ಪಡುಬಿದ್ರಿ: ವ್ಯಕ್ತಿ ನಾಪತ್ತೆ – Vishwanews24

Featured, ಉಡುಪಿ

ಪಡುಬಿದ್ರಿ: ವ್ಯಕ್ತಿ ನಾಪತ್ತೆ

ಪಡುಬಿದ್ರಿ : ಕಾಪು ತಾಲೂಕಿನ ಬಡಾ ಗ್ರಾಮದ ಉಚ್ಚಿಲದಲ್ಲಿ ನೆಲೆಸಿರುವ ಜಾರ್ಖಂಡ್ ರಾಜ್ಯದ ನೀರಜ್ ಕುಮಾರ್ ರಜಕ್(37) ಎಂಬವರು ನಾಪತ್ತೆಯಾಗಿದ್ದಾರೆ.

ಜಾರ್ಖಂಡ್ ರಾಜ್ಯದ ಲೋಹಾರ್ ದಾಗ್ ಜಿಲ್ಲೆಯ ಆಕಾಶಿ ಭಾಂದ್ರಾ ಎಂಬಲ್ಲಿನ ಫುಲ್ ದೇವ್ ಓರಾನ್ ಎಂಬವರು ಉಚ್ಚಿಲದ ನರ್ಸರಿಯಲ್ಲಿನ ಕೆಲಸಕ್ಕಾಗಿ ತಮ್ಮ ಪರಿಚಯದ ನೀರಜ್ ಕುಮಾರ್ ರಜಕ್ ಅವರನ್ನು ಕರೆಸಿಕೊಂಡಿದ್ದರು.

ಆಮ್ ಆದ್ಮಿ ಪಕ್ಷದಿಂದ ನಮಗೆ ತೊಂದರೆಯಾಗುತ್ತಿದೆ , ಅವರು ಬಿಜೆಪಿಗೆ ಅನುಕೂಲವಾಗುವಂತೆ ಪ್ರಚಾರ ಮಾಡುತ್ತಿದ್ದಾರೆ : ದಿನೇಶ್ ಗುಂಡೂರಾವ್ ಕಿಡಿ – Vishwanews24

ಡಿ.6 ರಂದು ಬೆಳಿಗ್ಗೆ ನೀರಜ್ ಕುಮಾರ್ ರಜಕ್ ರೂಮಿನಿಂದ ಹೊರಗಡೆ ಹೋದವರು ವಾಪಾಸ್ಸು ಬಂದು ಮಾನಸಿಕನಂತೆ ವರ್ತಿಸುತ್ತಿದ್ದರು. ಬಳಿಕ ಹಾಡಿ ಕಡೆಗೆ ಹೋಗಿ ಅಲ್ಲಯೇ ಮೊಬೈಲನ್ನು ಬಿಸಾಡಿ ಓಡಿ ಹೋದವರು ವಾಪಾಸ್ಸು ರೂಮಿಗೆ ಬಾರದೇ ಕಾಣೆಯಾಗಿದ್ದಾರೆ.

ಈ ಬಗ್ಗೆ ಫುಲ್‍ದೇವ್ ಓರಾನ್ ಎಂಬವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಧಾನಸಭೆ ಚುನಾವಣೆ ಫಲಿತಾಂಶ : ಗುಜರಾತ್ ನಲ್ಲಿ ಬಿಜೆಪಿ, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಮುನ್ನಡೆ – Vishwanews24

Leave a Reply