ಬಂಟ್ವಾಳ: ದರೋಡೆ ಪ್ರಕರಣ; ಮನೆಯವರ ಮೊಬೈಲ್‌ಗಳು ಪತ್ತೆ – vishwanews24

Featured, ದಕ್ಷಿಣ ಕನ್ನಡ

ಬಂಟ್ವಾಳ: ದರೋಡೆ ಪ್ರಕರಣ; ಮನೆಯವರ ಮೊಬೈಲ್‌ಗಳು ಪತ್ತೆ

ಬಂಟ್ವಾಳ: ಬೋಳಂತೂರು ಸಮೀಪದ ನಾರ್ಶ ನಿವಾಸಿ, ಉದ್ಯಮಿ ಸುಲೈಮಾನ್ ಹಾಜಿ ಅವರ ಮನೆಯಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳ ಸೋಗಿನಲ್ಲಿ ದರೋಡೆ ನಡೆಸಿದ ಸಂದರ್ಭ ಮನೆಯರಿಂದ ಕಸಿದುಕೊಂಡ ಮೊಬೈಲ್ ಗಳು ಮನೆಯಲ್ಲೇ ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

ಪೊಲೀಸ್ ಅಧಿಕಾರಿಗಳ ತಂಡ ಮಾಹಿತಿಗಳನ್ನು ಪಡೆದುಕೊಂಡು ತನಿಖೆ ಮುಂದುವರಿಸಿದೆ.

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ: ಬೈಂದೂರು ತಾಲೂಕು ಅಧ್ಯಕ್ಷರಾಗಿ ತಬ್ರೇಝ್, ಕಾರ್ಯದರ್ಶಿಯಾಗಿ ತುಫೈಲ್ ಆಯ್ಕೆ – vishwanews24

ದರೋಡೆಕೋರರು ಮನೆಯನ್ನು ಪ್ರವೇಶಿಸುತ್ತಿದ್ದಂತೆ ಮನೆಯವರಲ್ಲಿದ್ದ 5 ಮೊಬೈಲ್ ಅನ್ನು ತಮ್ಮ ವಶಕ್ಕೆ ಪಡೆದು ಕೊಂಡಿದ್ದರು. ಅವರು ಹಿಂದಿರುಗುವ ಸಂದರ್ಭ ಇದನ್ನು ಅವರ ಜತೆಯಲ್ಲೇ ತೆಗೆದುಕೊಂಡು ಹೋಗಿದ್ದರೆಂದು ಹೇಳಲಾಗಿತ್ತು.

ಆದರೆ ಮೊಬೈಲ್ ಗಳಿಂದ ಸಿಮ್ ತೆಗೆದು ಮನೆಯ ಮೂರನೇ ಮಹಡಿಯಲ್ಲಿ ಎಸೆದು ಹೋಗಿರುವುದು ಬೆಳಕಿಗೆ ಬಂದಿದೆ. ಸಿಮ್ ಗಳನ್ನು ತುಂಡರಿಸಿ ಅಲ್ಲೇ ಎಸೆದಿದ್ದಾರೆ ಎಂದು ಹೇಳಲಾಗಿದೆ.

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಪಿಕ್ ಪಾಕೆಟ್ ಪ್ರಕರಣ ; ಪ್ರವಾಸಿಗರೇ ಟಾರ್ಗೆಟ್ – vishwanews24

Leave a Reply