ತಿರುಪತಿ : ತಿರುಮಲ ಶ್ರೀವಾರಿ ದರ್ಶನದ ನಕಲಿ ಟಿಕೆಟ್ಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಎರಡು ಗ್ಯಾಂಗ್ಗಳ 7 ಜನರನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ.
ವಿಶೇಷ ದರ್ಶನದ ನಕಲಿ ಟಿಕೆಟ್ ಅನ್ನು ದುಬಾರಿ ಬೆಲೆಗೆ ಮಾರಾಟ ಮಾಡಿ, ಭಕ್ತರನ್ನು ವಂಚಿಸುತ್ತಿದ್ದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.
ಈ ಆರೋಪದ ಮೇರೆಗೆ ಟಿಟಿಡಿ ಅಧಿಕಾರಿಗಳು ಎರಡು ಗ್ಯಾಂಗ್ಗಳ ೭ ಜನರನ್ನು ಸೋಮವಾರ ತಿರುಮಲ ಪೊಲೀಸ್ ಠಾಣೆಯಲ್ಲಿ ಬಂದಿಸಿದ್ದಾರೆ. ಬಂಧಿತರನ್ನು ಎಸ್ಪಿಎಫ್ ಕಾನ್ಸ್ಟೇಬಲ್ ಎಂ ಕೃಷ್ಣರಾವ್, ತಿರುಮಲ ವಿಶೇಷ ಪ್ರವೇಶ ಕೌಂಟರ್ನ ನಾಗೇಂದ್ರ, ಚೆಂಗಾರೆಡ್ಡಿ, ದೇವೇಂದ್ರ ಪ್ರಸಾದ್ ಮತ್ತು ವೆಂಕಟ್ ಲಡ್ಡು ಮಾರಾಟ ಕೌಂಟರ್ ಸಿಬ್ಬಂದಿ ಅರುಣ್ ರಾಜ್, ಟ್ರಾವೆಲ್ ಏಜೆನ್ಸಿ ಸಿಬ್ಬಂದಿ ಬಾಲಾಜಿ ಎಂದು ಗುರುತಿಸಲಾಗಿದೆ.
ಈ ಆರೋಪಿಗಳು ಮಧ್ಯಪ್ರದೇಶದಿಂದ ಬಂದ ಭಕ್ತರು ಮಧ್ಯವರ್ತಿಯ ಬಳಿ 300 ರೂ. ಮೌಲ್ಯದ ಟಿಕೆಟ್ಗೆ ತಲಾ 3,300 ರೂ. ತೆತ್ತು ಖರೀದಿಸಿ, ದೇವರ ದರ್ಶನಕ್ಕೆ ಮುಂದಾಗಿದ್ದರು. ಪ್ರವೇಶದ್ವಾರದ ಬಳಿ ಭಕ್ತರ ಬಳಿ ಇದ್ದ ಟಿಕೆಟ್ ಪರಿಶೀಲಿಸಿದಾಗ ಅದು ನಕಲಿ ಎಂಬುದು ಸ್ಪಷ್ಟವಾಗಿತ್ತು.
ಹೊಸ ವರ್ಷದಂದು ಶ್ರೀ ವೆಂಕಟೇಶ್ವರನ ದರ್ಶನಕ್ಕೆ ಮಧ್ಯಪ್ರದೇಶದಿಂದ ಬಂದಿದ್ದ ಕುಟುಂಬದವರು 300 ರೂ. ಮೌಲ್ಯದ ವಿಶೇಷ ದರ್ಶನದ ಟಿಕೆಟ್ (ಶ್ರೀವಾರಿ ದರ್ಶನದ ನಕಲಿ ಟಿಕೆಟ್) ಅನ್ನು ತಲಾ 7 ಸಾವಿರ ರೂ.ಗೆ ಮಾರಾಟ ಮಾಡಿದ್ದರು. ಮೊದಲು ಪೇದೆ ಕೃಷ್ಣರಾವ್ ನೇತೃತ್ವದಲ್ಲಿ ನಕಲಿ ಟಿಕೆಟ್ ಮಾರಾಟ ನಡೆಯುತ್ತಿತ್ತು. ಬಳಿಕ ಪ್ರವೇಶ ಕೌಂಟರ್ನಲ್ಲಿ ಇರುತ್ತಿದ್ದ ಇದೇ ಗ್ಯಾಂಗ್ನ ನಾಗೇಂದ್ರ, ಸ್ಕಾನ್ ಮಾಡದೇ ನಕಲಿ ಟಿಕೆಟ್ ಪಡೆದವರನ್ನು ಒಳಕ್ಕೆ ಬಿಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಸೇತುವೆ ಮೇಲೆ 3 ವರ್ಷದ ಮಗು ಬಿಟ್ಟು ನದಿಗೆ ಹಾರಿದ ದಂಪತಿ ಅಮರಾವತಿ: ಇಲ್ಲಿನ ಪಶ್ಚಿಮ ಗೋದಾವರಿ ಜಿಲ್ಲೆಯ ಚಿಂಚಿನಾಡ…
ಕರಾವಳಿಯಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಸಮಿತಿ ರಚನೆ : ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಭರವಸೆ ಕರಾವಳಿ ಭಾಗದಲ್ಲಿ ಕರ್ನಾಟಕ…
ಬಿಟ್ ಕಾಯಿನ್ ಹಗರಣ : ಹ್ಯಾಕರ್ ಶ್ರೀಕಿ ಹಾಗೂ ರಾಬಿನ್ ಖಂಡೇವಾಲ ಜಾಮೀನು ಅರ್ಜಿ ವಜಾ ಬೆಂಗಳೂರು: ಬಿಟ್ ಕಾಯಿನ್…
ಬಪ್ಪನಾಡು ದ್ವಾರ ಸ್ಥಳಾಂತರ ಕಾಮಗಾರಿ ವೀಕ್ಷಿಸಿದ ಎ.ಜೆ. ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮಂಗಳೂರು:ರಾಷ್ಟ್ರೀಯ ಹೆದ್ದಾರಿ-66ರ ವಿಸ್ತರಣೆಯ…
ನಾಗೇಂದ್ರ ಅವರು ಯಾವುದೇ ತಪ್ಪು ಮಾಡಿಲ್ಲ, ಅವರು ಒಬ್ಬ ನಿರಪರಾಧಿ .. ನಾಗೇಂದ್ರ ಅವರ ವಿರುದ್ಧ ಬಿಜೆಪಿ ನಡೆದುಕೊಂಡ ರೀತಿ…
ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಚಿನ್ನ-ಬೆಳ್ಳಿಯ ಪ್ರಭಾವಳಿ ಅರ್ಪಿಸಿದ ರಾಜೇಶ್ ಶೆಟ್ಟಿ ದಂಪತಿ ಮಂಗಳೂರು : ಶ್ರೀ ಕ್ಷೇತ್ರ ಕಟೀಲು…