ಮಂಗಳೂರು: ಭಾರಿ ಯಶಸ್ಸು ಕಾಣುತ್ತಿರುವ ಕಾಂತಾರ ಚಿತ್ರವನ್ನು ತೆರಿಗೆ ವಿನಾಯಿತಿ ಮಾಡುವಂತೆ ದಕ್ಷಿಣ ಕನ್ನಡದ ಕಾಂಗ್ರೇಸ್ ನಾಯಕ ಮಿಥುನ್ ರೈ ಮುಖ್ಯಮಂತ್ರಿ ಬೊಮ್ಮಾಯಿಗೆ ಮನವಿ ಮಾಡಿದ್ದಾರೆ.
ತನ್ನ ಫೇಸ್ಬುಕಲ್ಲಿ ಈ ಕುರಿತು ಬರೆದುಕೊಂಡಿರುವ ಮಿಥುನ್ ರೈ , ಇಡೀ ಜಗತ್ತಿನಲ್ಲಿ “ದೈವಾರಾಧನೆ”ಗೆ ಇವತ್ತು ಒಂದು ಪ್ರಮುಖವಾದ ಪ್ರಾಶ್ಯಸ್ತತೆ ಇದೆ, ಅದು ಹುಟ್ಟಿಕೊಂಡಿದ್ದು ನಮ್ಮ ತುಳುನಾಡಿನ ಮಣ್ಣಿನಲ್ಲಿ . ದೈವಾರಾಧನೆಗೆ ಜನರಿಗೆ ಇರುವ ಭಯ ಭಕ್ತಿ ಇವತ್ತು ಮಾಸುವಂತಹ ಸಂದಿಗ್ನ ಪರಿಸ್ಥಿತಿಗಳಲ್ಲಿ , ಒಂದು ಸಿನಿಮಾದ ಮುಖಾಂತರ ದೈವಾರಾಧನೆಯ ವಿಶಿಷ್ಟತೆ ಹಾಗೂ ಪ್ರಾಮುಖ್ಯತೆಯ ಬಗ್ಗೆ ಜನರ ಮನಮುಟ್ಟಿಸುವ ಪ್ರಯತ್ನ ಇವತ್ತು “ಕಾಂತಾರ” ಚಿತ್ರದ ಮೂಲಕ ಫಲಿಸಿದೆ .
“#kanthara” ಚಲನಚಿತ್ರ … ಮಾತಿನಲ್ಲಿ ಎಷ್ಟು ಹೇಳಿದರೂ ಸಾಲದು … ಇದರ ಅಧ್ಬುತ ಪರಿಕಲ್ಪನೆಗ ಬಗ್ಗೆ ಶಬ್ದಗಳೇ ಬಾರದು ! ಸನ್ಮಾನ ಮುಖ್ಯಮಂತ್ರಿಗಳಲ್ಲಿ ವಿನಮ್ರತೆಯಿಂದ ಮನವಿ ಮಾಡುತ್ತಾ ಇದ್ದೇನೆ, “ಕಾಂತಾರ” ಚಲನಚಿತ್ರ ಪ್ರತಿ ಮನೆಮನೆಗೆ ಮುಟ್ಟಬೇಕು, ಈ ಚಿತ್ರಕ್ಕೆ ತೆರಿಗೆ ಮುಕ್ತ ಮಾಡಬೇಕು. ತುಳುನಾಡಿನ ದೈವಾರಾಧನೆಯ ಮಹತ್ವ ಸಮಸ್ತ ಕರ್ನಾಟಕದಲ್ಲಿ ತಿಳಿಯಬೇಕೆಂದು ಸಮಸ್ತ ತುಳುವೆರ ಕೋರಿಕೆ.
ತಳಮಟ್ಟದ ಬಿಜೆಪಿ ಕಾರ್ಯಕರ್ತೆ ಶ್ಯಾಮಲಾ ಕುಂದರ್ಗೆ ಈ ಬಾರಿ ಎಂಎಲ್ಎ ಟಿಕೆಟ್ ಫಿಕ್ಸ್ ಆಂತರಿಕ ಸಮೀಕ್ಷೆ vishwanews24
ತುಳುನಾಡಿನ ದೈವಾರಾಧನೆಯ ವೈಶಿಷ್ಟ್ಯತೆಯನ್ನು ಬಿಂಬಿಸುವ ಜತೆಗೆ ಆರಾಧನೆಯ ಮಹತ್ವವನ್ನು ಸಾರಿ ಹೇಳಿದ ‘ಕಾಂತಾರ’ ಸಿನಿಮಾ ನಿಜಕ್ಕೂ ಅದ್ಭುತವಾಗಿ ಮೂಡಿಬಂದಿದೆ. ದೈವಾರಾಧನೆ ಮತ್ತು ನಂಬಿಕೆಯನ್ನು ಎಳೆಎಳೆಯಾಗಿ ಪ್ರಸ್ತುಪಡಿಸುವ ಮೂಲಕ ಯುವಸಮಾಜದಲ್ಲಿ ಮತ್ತಷ್ಟು ನಂಬಿಕೆ ಜಾಗೃತಿಗೊಳಿಸಿದೆ.
ಈ ಸಿನಿಮಾವನ್ನು Chief Minister of Karnataka ವೀಕ್ಷಣೆ ಮಾಡಬೇಕು ಮತ್ತು ಈ ಸಿನಿಮಾಕ್ಕೆ ತೆರಿಗೆ ವಿನಾಯಿತಿಯನ್ನು ನೀಡಬೇಕು ಎಂಬುವುದು ಸರ್ವ ತುಳುನಾಡಿಗರ ಪರವಾಗಿ ಆಗ್ರಹ. Rishab Shetty Films ಹಾಗೂ ಅವರ ತಂಡ ಕರಾವಳಿ ಭಾಗದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಪರಂಪರೆಯ ಕುರಿತು ಸಮಗ್ರವಾಗಿ ವೇದಿಕೆ ತರುವಲ್ಲಿ ಯಶಸ್ವಿಯಾಗಿ ದುಡಿದಿರುವುದು ಶ್ಲಾಘನೀಯವಾದದ್ದು ಈ ಒಂದು ಚಲನಚಿತ್ರವನ್ನು ಮನೋರಂಜನ ದೃಷ್ಟಿಯಲ್ಲಿ ನೋಡದೆ ಸಮಾಜದ ಎಲ್ಲಾ ಜನರು ಇದು ಇತಿಹಾಸದ ಕುರಿತು ಒಂದು ಅವಲೋಕನ ಎಂಬಂತೆ ಎಲ್ಲರೂ ವೀಕ್ಷಣೆ ಮಾಡಬೇಕು ಎನ್ನುವುದು ನನ್ನ ಕೋರಿಕೆ.
ನಿಮ್ಮ ಈ ಚಲನಚಿತ್ರ ಇತಿಹಾಸದ ಮೈಲುಗಲ್ಲನ್ನು ನಿರ್ಮಾಣ ಮಾಡುವಂತಾಗಲಿ ಮುಂದಿನ ಜನಾಂಗಕ್ಕೆ ಉತ್ತಮ ಸಂದೇಶವನ್ನು ತಲುಪಿಸುವಂತಾಗಲಿ ಎಂದು ಹಾರೈಸುತ್ತೇನೆ ಎಂದು ಮಿಥುನ್ ರೈ ತನ್ನ ಫೇಸ್ಬುಕಲ್ಲಿ ಬರೆದುಕೊಂಡಿದ್ದಾರೆ. ವಿಜಯ ಕಿರಗಂದೂರು ರವರ ಹೊಂಬಾಳೆ ಬ್ಯಾನರಿನಡಿ ನಿರ್ಮಾಣವಾದ ರಿಷಭ್ ಶೆಟ್ಟಿ ನಟನೆಯ ಕಾಂತಾರ ಚಿತ್ರ ಭಾರಿ ಯಶಸ್ಸು ಕಾಣುತ್ತಿದೆ.
ಉಡುಪಿ : ಆ. 20 ರಂದು ನೇರ ಸಂದರ್ಶನ ಉಡುಪಿ : ನಗರದ ಅಂಬಲಪಾಡಿ ಕರಾವಳಿ ಬೈಪಾಸ್ ಬಳಿಯ ರೀಗಲ್…
ಉಡುಪಿ: ಗೃಹ ಜ್ಯೋತಿ ಫಲಾನುಭವಿಗಳು ಮರುಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಿ: ರಮೇಶ್ ಕಾಂಚನ್ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮನೆಗಳ ಮರುಪರಿಶೀಲನೆಗೆ…
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಆಗ್ರಹ: ಆ.22ರಂದು ಉಡುಪಿಯಲ್ಲಿ ಸಭೆ ಉಡುಪಿ: ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ…
ಉಡುಪಿ: ಗಣಪತಿ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಹೆಚ್ಚುವರಿ ಸಂಚಾರ ಉಡುಪಿ: ಗಣಪತಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಬೇಡಿಕೆಗೆ ಅನುಸಾರ…
ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ ಮೃತದೇಹ ಪತ್ತೆ ಉಳ್ಳಾಲ : ಮೀನುಗಾರಿಕೆಗೆ ತೆರಳಿದ್ದ ವೇಳೆ ದೈತ್ಯ ಗಾತ್ರದ ಅಲೆಗೆ…
ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ ಬೆಂಗಳೂರು : ನಟಿ ಅನುಪಮಾ ಗೌಡ ಅವರು ನಟನೆಯ ಮೂಲಕ…