ಬೆಂಗಳೂರು : ಗಾಳಿಪಟ ಬಿಡಲು ಹೋಗಿ ಹೈ ಟೆನ್ಶನ್ ವೈರ್ ತಗುಲಿ ಬಾಲಕ ಮೃತ್ಯು – Vishwanews24
ಬೆಂಗಳೂರು : ಗಾಳಿಪಟ ಬಿಡಲು ಹೋಗಿ ಹೈ ಟೆನ್ಶನ್ ವೈರ್ ತಗುಲಿ ಬಾಲಕ ಮೃತ್ಯು
ಬೆಂಗಳೂರು: ಗಾಳಿಪಟ ಹಾರಿಸುವ ವೇಳೆ ಹೈ ಟೆನ್ಶನ್ ವೈರ್ ತಗುಲಿ 11 ವರ್ಷದ ಬಾಲಕನೋರ್ವ ಮೃತಪಟ್ಟ ಘಟನೆ ಆರ್.ಟಿ.ನಗರದ ಚಾಮುಂಡಿ ನಗರದ ಚ್ಯುಯಿಂಗ್ ಗಮ್ ಫ್ಯಾಕ್ಟರಿ ಬಳಿ ನಡೆದಿದೆ.
ಮೃತ ಬಾಲಕನನ್ನು ಇಲ್ಲಿನ ನಿವಾಸಿ ಅಬೂಬಕರ್(11) ಎಂದು ಗುರುತಿಸಲಾಗಿದೆ.
ಉಡುಪಿ: ಕೆಪಿಸಿಸಿ ಸದಸ್ಯತ್ವಕ್ಕೆ ಪ್ರತಾಪ್ ಚಂದ್ರ ಶೆಟ್ಟಿ ರಾಜೀನಾಮೆ ?- Vishwanews24
ಸೋಮವಾರ ಮನೆಯ ಮಹಡಿ ಮೇಲೆ ಗಾಳಿಪಟ ಹಾರಿಸುತ್ತಿದ್ದ ಬಾಲಕನಿಗೆ ಅಲ್ಲೇ ಹಾದು ಹೋಗಿರುವ ಹೈ ಟೆನ್ಶನ್ ವೈರ್ ಆಕಸ್ಮಿಕವಾಗಿ ತಗುಲಿದೆ ಎನ್ನಲಾಗಿದೆ. ಇದರಿಂದ ತೀವ್ರ ಸುಟ್ಟ ಗಾಯಗಳಾಗಿದ್ದ ಅಬೂಬಕರ್ ಅನ್ನು ವಿಕ್ಟೋರಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆತ ಮಂಗಳವಾರ ರಾತ್ರಿ ಕೊನೆಯುಸಿರೆಳೆದಿರುವುದಾಗಿ ತಿಳಿದುಬಂದಿದೆ.
Join our Whatsapp group by clicking the below link 👇👇
