ದಯವಿಟ್ಟು ನನಗೊಂದು ಅವಕಾಶ ಕೊಡಿ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಸಹಕರಿಸಿ : ಡಿಕೆ ಶಿ – Vishwanews24

Featured, ರಾಜ್ಯ ನ್ಯೂಸ್

ನಿಮ್ಮ ಮಣ್ಣಿನ ಮಗನಾಗಿ ನಾನು ಕೇಳಿಕೊಳ್ತೇನೆ , ದಯವಿಟ್ಟು ನನಗೊಂದು ಅವಕಾಶ ಕೊಡಿ ; ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಸಹಕರಿಸಿ

ಮಂಡ್ಯ: ದೇವೇಗೌಡರನ್ನು ಪ್ರಧಾನಿಯಾಗಿ, ಕುಮಾರಸ್ವಾಮಿಯನ್ನು ಸಿಎಂ ಆಗಿ ಕಾಂಗ್ರೆಸ್ ಮಾಡಿದೆ. ಕೋಮುವಾದಿ ಪಕ್ಷಕ್ಕೆ ಅಧಿಕಾರ ಕೊಡಬಾರದು ಎಂಬ ಉದ್ದೇಶದಿಂದ ಜೆಡಿಎಸ್‌ ಜೊತೆ ಹೋದೆವು. ಆದರೆ, ಜೆಡಿಎಸ್‌ ನಾವು ಕೊಟ್ಟ ಅಧಿಕಾರ ಉಳಿಸಿಕೊಳ್ಳಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಕಿಡಿಕಾರಿದ್ದಾರೆ.

ಮಂಡ್ಯದಲ್ಲಿ ಆಯೋಜಿಸಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ್ದ ಅವರು, ಯಾವುದೇ ಷರತ್ತು ಇಲ್ಲದೇ ಅಧಿಕಾರ ಕೊಟ್ಟೆವು. ನಿಖಿಲ್ ಚುನಾವಣೆಗೆ ನಿಂತಾಗ ನಾವು ಪ್ರಾಮಾಣಿಕವಾಗಿ ಬೆಂಬಲ ಕೊಟ್ಟೆವು. ಆದರೆ, ಅದ್ಯಾವುದನ್ನು ಅವರು ಉಳಿಸಿಕೊಳ್ಳಲಿಲ್ಲ ಎಂದರು.

ನಿಮ್ಮ ಮಣ್ಣಿನ ಮಗನಾಗಿ ನಾನು ಕೇಳಿಕೊಳ್ತೇನೆ. ನಿಮ್ಮ ಸೇವೆ ಮಾಡಲು ದಯವಿಟ್ಟು ನನಗೊಂದು ಅವಕಾಶ ಕೊಡಿ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಸಹಕರಿಸಿ.ಮೇಕೆದಾಟು ಪಾದಯಾತ್ರೆ ವೇಳೆ ನಮ್ಮ ಮೇಲೆ ಕೇಸ್ ಹಾಕಿದ್ರು. ಕೆಪಿಸಿಸಿ ಅಧ್ಯಕ್ಷನಾದ ಬಳಿಕ ನನ್ನ ಮೇಲೆ 25 ಕೇಸ್ ಹಾಕಿದ್ದಾರೆ. ಇದು ಬಿಜೆಪಿ ಸರ್ಕಾರದ ನೀತಿ. ಐಟಿ, ಬಿಟಿ, ಸಿಬಿಐ‌ನಿಂದ ನನ್ನನ್ನು ನಿಯಂತ್ರಣ ಮಾಡ್ತೀವಿ ಎಂದು ನೀವು ತಿಳಿದಿದ್ದರೆ, ಅದು ಭ್ರಮೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕುಕ್ಕೆ ಸುಬ್ರಮಣ್ಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ – Vishwanews24

ಬಸವಣ್ಣ, ಕನಕದಾಸರ, ಶಿಶುನಾಳ ಶರೀಫರ ಕರ್ನಾಟಕ ಆಗಬೇಕು. ಎಲ್ಲಾ ವರ್ಗಕ್ಕೂ ಸಮ ನ್ಯಾಯ ಸಿಗಬೇಕು. ರೈತರಿಗೆ ಬೆಳೆಗಳಿಗೆ ಬೆಂಬಲ ಕೊಡಲು ಕಾಂಗ್ರೆಸ್ ನೀತಿ ರೂಪಿಸುತ್ತಿದೆ. ಹೆದ್ದಾರಿ ನಿರ್ಮಾಣ ಮಾಡಿದ್ದು ಕಾಂಗ್ರೆಸ್, ಆದರೆ ಬಿಜೆಪಿ ಅವರು ಉದ್ಘಾಟನೆ ಮಾಡ್ತಿದ್ದಾರೆ. ಅವರು ಉದ್ಘಾಟನೆ ಮಾಡಿಕೊಳ್ಳಲಿ, ಅದು ನಮ್ಮ‌ ಕೊಡುಗೆ ಎಂದರು.

ಪ್ರತಿ ಮನೆಗೂ 200 ಯೂನಿಟ್ ಕರೆಂಟ್ ಉಚಿತ ನೀಡ್ತೀವಿ. ಇದರಿಂದ ಜನರಿಗೆ ತಿಂಗಳಿಗೆ 1500 ಉಳಿತಾಯ. ಪ್ರತಿ ಮನೆಯ ಯಜಮಾನಿಗೆ 2000 ರೂಪಾಯಿ ಕೊಡ್ತೇವೆ. ಪ್ರತಿ ತಿಂಗಳು ಒಂದು ಕುಟುಂಬಕ್ಕೆ 3500 ಉಳಿಯುತ್ತದೆ. ಬೆಲೆ ಏರಿಕೆಯಾಗಿದೆ, ಆದಾಯ ಪಾತಾಳ ಸೇರಿಗೆ ಎಂದು ಮಹಿಳೆಯರ ಅಳಲು ತೋಡಿಕೊಳ್ತಿದ್ದಾರೆ. ಹೆಣ್ಣು ಕುಟುಂಬದ ಕಣ್ಣು, ಹೆಣ್ಣು ದೇಶದ ಶಕ್ತಿ ಆಸ್ತಿ. ಆಕೆಯ ಕೈ ಶಕ್ತಿ ಪಡಿಸುವ ಕೆಲಸ ಮಾಡಬೇಕು. ಆ ಉದ್ದೇಶದಿಂದಲೇ ಗೃಹ ಜ್ಯೋತಿ, ಗೃಹ ಲಕ್ಷ್ಮೀ ಯೋಜನೆ ಜಾರಿ ಮಾಡಿದ್ದೇವೆ. 5 ವರ್ಷದಲ್ಲಿ ಎರಡು ಯೋಜನೆಗಳಿಂದ ಪ್ರತಿ ಕುಟುಂಬಕ್ಕೆ 5 ಲಕ್ಷ ಉಳಿಯಲಿದೆ ಎಂದು ಹೇಳಿದರು.

ಬಿಜೆಪಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಕುಮಾರಣ್ಣ ಒಂದು ದಿನ ಮಾತಾಡಲಿಲ್ಲ. ಪ್ರತಿ ಹುದ್ದೆಗೂ ಈ ಸರ್ಕಾರದಲ್ಲಿ ರೇಟ್ ಫಿಕ್ಸ್ ಆಗಿದೆ. ಹೋಟೆಲ್ ಬೋರ್ಡ್ ರೀತಿ ಲಂಚದ ಬೋರ್ಡ್ ಹಾಕಿಕೊಂಡಿದ್ದಾರೆ. ನಿಮ್ಮ ಮಗ ಕಾಂಗ್ರೆಸ್ ಅಧ್ಯಕ್ಷನಾಗಿದ್ದಾನೆ. ನನ್ನ ಕೈ ಬಲ ಪಡಿಸಲು ಮಂಡ್ಯದಲ್ಲಿ 7ಕ್ಕೆ 7 ಸ್ಥಾನ ಗೆಲ್ಲಿಸಿ. ಕೊಟ್ಟ ಮಾತು ಉಳಿಸಿಕೊಳ್ತೇವೆ. ನಮಗೆ ಜಾತಿ ಧರ್ಮ ಮುಖ್ಯ ಅಲ್ಲ. ಯುವಕರಿಗೆ ಉದ್ಯೋಗ ಕೊಡಬೇಕು, ಭ್ರಷ್ಟಾಚಾರ ತೊಲಗಿಸಬೇಕು ಎಂದರು.

ಕುಕ್ಕೆ ಸುಬ್ರಮಣ್ಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ – Vishwanews24

ಕಳೆದ 7ಕ್ಕೆ 7 ಸೋತ ಬಳಿಕ ಎರಡು MLC ಸ್ಥಾನ ಗೆದ್ದಿದ್ದೇವೆ. ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಗ್ರಾಪಂ ಸದಸ್ಯರು, ಪದವೀಧರರು ದಡ್ಡರಾ? ಜೆಡಿಎಸ್‌, ಬಿಜೆಪಿಯ ಹಲವು ನಾಯಕರು ಕಾಂಗ್ರೆಸ್‌ಗೆ ಬರಲಿದ್ದಾರೆ. ರಾಜಕೀಯ ಪ್ರಜ್ಞೆ ಇಲ್ಲದೇ ಇವರ‌್ಯಾರು ಕಾಂಗ್ರೆಸ್‌ಗೆ ಬರ್ತಿಲ್ಲ. ಕಾಂಗ್ರೆಸ್‌‌‌ನಲ್ಲಿ ಎಲ್ಲರಿಗೂ ಭವಿಷ್ಯವಿದೆ. ಕೈ ಹಿಡಿದು ನಡೆಯೋಣ, ಕೈ ಹಿಡಿದು ಬೆಳೆಯೋಣ, ಕೈಗೆ ಕೈ ಜೋಡಿಸೋಣ ಎಂದು ಡಿಕೆ ಶಿವಕುಮಾರ್‌ ಹೇಳಿದರು

Leave a Reply