೆ ಮಾಡುವುದಿಲ್ಲ” ಎಂದು ಮೊಟ್ಟೆ ರಖಂ ವ್ಯಾಪಾರಿಗಳು ಹೇಳಿದ್ದಾರೆ.
ಮೀನು ದುಬಾರಿ : ಬೆಲೆಬಾಳುವ ಮೀನು ಅಲಭ್ಯವಾಗಿದ್ದು, ಮೀನಿನ ಬೆಲೆ ಗಗನಕ್ಕೇರಿದೆ. ಈ ಹೊತ್ತಿಗೆ ಭೂತಾಯಿ, ಬಂಗುಡೆ, ಏಡಿ, ಸಿಗಡಿ, ತಾಟೆ ಮೊದಲಾದ ಮೀನುಗಳು ಯಥೇಚ್ಛ ಸಿಗಬೇಕಿದ್ದರೂ, ದೊಡ್ಡ ಮೀನಿನ ಪ್ರಮಾಣ ಕಡಿಮೆಯಾಗಿದ್ದು, ಮೀನಿನ ಬೆಲೆ ದ್ವಿಗುಣಗೊಂಡಿದೆ ಎಂದು ಮಾರುಕಟ್ಟೆ ಮೂಲಗಳು ಹೇಳಿವೆ. ಈಗ ಪಾಂಫ್ರೆಟ್ ಕಿಲೋಗೆ 1,000 ರೂ ಆಗಿದ್ದರೆ, ಕಿಂಗ್ಫಿಶ್/ಅಂಜಲಿಗೆ 600-900 ರೂ ಆಗಿದೆ.
ಉಡುಪಿ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ, ವಂಚನೆ ಪ್ರಕರಣ: ಪೋಕ್ಸೋ ಕಾಯಿದೆಯಡಿ ಇಬ್ಬರ ಬಂಧನ ಉಡುಪಿ: ಅಪ್ರಾಪ್ತ ಬಾಲಕಿಯೊಬ್ಬಳನ್ನು ಪ್ರೀತಿಯ…
ಹೆಜಮಾಡಿ ಕಾಂಗ್ರೆಸ್ ಗೆ ಭರವಸೆ ನಾಯಕ : ಪ್ರಭೋದ್ ಚಂದ್ರ ಹೆಜಮಾಡಿ ಕಾಪು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ…
ಉಡುಪಿ: ಟಯರ್ ಸ್ಫೋಟಗೊಂಡು ಮೀನು ಸಾಗಾಟದ ಲಾರಿ ಪಲ್ಟಿ ಉಡುಪಿ: ಉಡುಪಿಯಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದ ಮೀನು ಸಾಗಾಟದ ಲಾರಿಯೊಂದು…
ಸತತ 4ನೇ ಬಾರಿ CNG ದರ ಏರಿಕೆ: ಪ್ರತಿ ಕೆಜಿಗೆ 2 ರೂ. ಹೆಚ್ಚಳ ನವದೆಹಲಿ: ಪೆಟ್ರೋಲ್, ಡೀಸೆಲ್ ಬಳಿಕ…
ದುಬೈನಲ್ಲಿ ರಸ್ತೆ ಅಪಘಾತ : ಕಿನ್ನಿಗೋಳಿಯ ಯುವತಿ ಸಾವು ಮಂಗಳೂರು: ದುಬೈನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಕಳೆದ ಕೆಲವು…
ಬಿಜೆಪಿ ಸಂಘಪರಿವಾರವು ದೇಶದ ಕಾನೂನಿಗೆ ವಿರುದ್ಧವಾಗಿದೆ: ರಿಯಾಝ್ ಫರಂಗಿಪೇಟೆ ಗಲಭೆಕೋರರ ವಿರುದ್ಧದ ಪ್ರಕರಣ ಹಿಂಪಡೆದ ಕ್ರಮಕ್ಕೆ SDPI ತೀವ್ರ ವಿರೋಧ…