ರಾಜ್ಯ ನ್ಯೂಸ್

ಪ್ರಧಾನಿ ಮೋದಿ, ಅಮಿತ್ ಶಾ ಅವರಿಗೂ ‘ವಂದೇ ಮಾತರಂ’ ಪೂರ್ತಿಯಾಗಿ ಹಾಡಲು ಬರುವುದಿಲ್ಲ : ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ – vishwanews24

ಪ್ರಧಾನಿ ಮೋದಿ, ಅಮಿತ್ ಶಾ ಅವರಿಗೂ ‘ವಂದೇ ಮಾತರಂ’ ಪೂರ್ತಿಯಾಗಿ ಹಾಡಲು ಬರುವುದಿಲ್ಲ : ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಕಲಬುರಗಿ: ವಂದೇ ಮಾತರಂ ಗೀತೆಯನ್ನು ಸಂಪೂರ್ಣವಾಗಿ ಹಾಡಬೇಕು ಎಂದು ಪಟ್ಟು ಹಿಡಿದು ವೇದಿಕೆ ತೊರೆದ ಬಿಜೆಪಿ ನಾಯಕರ ನಡೆಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಕಟುವಾಗಿ ತಿರುಗೇಟು ನೀಡಿದ್ದಾರೆ.

“ನಮಗೆ ಸಾಮಾನ್ಯವಾಗಿ ಎರಡು ಚರಣಗಳು ಮಾತ್ರ ಗೊತ್ತು. ಬಿಜೆಪಿ ಶಾಸಕರು ಇದನ್ನೇ ಅವಮಾನ ಎಂದು ಹೇಳಿ ವೇದಿಕೆ ಬಿಟ್ಟು ಹೋಗಿದ್ದಾರೆ. ಆರ್. ಅಶೋಕ್, ಬಿ.ವೈ. ವಿಜಯೇಂದ್ರ ಅವರಿಗೆ ನಾನೇ ವೇದಿಕೆ ಸಿದ್ಧಪಡಿಸಿಕೊಡುತ್ತೇನೆ, ಟೆಲಿಪ್ರಾಂಪ್ಟರ್ ಸಹಾಯವಿಲ್ಲದೆ ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಹಾಡಿ ತೋರಿಸಲಿ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೂ ವಂದೇ ಮಾತರಂ ಪೂರ್ತಿಯಾಗಿ ಹಾಡಲು ಬರುವುದಿಲ್ಲ. ಬಿಜೆಪಿ ನಾಯಕರು ನಿನ್ನೆಯಿಂದ ಪ್ರಾಕ್ಟೀಸ್ ಮಾಡುತ್ತಿರಬಹುದು, ಅಭ್ಯಾಸ ಮಾಡಿಕೊಂಡಾದರೂ ಬಂದು ಹಾಡಲಿ” ಎಂದು ವ್ಯಂಗ್ಯವಾಡಿದರು.

ಜನರ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸರ್ಕಾರ ಮೂರು ದಿನಗಳ ಕಾಲ ವಿಶೇಷ ಅಧಿವೇಶನ ಕರೆಯುತ್ತಿದೆ ಎಂದ ಸಚಿವರು, ವಿಪಕ್ಷಗಳ ಜವಾಬ್ದಾರಿಯನ್ನು ನೆನಪಿಸಿದರು.

ಕಳೆದ ಬಾರಿ ವಿಪಕ್ಷಗಳು ಅಧಿವೇಶನವನ್ನು ಗೊಂದಲಗೊಳಿಸಿ ಸಮಯ ಹಾಳು ಮಾಡಿದ್ದವು ಎಂದು ಆರೋಪಿಸಿದ ಅವರು, ಈ ಬಾರಿ ಕೆಪಿಎಸ್‌ಸಿ ವಿವಾದ ಸೇರಿದಂತೆ ಯಾವುದೇ ವಿಷಯದ ಕುರಿತು ಚರ್ಚೆಗೆ ಸರ್ಕಾರ ಸಂಪೂರ್ಣ ಸಿದ್ಧವಾಗಿದೆ. ಬಿಜೆಪಿ ನಾಯಕರು ಧೈರ್ಯವಿದ್ದರೆ ಕಲಾಪಕ್ಕೆ ಬಂದು ಮುಖಾಮುಖಿ ಚರ್ಚೆಯಲ್ಲಿ ಪಾಲ್ಗೊಳ್ಳಲಿ ಎಂದು ಬಹಿರಂಗ ಸವಾಲು ಎಸೆದರು.

 

Vishwa News 24

Recent Posts

ತುಳು ಭಾಷೆಗೆ ಈ ಬಾರಿ ಮಾನ್ಯತೆ ಸಿಗುವುದು ಖಂಡಿತ : ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ – vishwanews24

ತುಳುವಿಗೆ ಶಾಸ್ತ್ರೀಯ ಸ್ಥಾನಮಾನ ಸಿಗುತ್ತದೆ ಎನ್ನುವ ವಿಶ್ವಾಸವಿದೆ : ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉಡುಪಿ : ಮಂಗಳೂರಿನಲ್ಲಿ…

1 hour ago

ಕಾರ್ಕಳ : ಕಂಬಳ ಓಟಕ್ಕೆ ಆಯ್ಕೆಗೊಂಡವರ ತರಬೇತಿ ಶಿಬಿರಕ್ಕೆ ಚಾಲನೆ – vishwanews24

ಕಾರ್ಕಳ : ಕಂಬಳ ಓಟಕ್ಕೆ ಆಯ್ಕೆಗೊಂಡವರ ತರಬೇತಿ ಶಿಬಿರಕ್ಕೆ ಚಾಲನೆ ಕಾರ್ಕಳ : ಕಾರ್ಕಳ ಮಿಯ್ಯಾರು ಲವ ಕುಶ ಜೋಡುಕೆರೆ…

1 hour ago

ಹಾಸನ: ಲಾಡ್ಜ್‌ನಲ್ಲಿ ಯುವತಿ ಅನುಮಾನಾಸ್ಪದ ಸಾವು – vishwanews24

ಹಾಸನ: ಲಾಡ್ಜ್‌ನಲ್ಲಿ ಯುವತಿ ಅನುಮಾನಾಸ್ಪದ ಸಾವು ಹಾಸನ: ಸಕಲೇಶಪುರ ತಾಲೂಕಿನ ಹೆತ್ತೂರು ಹೋಬಳಿ ವಳಲಹಳ್ಳಿ ಕೂಡಿಗೆ ಸಮೀಪದ ಲಾಡ್ಜ್‌ನಲ್ಲಿ ಯುವತಿಯೊಬ್ಬಳು ಅನುಮಾನಾಸ್ಪದವಾಗಿ…

1 hour ago

ಮಂಗಳೂರು : ಬಿಜೆಪಿಗೆ ಚುನಾವಣೆಯೇ ಅಜೆಂಡಾ ಆಗಿದ್ದರೆ, ಕಾಂಗ್ರೆಸ್‌ಗೆ ಅಭಿವೃದ್ದಿಯೇ ಅಜೆಂಡಾ : ರಮಾನಾಥ ರೈ – vishwanews24

ಮಂಗಳೂರು : ಬಿಜೆಪಿಗೆ ಚುನಾವಣೆಯೇ ಅಜೆಂಡಾ ಆಗಿದ್ದರೆ, ಕಾಂಗ್ರೆಸ್‌ಗೆ ಅಭಿವೃದ್ದಿಯೇ ಅಜೆಂಡಾ : ರಮಾನಾಥ ರೈ ಮಂಗಳೂರು : ಬಿಜೆಪಿಗೆ…

1 hour ago

ಮಂಗಳೂರು : ಅಪಘಾತದಲ್ಲಿ ಯುವಕನ ಮೆದುಳು ನಿಷ್ಕ್ರಿಯ ; ಅಂಗಾಂಗ ದಾನಕ್ಕೆ ಕುಟುಂಬಸ್ಥರ ನಿರ್ಧಾರ – vishwanews24

ಮಂಗಳೂರು : ಅಪಘಾತದಲ್ಲಿ ಯುವಕನ ಮೆದುಳು ನಿಷ್ಕ್ರಿಯ ; ಅಂಗಾಂಗ ದಾನಕ್ಕೆ ಕುಟುಂಬಸ್ಥರ ನಿರ್ಧಾರ ಮಂಗಳೂರು : ಗಣೇಶ ಚತುರ್ಥಿದಂದು…

2 hours ago

ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ  : ಕರಾವಳಿ ಅಭಿವೃದ್ಧಿಗೆ  ಹೊಸ ಬಲ ನೀಡಲಿದೆ : ಪ್ರಸಾದ್ ರಾಜ್ ಕಾಂಚನ್ – vishwanews24

ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ  : ಕರಾವಳಿ ಅಭಿವೃದ್ಧಿಗೆ  ಹೊಸ ಬಲ ನೀಡಲಿದೆ : ಪ್ರಸಾದ್ ರಾಜ್ ಕಾಂಚನ್ ಉಡುಪಿ:…

3 hours ago