ಪತ್ನಿಯ ವ್ಯಾಸಂಗಕ್ಕೆ ಸಹಾಯ ಮಾಡಿದ ಗಂಡ ; ಸರ್ಕಾರಿ ಕೆಲಸ ಸಿಕ್ಕಿದ ಮೇಲೆ ಪತ್ನಿ ಎಸ್ಕೇಪ್ – vishwanews24

Featured, ರಾಷ್ಟ್ರ ನ್ಯೂಸ್

ಪತ್ನಿಯ ವ್ಯಾಸಂಗಕ್ಕೆ ಸಹಾಯ ಮಾಡಿದ ಗಂಡ ; ಸರ್ಕಾರಿ ಕೆಲಸ ಸಿಕ್ಕಿದ ಮೇಲೆ ಪತ್ನಿ ಎಸ್ಕೇಪ್

ಉತ್ತರಪ್ರದೇಶ: ಪತ್ನಿ ವ್ಯಾಸಂಗಕ್ಕೆ ಸಹಾಯ ಮಾಡಿದ್ದು, ಜೀವನದಲ್ಲಿ ಮುಂದೆ ಬಂದ ನಂತರ ಆಕೆ ತನ್ನನ್ನು ತೊರೆದಿದ್ದಾಳೆ ಎಂದು ವ್ಯಕ್ತಿಯೊಬ್ಬ ಆರೋಪಿಸಿದ್ದರು. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

ಹೆಂಡತಿಯೊಬ್ಬಳು ಸರ್ಕಾರಿ ನೌಕರಿ ಸಿಕ್ಕಿದ ಬೆನ್ನಲ್ಲೇ ತನ್ನ ಗಂಡನ ಬಿಟ್ಟು ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ.

ಉಡುಪಿ : ಇನ್ನೂ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡದ ಜಿಲ್ಲಾ ಉಸ್ತುವಾರಿ ಸಚಿವೆ  – vishwanews24

ವಿಶ್ವಕರ್ಮ ಎಂಬ ವ್ಯಕ್ತಿ 2 ವರ್ಷದ ಹಿಂದಷ್ಟೇ ರಿಚಾಳನ್ನು ಮದುವೆಯಾಗಿದ್ದ. ಸರ್ಕಾರಿ ನೌಕರಿ ಆಸೆ ಹೊಂದಿದ್ದ ಪತ್ನಿಗೆ ಓದಿನಲ್ಲೂ ಸಹಾಯ ಮಾಡಿದ್ದ. ಆಕೆಗೆ ಈಗ ಸರ್ಕಾರಿ ಕೆಲಸ ಸಿಕ್ತಾಯಿದ್ದಂತೆ ಗಂಡನನ್ನು ಬಿಟ್ಟು ಪರಾರಿಯಾಗಿದ್ದಾಳೆ. ಮನನೊಂದಿರುವ ಪತಿ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾನೆ.

ಪತ್ನಿ ಇನ್ನು ಮುಂದೆ ತನ್ನೊಂದಿಗೆ ಮಾತನಾಡುತ್ತಿಲ್ಲ ಮತ್ತು ತನ್ನ ಕರೆಗಳನ್ನು ಸಹ ತೆಗೆದುಕೊಳ್ಳುತ್ತಿಲ್ಲ ಎಂದು ಅವರು ಹೇಳಿದ್ದಾರೆ. ಕಾಲೇಜಿಗೆ ಭೇಟಿ ನೀಡುವ ನೆಪದಲ್ಲಿ ಮನೆಯಿಂದ ಹೊರಟರು. ಆದರೆ, ಆ ಬಳಿಕ ಆಕೆ ಹಿಂತಿರುಗಿರಲಿಲ್ಲ ಎಂದು ಗೋಳಿಟ್ಟಿದ್ದಾನೆ.

ಅಂದ್ಹಾಗೆ ಗಂಡನ ಬಿಟ್ಟು ಹೋದ ಮಹಿಳೆ ಲೆಕ್ಕಪತ್ರ ಪರಿಶೀಲನಾ ಅಧಿಕಾರಿಯಾಗಿ ನೇಮಕಗೊಂಡಿದ್ದಾಳೆ. 2022 ಫೆಬ್ರವರಿ 6ರಲ್ಲಿ ಇಬ್ಬರು ನ್ಯಾಯಾಲಯದಲ್ಲಿ ಮದುವೆ ಆಗಿದ್ದರು. ಪತ್ನಿ ಮಾಡಿದ ವಂಚನೆಯಿಂದ ಪತಿ ಕಂಗಾಲ್ ಆಗಿದ್ದಾರೆ.

ಪ್ರೀತಿಗೆ ವಿರೋಧಿಸಿದ ತಂದೆ-ತಾಯಿ ಹಾಗೂ ಸಹೋದರನನ್ನು ಬರ್ಬರವಾಗಿ ಕೊಂದ 15 ರ ಬಾಲಕ – vishwanews24

Leave a Reply