ನಿರಂತರ ಚಾರಿಟೇಬಲ್ ಟ್ರಸ್ಟ್ (ರಿ) ಕೊಕ್ಕರ್ಣೆ ಇವರ ಆಶ್ರಯದಲ್ಲಿ ಉಚಿತ ಹೊರರೋಗಿ ಡಯಾಲಿಸಿಸ್ ಕೇಂದ್ರದ ಉದ್ಘಾಟನಾ ಸಮಾರಂಭ : Vishwanews24

Featured, ಉಡುಪಿ

ನಿರಂತರ ಚಾರಿಟೇಬಲ್ ಟ್ರಸ್ಟ್ (ರಿ) ಕೊಕ್ಕರ್ಣೆ ಇವರ ಆಶ್ರಯದಲ್ಲಿ ಉಚಿತ ಹೊರರೋಗಿ ಡಯಾಲಿಸಿಸ್ ಕೇಂದ್ರದ ಉದ್ಘಾಟನಾ ಸಮಾರಂಭ : Vishwanews24

ಉಡುಪಿ: ಆರೋಗ್ಯ, ಶಿಕ್ಷಣ, ಕೃಷಿ ಮತ್ತು ಧಾಮಿಕ ಕ್ಷೇತ್ರದಲ್ಲಿ ನಿರಂತರ ಸೇವೆ ನೀಡಲು ಹುಟ್ಟು ಹಾಕಿದ ಸಂಸ್ಥೆಯೇ ನಿರಂತರ ಚಾರಿಟೇಬಲ್ ಟ್ರಸ್ಟ್ (ರಿ) ಕೊಕ್ಕರ್ಣೆ, ಇದರ ಸ್ಥಾಪಕ ಅಧ್ಯಕ್ಷರಾಗಿ, ಈ ನಿರಂಜನ್ ಶೆಟ್ಟಿ ಇವರು ಕಾರ್ಯನಿರ್ವಹಿಸುತ್ತಿದ್ದು ಈಗಾಗಲೇ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಹಲವಾರು ಉಚಿತ ಶಿಬಿರಗಳನ್ನು ಏರ್ಪಡಿಸಿ ( ಸಮಾಜ ಸೇವಾ ಕಾರ್ಯಗಳನ್ನು), ಚಾರಿಟೇಬಲ್ ಟ್ರಸ್ಟ್ ಎಷ್ಟೋ ಬಡವರ ಪಾಲಿಗೆ ವರದಾನವಾಗಿದೆ.

ಇದೀಗ ನಿರಂತರ ಚಾರಿಟೇಬಲ್ ಟ್ರಸ್ಟ್ ನಡಿ ಆರೋಗ್ಯ ಕ್ಷೇತ್ರಕ್ಕೆ ಸಂಬಂಧ ಪಟ್ಟಂತ ಉಚಿತ ಡಯಾಲಿಸಿಸ್ ಕೇಂದ್ರದ ಸೇವೆಯನ್ನು ಪ್ರಾರಂಭಿಸಿ ಮಹತ್ತರವಾದ ಹೆಜ್ಜೆಯನ್ನಿಡುವ ಸಂಕಲ್ಪಕ್ಕೆ ಮುಂದಾಗಿದೆ. ಬ್ರಹ್ಮಾವರ ಪ್ರತಿಷ್ಠಿತ ಪ್ರಣವ್ ಆಸ್ಪತ್ರೆಯಲ್ಲಿ ಉಚಿತ ಹೊರರೋಗಿ ಡಯಾಲಿಸಿಸ್ ಕೇಂದ್ರ ಪ್ರಾರಂಭವಾಗಲಿದ್ದು ಮೂರು ಡಯಾಲಿಸಿಸ್ ಯಂತ್ರವು ಸೇವೆಗೆ ದಿನದ 12 ಗಂಟೆ ಲಭ್ಯವಿದ್ದು ಅರ್ಹ ಫಲಾನುಭವಿಗೆ ಸಂಪೂರ್ಣ ಉಚಿತವಾಗಿರುತ್ತದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ನೆರವೇರಿಸಲಿದ್ದು ಡಯಾಲಿಸಸ್ ಯಂತ್ರದ ಚಲನೆಯನ್ನು ಶಾಸಕರಾದ ರಘುಪತಿ ಭಟ್ ನೀಡಲಿದ್ದಾರೆ. ಮಾಡ್ಯುಲರ್ ಮತ್ತು ಲ್ಯಾಮಿನರ್ ಫ್ಲೋ ಆಪರೇಷನ್‌ ಥಿಯೇಟರನ್ನು ಕುಮುಟಾ ಶಾಸಕರಾದ ದಿನಕರ ಶೆಟ್ಟಿ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ ನಾಗಭೂಷಣ್ ಉಡುವ, ತಾಲೂಕು ಆರೋಗ್ಯ ಅಧಿಕಾರಿ ವಾಸುದೇವ ಉಪಾಧ್ಯಾಯ, ಉಡುಪಿ ನಗರ ಸಭೆ ಆಯುಕ್ತರಾದ ಉದಯ ಶೆಟ್ಟಿ ಬೆಂಗಳೂರು, ಬಂಟರ ಸಂಘದ ಅಧ್ಯಕ್ಷರಾದ ಉಪೇಂದ್ರ ಶೆಟ್ಟಿ, ಬ್ರಹ್ಮಾವರ ಬಂಟರ ಸಂಘದ ಅಧ್ಯಕ್ಷರಾದ ಮೈರ್ಮಾಡಿಸುಧಾಕರ ಶೆಟ್ಟಿ, ಉದ್ಯಮಿಗಳಾದ ಅನಂದ್ ಸಿ ಕುಂದರ್, ಸುಧೀರ್ ಪಂಡಿತ್, ನೆಪ್ರೋಲಾಜಿಸ್ಟ್ ಡಾ. ಸಂತೋಷ್ ಹೈ, ಪ್ರಣವ ಅಸ್ಪತ್ರೆಯ ಡಾ ಪ್ರವೀಣ್ ಕುಮಾರ್ ಮುಖ್ಯ ಅತಿಗಳಾಗಿ ಭಾಗವಹಿಸಲಿದ್ದಾರೆ. ಎಂದು ಟ್ರಸ್ಟನ ಅಧ್ಯಕ್ಷರಾದ ಕೆ ನಿರಂಜನ್ ಶೆಟ್ಟಿ ತಿಳಿಸಿದರು
ಪತ್ರಿಕಾಗೋಷ್ಠಿಯಲ್ಲಿ ಬಾಲಕೃಷ್ಣ ಹೆಗ್ಡೆ, ನವನೀತ ಶೆಟ್ಟಿ, ಕಮಲಾಕ್ಷ ಹೆಬ್ಬಾರ್, ಹರೀಶ್ ಶೆಟ್ಟಿ ಉಪಸ್ಥಿತರಿದ್ದರು.

Leave a Reply