ನೀವು ನಿಮ್ಮನ್ನು ಬದಲಿಸಿಕೊಳ್ಳಿ, ಬದಲಾಯಿಸಿಕೊಳ್ಳದಿದ್ದರೆ ಸರಿಯಾದ ಸಮಯದಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತದೆ” ಎಂದು ಬಿಜೆಪಿ ಸಂಸದರಿಗೆ ಪ್ರಧಾನಿ ಎಚ್ಚರಿಕೆ ನೀಡಿದ್ದಾರೆ.
“ದಯವಿಟ್ಟು ಸಂಸತ್ತು ಹಾಗೂ ಸಭೆಗಳಲ್ಲಿ ನಿಯಮಿತವಾಗಿ ಪಾಲ್ಗೊಳ್ಳಿ. ಈ ಬಗ್ಗೆ ನಿರಂತರವಾಗಿ ಒತ್ತಡ ಹೇರುವುದು ಹಾಗೂ ನಿಮ್ಮನ್ನು ಮಕ್ಕಳಂತೆ ನಡೆಸಿಕೊಳ್ಳುವುದು ನನಗೆ ಒಳ್ಳೆಯದಲ್ಲ. ನೀವು ನಿಮ್ಮನ್ನು ಬದಲಾಯಿಸಿಕೊಳ್ಳದಿದ್ದರೆ ಸರಿಯಾದ ಸಮಯದಲ್ಲಿ ಬದಲಾವಣೆಗಳಾಗುತ್ತವೆ” ಎಂದು ಪ್ರಧಾನಿ ಹೇಳಿದರು.
ಈ ಅಧಿವೇಶನಕ್ಕಾಗಿ 12 ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸಿದ ಮೇಲೆ ಸರಕಾರವು ವಿಪಕ್ಷಗಳಿಂದ ಆಕ್ರೋಶವನ್ನು ಎದುರಿಸುತ್ತಿದೆ.