ಮಂಗಳೂರು: ಮಂಗಳೂರು ಜಂಕ್ಷನ್ ಮತ್ತು ಮಂಗಳೂರು ಸೆಂಟ್ರಲ್ ಗೆ ಬರುವ ಕೆಲವು ರೈಲುಗಳ ಆಗಮನ ಮತ್ತು ನಿರ್ಗಮನ ವೇಳಾಪಟ್ಟಿ ಪರಿಷ್ಕರಿಸಲಾಗಿದೆ.
* ಮಂಗಳೂರು ಜಂಕ್ಷನ್ : ನಂ. 06539 ಯಶವಂತಪುರ- ಮಂಗಳೂರು ಜಂಕ್ಷನ್ ಸಾಪ್ತಾಹಿಕ (ಶನಿವಾರ) ರೈಲು ಸಂಜೆ 5ರ ಬದಲು 4.40ಕ್ಕೆ ಬರಲಿದ್ದು, ಇದು ಅ.2ರಿಂದ ಅನ್ವಯವಾಗಲಿದೆ.
ಸೋಮವಾರ, ಬುಧವಾರ ಮತ್ತು ಶುಕ್ರವಾರ ಸಂಚರಿಸುವ ನಂ.06575 ಯಶವಂತಪುರ- ಮಂಗಳೂರು ಜಂಕ್ಷನ್ ರೈಲು ಸಂಜೆ 5ರ ಬದಲಾಗಿ 6.40ಕ್ಕೆ ಆಗಮಿಸಲಿದೆ. ಈ ಟೈಮಿಂಗ್ ಅ.3ರಿಂದ ಜಾರಿಗೆ ಬರಲಿದೆ.
ನಂ.06211 ಯಶವಂತಪುರ- ಕಾರವಾರ (ಸೋಮವಾರ, ಬುಧವಾರ, ಶುಕ್ರವಾರ) ಸಂಜೆ 4.40ಕ್ಕೆ ಆಗಮಿಸಿ, 5 ಗಂಟೆಗೆ ನಿರ್ಗಮಿಸಲಿದ್ದು, ಅ.1ರಿಂದ ಅನ್ವಯವಾಗುವುದು. ನಂ. 06515 ಬೆಂಗಳೂರು- ಕಣ್ಣೂರು ರೈಲು ಬೆಳಗ್ಗೆ 7.28ಕ್ಕೆ ಬಂದು, 7.30ಕ್ಕೆ ಹೊರಡಲಿದ್ದು, ಅ.1ರಿಂದ ಜಾರಿಗೆ ಬರಲಿದೆ.
ಕಾರ್ಕಳ : ಜೈ ತುಳುನಾಡ್ ಸಂಘಟನೆ ವತಿಯಿಂದ ತುಳು ಲಿಪಿ ನಾಮಫಲಕ ಅಳವಡಿಸುವಂತೆ ಮನವಿ -Vishwanews24
ನಂ. 06516 ಕಣ್ಣೂರು- ಬೆಂಗಳೂರು ರೈಲು ರಾತ್ರಿ 8.25ಕ್ಕೆ ಆಗಮಿಸಿ, 8.27ಕ್ಕೆ ನಿರ್ಗಮಿಸಲಿದ್ದು, ಅ.1ರಿಂದ ಜಾರಿಗೆ ಬರುವುದು.
* ಮಂಗಳೂರು ಸೆಂಟ್ರಲ್: ಮಂಗಳವಾರ, ಗುರುವಾರ, ಭಾನುವಾರ ಸಂಚರಿಸುವ ನಂ.06531 ಬೆಂಗಳೂರು- ಮಂಗಳೂರು ಸೆಂಟ್ರಲ್ ರೈಲು ಬೆಳಗ್ಗೆ 9.05ಕ್ಕೆ ಬರಲಿದೆ.
ನಂ. 06347 ತಿರುವನಂತಪುರ- ಮಂಗಳೂರು ಸೆಂಟ್ರಲ್ ರೈಲು 11.30ಕ್ಕೆ, ನಂ.06323 ಕೊಯಮತ್ತೂರು-ಮಂಗಳೂರು ಸೆಂಟ್ರಲ್ ರೈಲು ಸಂಜೆ 6.40ಕ್ಕೆ ಮತ್ತು ನಂ.06516 ಕಣ್ಣೂರು-ಬೆಂಗಳೂರು ರೈಲು ರಾತ್ರಿ 7.50ಕ್ಕೆ ಬಂದು 8.10ಕ್ಕೆ ಹೊರಡಲಿದೆ. ಈ ಹೊಸ ವೇಳಾಪಟ್ಟಿ ಅ.1ರಿಂದ ಅನ್ವಯವಾಗಲಿದೆ.
ಪ್ರಯಾಣಿಕರು ರೈಲ್ವೆ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ಸಾರ್ವಜನಿಕ ಸಂಪರ್ಕಾಧಿಕಾರಿ ಎಂ.ಕೆ. ಗೋಪಿನಾಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೇತುವೆ ಮೇಲೆ 3 ವರ್ಷದ ಮಗು ಬಿಟ್ಟು ನದಿಗೆ ಹಾರಿದ ದಂಪತಿ ಅಮರಾವತಿ: ಇಲ್ಲಿನ ಪಶ್ಚಿಮ ಗೋದಾವರಿ ಜಿಲ್ಲೆಯ ಚಿಂಚಿನಾಡ…
ಕರಾವಳಿಯಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಸಮಿತಿ ರಚನೆ : ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಭರವಸೆ ಕರಾವಳಿ ಭಾಗದಲ್ಲಿ ಕರ್ನಾಟಕ…
ಬಿಟ್ ಕಾಯಿನ್ ಹಗರಣ : ಹ್ಯಾಕರ್ ಶ್ರೀಕಿ ಹಾಗೂ ರಾಬಿನ್ ಖಂಡೇವಾಲ ಜಾಮೀನು ಅರ್ಜಿ ವಜಾ ಬೆಂಗಳೂರು: ಬಿಟ್ ಕಾಯಿನ್…
ಬಪ್ಪನಾಡು ದ್ವಾರ ಸ್ಥಳಾಂತರ ಕಾಮಗಾರಿ ವೀಕ್ಷಿಸಿದ ಎ.ಜೆ. ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮಂಗಳೂರು:ರಾಷ್ಟ್ರೀಯ ಹೆದ್ದಾರಿ-66ರ ವಿಸ್ತರಣೆಯ…
ನಾಗೇಂದ್ರ ಅವರು ಯಾವುದೇ ತಪ್ಪು ಮಾಡಿಲ್ಲ, ಅವರು ಒಬ್ಬ ನಿರಪರಾಧಿ .. ನಾಗೇಂದ್ರ ಅವರ ವಿರುದ್ಧ ಬಿಜೆಪಿ ನಡೆದುಕೊಂಡ ರೀತಿ…
ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಚಿನ್ನ-ಬೆಳ್ಳಿಯ ಪ್ರಭಾವಳಿ ಅರ್ಪಿಸಿದ ರಾಜೇಶ್ ಶೆಟ್ಟಿ ದಂಪತಿ ಮಂಗಳೂರು : ಶ್ರೀ ಕ್ಷೇತ್ರ ಕಟೀಲು…